Advt. 
 Views   550

ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ

Jul 09, 2025, 07:45 PM IST
ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ

ಕೊಪ್ಪಳ : ಗ್ರಾಮೀಣ ಅಂಚೆ ನೌಕರರು ಹಾಗೂ ಪೋಸ್ಟ್ ಮ್ಯಾನ್ ಹಾಗೂ ಎಂಟಿಎಸ್ ನೌಕರರು ಇಂದು ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಒಂದು ದಿನದ ಧರಣಿ ನಡೆಸಿದರು. 

ಉದ್ದೇಶಿತ ಪೋಸ್ಟಲ್ ಬಿಲ್ - 2023 ವಾಪಸ್ ಪಡೆಯಬೇಕು GDS ನೌಕರರನ್ನು 8ನೇ ವೇತನ ಆಯೋಗಕ್ಕೆ ಸೇರಿಸಬೇಕು GDS ನೌಕರರಿಗೆ 8 ಗಂಟೆ ಕೆಲಸ ನಿಗದಿ ಮಾಡಿ ನೌಕರಿ ಖಾಯಂಗೊಳಿಸಬೇಕು old pension scheme ಜಾರಿಗೊಳಿಸಬೇಕು ಹಲವು ಕಚೇರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು  ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಆರ್ ಎಂ ಎಸ್ ಕಚೇರಿಗಳನ್ನು ಮುಚ್ಚುವುದು ಕೈ ಬಿಡಬೇಕು  ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿದರು.

ಈಗ ಬರುತ್ತಿರುವ ಹೊಸ ನಿಯಮಗಳು ಕೋಟ್ಯಾಂತರ ನೌಕರರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸುತ್ತಿರುವ ಕಾಯ್ದೆಗಳು ಜಾರಿಯಾದರೆ ನಮ್ಮ ಪಾಲಿಗೆ ಮರಣ ಶಾಸನ ಆಗಲಿವೆ ಎಂದು ಧರಣಿಯಲ್ಲಿ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಒಂದು ದಿನದ ಈ ಮುಷ್ಕರದಲ್ಲಿ ಪೋಸ್ಟ್ ಮ್ಯಾನ್ , ಎಂಟಿಎಸ್ ಗ್ರುಪ್ ಗ್ರಾಮೀಣ ಅಂಚೆ ನೌಕರರ ರಾಜ್ಯ ಉಪಾಧ್ಯಕ್ಷರು ಬಸವರಾಜ ಗುರಿಕಾರ, ಹಾಗೂ ಬುದ್ದಿವಂತಪ್ಪ ಕೊಪ್ಪಳ ಡಿವಿಜನ್ ಅಂಚೆ ಅಧ್ಯಕ್ಷರು,  ಬಸವರಾಜ ಸಾಲಿಮಠ, ಕಾರ್ಯದರ್ಶಿ ನೀಲಕಂಠಪ್ಪ ಖಜಾಂಚಿ, ಮಹಾಂತೇಶಪ್ಪ ರಾಮಣ್ಣ ವಿದ್ಯಾಧರ ಸೊಪ್ಪಿಮಠ, ಮಲ್ಲಪ್ಪ ಪಾಟೀಲ್, ಅಶೋಕ ಮಲ್ಲಣ್ಣ, ಅನಿಲ ಚಾಕ್ರಿ , ಯಲ್ಲಪ್ಪ ಸಂಗಟಿ, ಬಸವರಾಜ ತಲೆಖಾನ, ಜಿ.ಎನ್.ಹಳ್ಳಿ ಬಿ.ಜಿ‌. ದ್ರಾಕ್ಷಿ  ಹಾಗೂ ಅಂಚೆ ನಿವೃತ್ತ  ನೌಕರರಾದ ರವಿ ಕಾಂತನವರ, ವೈ ವೈ ಕೊಳೂರು ಇತರರು ಭಾಗವಹಿಸಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jun 11 2026 12:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್
Jun 9 2026 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು
Jun 9 2026 6:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ : ಗಾಣಿಗ ಸಂಘ ಒತ್ತಾಯ
Jun 7 2026 6:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ ಪಕ್ಷಕ್ಕೆ ಬನ್ನಿ : ಬಿಜೆಪಿ-ಜೆಡಿಎಸ್ ನಾಯಕರ ಆಹ್ವಾನ
Jun 7 2026 11:57AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು
Jun 6 2026 7:46PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಚಿವ ಸ್ಥಾನಕ್ಕೆ ಹೋರಾಟ ಸಭೆಯಲ್ಲಿ ಭಿನ್ನಮತ
Jun 6 2026 8:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಷರಾಭ್ಯಾಸ ಮಕ್ಕಳ ಉಜ್ವಲ ಭವಿಷ್ಯದ ಮೊದಲ ಹೆಜ್ಜೆ
Jun 5 2026 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಮೀರ್ ಪರ ಡಿಸಿಎಂ ಸ್ಥಾನಕ್ಕಾಗಿ ಆಗ್ರಹ
Jun 4 2026 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪೊಲೀಸ್ ಠಾಣೆ, ಪುರಸಭೆಗೆ ಕೆಆರ್‌ಎಸ್ ಪಕ್ಷ ಮನವಿ
Jun 4 2026 5:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !




Copyright © 2026 Agni Divya. All Rights Reserved.
Designed & Developed by We Make Digitize