Advt. 
 Views   353
Jan 19 2025 10:49PM

ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ


ಕೊಪ್ಪಳ : ಶಿಕ್ಷಕ ಸಾಹಿತಿ ಕಲಾವಿದ ಸುರೇಶ ಕಂಬಳಿ ಸಾಹಿತ್ಯ ನೀಡಿರುವ ' ರಾವುತ ' ಕನ್ನಡ ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ರವಿವಾರ ಕೊಪ್ಪಳದಲ್ಲಿ ಜರುಗಿತು. ರಾವುತ ಸಿನಿಮಾ ಇದೇ ತಿಂಗಳು 31 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಕಲರವ ಶಿಕ್ಷಕರ ತಂಡ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. 

ಮನುಷ್ಯರಿಗೆ  ಭೂಮಿಗೆ ಬರುವ ಎಂಟ್ರಿ ಗೊತ್ತು   ಎಕ್ಸಿಟ್ ಆಗುವ ನಡುವೆ ಬದುಕು ಇರುತ್ತೆ ಆದರೆ ಮನುಷ್ಯರ ಎಕ್ಸಿಟ್ ನಂತರ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ ಆದರೆ ಉತ್ತರ ಯಾರಿಗೂ ಗೊತ್ತಿಲ್ಲ. ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಸಿನಮಾ ಕ್ಲೈಮ್ಯಾಕ್ಸ್ ನಲ್ಲಿ  ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ಮಾವುತ ಸಿನಿಮಾ ನಿರ್ದೇಶಕ ಸಿದ್ದು ವಜ್ರಪ್ಪ ಹೇಳಿದರು.

ಕೊಪ್ಪಳ ತಾಲೂಕು ಜಬ್ಬಲಗುಡ್ಡ ಬಳಿ ಆಳ್ವಿಕೆ ನಡೆಸಿದ್ದ ಗಂಡುಗಲಿ ಕುಮಾರರಾಮನ ಕಾಲಘಟ್ಡ ಮತ್ತು ಅದೇ ಪ್ರದೇಶದಿಂದ ಆರಂಭವಾಗುವ ಈ  ಕತೆ ಅತ್ತ ಆಂಧ್ರ ಇತ್ತ ಗದಗವರೆಗೂ ಸಾಗುತ್ತದೆ. ಹಾಗಾಗಿ  ಕನಕಗಿರಿ ಜಬ್ಬಲಗುಡ್ಡ ಮುಕ್ಕುಂಪಿ ಪ್ರದೇಶದಲ್ಲಿ ಹೆಚ್ಚು ಈ ಸಿನಿಮಾ ಶೂಟಿಂಗ್ ಮಾಡಿದ್ದು  ಉತ್ತರ ಕರ್ನಾಟಕದ ಭಾಷಾ ಸೊಗಡು ಈ ಸಿನಿಮಾದಲ್ಲಿದೆ ಎಂದರು ನಿರ್ದೇಶಕರು.

ಸಿನಿಮಾ ನಿರ್ದೇಶಕರು ಕನಕಗಿರಿಯ ಮಾದಿನಾಳನವರು. ನಿರ್ಮಾಪಕರು ಈರಣ್ಣ ಬಡಿಗೇರ ಇಳಕಲ್ ನವರು. ರಾವುತ ಅಂದ್ರೆ ಕುದುರೆ ಪಳಗಿಸುವವನು ಎಂದರ್ಥ.

ಸಾಹಿತಿ ಸುರೇಶ ಕಂಬಳಿ ಈ ಸಿನಿಮಾದ ಎಲ್ಲ ಹಾಡುಗಳನ್ನು ರಚಿಸಿದ್ದಾರೆ. ಅವರು ರಚಿಸಿರುವ ಒಂದು ಹಾಡಿನ ಸಾಲು ಕುಣಿದಾಡುವ ನೆಲಕ್ಕಿಂತ ಕುಣಿ ಚಿಕ್ಕದು...ಮನಸೆಳೆಯುತ್ತದೆ.

ರಾವುತ ಸಿನಿಮಾ ತಂಡ ಹಾಗೂ ಕಲರವ ಶಿಕ್ಷಕರ ಬಳಗದ ಸದಸ್ಯರು ಹಾಜರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ





     
Copyright © 2021 Agni Divya News. All Rights Reserved.
Designed & Developed by We Make Digitize