Advt. 
 Views   249
Jan 19 2025 10:49PM

ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ


ಕೊಪ್ಪಳ : ಶಿಕ್ಷಕ ಸಾಹಿತಿ ಕಲಾವಿದ ಸುರೇಶ ಕಂಬಳಿ ಸಾಹಿತ್ಯ ನೀಡಿರುವ ' ರಾವುತ ' ಕನ್ನಡ ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ರವಿವಾರ ಕೊಪ್ಪಳದಲ್ಲಿ ಜರುಗಿತು. ರಾವುತ ಸಿನಿಮಾ ಇದೇ ತಿಂಗಳು 31 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಕಲರವ ಶಿಕ್ಷಕರ ತಂಡ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. 

ಮನುಷ್ಯರಿಗೆ  ಭೂಮಿಗೆ ಬರುವ ಎಂಟ್ರಿ ಗೊತ್ತು   ಎಕ್ಸಿಟ್ ಆಗುವ ನಡುವೆ ಬದುಕು ಇರುತ್ತೆ ಆದರೆ ಮನುಷ್ಯರ ಎಕ್ಸಿಟ್ ನಂತರ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ ಆದರೆ ಉತ್ತರ ಯಾರಿಗೂ ಗೊತ್ತಿಲ್ಲ. ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಸಿನಮಾ ಕ್ಲೈಮ್ಯಾಕ್ಸ್ ನಲ್ಲಿ  ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ಮಾವುತ ಸಿನಿಮಾ ನಿರ್ದೇಶಕ ಸಿದ್ದು ವಜ್ರಪ್ಪ ಹೇಳಿದರು.

ಕೊಪ್ಪಳ ತಾಲೂಕು ಜಬ್ಬಲಗುಡ್ಡ ಬಳಿ ಆಳ್ವಿಕೆ ನಡೆಸಿದ್ದ ಗಂಡುಗಲಿ ಕುಮಾರರಾಮನ ಕಾಲಘಟ್ಡ ಮತ್ತು ಅದೇ ಪ್ರದೇಶದಿಂದ ಆರಂಭವಾಗುವ ಈ  ಕತೆ ಅತ್ತ ಆಂಧ್ರ ಇತ್ತ ಗದಗವರೆಗೂ ಸಾಗುತ್ತದೆ. ಹಾಗಾಗಿ  ಕನಕಗಿರಿ ಜಬ್ಬಲಗುಡ್ಡ ಮುಕ್ಕುಂಪಿ ಪ್ರದೇಶದಲ್ಲಿ ಹೆಚ್ಚು ಈ ಸಿನಿಮಾ ಶೂಟಿಂಗ್ ಮಾಡಿದ್ದು  ಉತ್ತರ ಕರ್ನಾಟಕದ ಭಾಷಾ ಸೊಗಡು ಈ ಸಿನಿಮಾದಲ್ಲಿದೆ ಎಂದರು ನಿರ್ದೇಶಕರು.

ಸಿನಿಮಾ ನಿರ್ದೇಶಕರು ಕನಕಗಿರಿಯ ಮಾದಿನಾಳನವರು. ನಿರ್ಮಾಪಕರು ಈರಣ್ಣ ಬಡಿಗೇರ ಇಳಕಲ್ ನವರು. ರಾವುತ ಅಂದ್ರೆ ಕುದುರೆ ಪಳಗಿಸುವವನು ಎಂದರ್ಥ.

ಸಾಹಿತಿ ಸುರೇಶ ಕಂಬಳಿ ಈ ಸಿನಿಮಾದ ಎಲ್ಲ ಹಾಡುಗಳನ್ನು ರಚಿಸಿದ್ದಾರೆ. ಅವರು ರಚಿಸಿರುವ ಒಂದು ಹಾಡಿನ ಸಾಲು ಕುಣಿದಾಡುವ ನೆಲಕ್ಕಿಂತ ಕುಣಿ ಚಿಕ್ಕದು...ಮನಸೆಳೆಯುತ್ತದೆ.

ರಾವುತ ಸಿನಿಮಾ ತಂಡ ಹಾಗೂ ಕಲರವ ಶಿಕ್ಷಕರ ಬಳಗದ ಸದಸ್ಯರು ಹಾಜರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Feb 9 2025 11:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೈಕ್ ಗಳ ಅಪಘಾತ ಓರ್ವ ಸಾವು
Feb 8 2025 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಏನೇ ಬದಲಾವಣೆ ನಿರ್ಧಾರ ಹೈಕಮಾಂಡ್ ಮಾಡಲಿದೆ : ಸಚಿವ ರಾಜಣ್ಣ
Feb 8 2025 8:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಪಾಸಣೆ ನೆಪದಲ್ಲಿ RTO - ಸಿಬ್ಬಂದಿ ಕಿರಿಕ್ : ಲಾರಿ ಡ್ರೈವರ್ ಪ್ರತಿಭಟನೆ
Feb 8 2025 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದೆಹಲಿ ಸ್ಥಿತಿ ಕರ್ನಾಟಕ ಕಾಂಗ್ರೆಸ್ ಗೂ ಬರಲಿದೆ : ಡಾ. ಬಸವರಾಜ
Feb 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತ ವಿರೋಧಿ ಮೂರು ಕಾಯ್ದೆ ವಾಪಸ್ ಪಡೆಯದ ರಾಜ್ಯ ಸರಕಾರ
Feb 6 2025 8:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಲಿ
Feb 5 2025 10:20PM | ವೈವಿಧ್ಯ | ವಿಷ್ಮಯ ಡಾ ಸಿದ್ದರಾಮ ಹೊನ್ಕಲ್ ಸಮಗ್ರ ಗಜಲ್ ಕೃತಿ ಕುರಿತು ಬರಹ
Feb 5 2025 8:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಲಾರಿ ಡಿಕ್ಕಿ ಬೈಕ್ ಸವಾರ ಸಾವು
Feb 5 2025 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ದೇವಸ್ಥಾನ ಬಳಿ ನವಜಾತ ಶಿಶು ಪತ್ತೆ
Feb 4 2025 10:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಂಭಮೇಳಕ್ಕೆ ತೆರಳಿದ್ದ ಯುವಕ ಸಾವು





     
Copyright © 2021 Agni Divya News. All Rights Reserved.
Designed & Developed by We Make Digitize