Advt. 
 Views   550

ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು

Jul 11, 2025, 07:55 PM IST
ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು

ಕೊಪ್ಪಳ : ಹುಬ್ಬಳ್ಳಿ - ಸಿಂಧನೂರು ನಡುವೆ ಮತ್ತೊಂದು ಹೊಸ ರೈಲು ಸಂಚಾರ ಆರಂಭವಾಗಲಿದೆ. ಬೆಂಗಳೂರಿನ KSR ನಿಲ್ದಾಣದಿಂದ  ಹುಬ್ಬಳ್ಳಿ SSS  ನಿಲ್ದಾಣಗಳ ನಡುವೆ  ಸಂಚರಿಸುತ್ತಿರುವ ಎಕ್ಸ್ ಪ್ರೆಸ್ ರೈಲು  (17391/17392) ಸಿಂಧನೂರಿನವರೆಗೆ ವಿಸ್ತರಣೆ ಆಗುತ್ತಿದೆ. 

ಈ ಮೂಲಕ ಹುಬ್ಬಳ್ಳಿ - ಸಿಂಧನೂರು ನಡುವೆ ಹೊಸ ರೈಲು ಇದೇ ಜುಲೈ 12 ರಿಂದ ಸಂಚಾರ ಆರಂಭವಾಗಲಿದ್ದು ಸಿಂಧನೂರಿನಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು ಸಂಚಾರ ಸೇವೆ ದೊರೆತಂತೆ ಆಗುತ್ತಿದೆ.

ರೈಲು ಸಂಖ್ಯೆ 17392, ಜುಲೈ 12, 2025 ರಿಂದ ಸಿಂಧನೂರಿನಿಂದ ಸಂಚಾರ ಆರಂಭಿಸಲಿದೆ. ಸಿಂಧನೂರಿನಿಂದ ಮಧ್ಯಾಹ್ನ 13:30 ಗಂಟೆಗೆ ಹೊರಟು ಗೋರೆಬಾಳ 13:38, ಕಾರಟಗಿ 13:49, ಸಿದ್ಧಾಪುರ ಗ್ರಾಮ 14:07, ಗಂಗಾವತಿ 14:26, ಗಿಣಿಗೇರಾ 15:29, ಕೊಪ್ಪಳ 15:43, ಭಾಣಾಪುರ 15:54 ,  ತಳಕಲ್ 15:59, ಗದಗ 16:40, ಅಣ್ಣಿಗೇರಿ 17:04, ಶಿಶ್ವಿನಹಳ್ಳಿ 17:15 , ಹುಬ್ಬಳ್ಳಿಗೆ 18:10 ಕ್ಕೆ ಆಗಮಿಸಿ, 18:45 ಗಂಟೆಗೆ ಕೆಎಸ್ಆರ್ ಬೆಂಗಳೂರು ಕಡೆ ಹೊರಡುತ್ತದೆ.
-----------
ಅದೇ ರೀತಿ, ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಜುಲೈ 13, 2025 ರಿಂದ ಸಿಂಧನೂರಿಗೆ ಸಂಚಾರ ಆರಂಭಿಸಲಿದ್ದು ಈ ರೈಲು  ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೆಳಗ್ಗೆ 9:20 ಕ್ಕೆ ಆಗಮಿಸಿ, 9:30 ಕ್ಕೆ ಹೊರಡುತ್ತದೆ.  ಶಿಶ್ವಿನಹಳ್ಳಿ 09:51, ಅಣ್ಣಿಗೇರಿ 10:04, ಗದಗ 10:33, ತಳಕಲ್ 11:09, ಭಾಣಾಪುರ 11:15, ಕೊಪ್ಪಳ 11:33, ಗಿಣಿಗೇರಾ 11:46, ಗಂಗಾವತಿ 12:52, ಸಿದ್ಧಾಪುರ 13:15, ಕಾರಟಗಿ 13:34, ಗೋರೆಬಾಳ 13:44,  ಸಿಂಧನೂರಿಗೆ 14:20 ಕ್ಕೆ ತಲುಪುತ್ತದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize