Advt. 
 Views   561
Dec 8 2024 12:43AM

ಕೊಪ್ಪಳ : ಎರಡು ಕಡೆ ಸಚಿವರ ಕಾರಿಗೆ ತಡೆ


ಶನಿವಾರ ಕೊಪ್ಪಳದಲ್ಲಿ ಕೆಡಿಪಿ ಸಭೆ ಹಾಗೂ ಕೊಪ್ಪಳ-ಕಿನ್ನಾಳ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ್ ತಂಗಡಗಿ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಸಲ ಜನರಿಂದ ತಡೆ ಎದುರಿಸಿದರು.

ಆದರೆ ಎರಡು ಕಡೆ ಅವರು ಕಾರಿನಿಂದ ಇಳಿಯದೆ ಕ್ಯಾರೆ ಎನ್ನಲಿಲ್ಲ.  

ಕನಕಗಿರಿ ಯಿಂದ ಸರ್ಕ್ಯೂಟ್ ಹೌಸ್ ಗೆ ಬಂದ ಸಚಿವರು ಅಲ್ಲಿಂದ ಭಾಗ್ಯನಗರ ಕ್ರಾಸ್ ಹತ್ತಿರ  ಕೊಪ್ಪಳ - ಕಿನ್ನಾಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ತೆರಳುವಾಗ ಟೀಚರ್ಸ್ ಕಾಲೋನಿ ಹತ್ತಿರ ಮಹಿಳೆಯರು ಕೈ ಹಿಡಿದು ರಸ್ತೆಗೆ ಅಡ್ಡ ನಿಂತಿದ್ದರು. ಇಂಥ ಅನಿರೀಕ್ಷಿತ ಸಂದರ್ಭದಿಂದ ಕ್ಷಣ ಕಾಲ ಏನೂ ಅರ್ಥ ಆಗದ ಸ್ಥಿತಿ. 

ಆಗ ಸಚಿವರ ಕಾರಿನಿಂದ ಶಾಸಕ ರಾಘವೇಂದ್ರ ಹಿಟ್ನಾಳ ಇಳಿದು ಬಂದರು.  ಮಹಿಳೆಯರು ಸಮಸ್ಯೆ ಹೇಳಿಕೊಳ್ಳುವ ಮುಂಚೆ ಶಾಸಕರು ಆಯ್ತು ಎಂದು ಸಿಡುಕಿದರು.  ಇತ್ತ ಶಾಸಕರು ಮಹಿಳೆಯರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಅತ್ತ ಸಚಿವರ ಕಾರಿನ ಗ್ಲಾಸ್ ಏರಿತು.

ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಸ್ಥಳಕ್ಕೆ ಬನ್ನಿ ಎಂದು ಮಹಿಳೆಯರಿಗೆ ಹೇಳಿ ಸಚಿವರ ಕಾರಿನಲ್ಲಿ  ಹೋದರು.  

ಮಹಿಳೆಯರ ಆಕ್ರೋಶ ಅಂದ್ರೆ ಟೀಚರ್ಸ್ ಕಾಲೋನಿ ಹತ್ತಿರದ ಡಂಬಳ ಕಾಲೋನಿಯಲ್ಲಿ ಖಾಸಗಿಯವರ ಶುದ್ಧ ಕುಡಿಯುವ ನೀರಿನ ಘಟಕದ ನೀರು ರಸ್ತೆಗೆ ಬರುತ್ತಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಈ ಸಮಸ್ಯೆಗೆ ಶಾಸಕ, ಸಂಸದರು, ಪಟ್ಟಣ ಪಂಚಾಯತಗೆ ಹೇಳಿದರೂ ಬಗೆಹರಿದಿಲ್ಲ. ಹಾಗಾಗಿ ಇಂದು ಸಚಿವರ ಕಾರಿಗೆ ತಡೆ ಒಡ್ಡಿ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ ಎಂದು ಮಹಿಳೆಯರು ಹೇಳಿದರು.

ರಸ್ತೆ ಕಾಮಗಾರಿ ಭೂಮಿ ಪೂಜೆ ನಂತರ ವಾಪಸ್ ಅದೇ ರಸ್ತೆಯಲ್ಲಿ ಸಚಿವರು ಬರುವಾಗ ಅಂಡರ್ ಪಾಸ್ ನಲ್ಲಿ ರಸ್ತೆ ಕಿತ್ತು ಹೋಗಿದ್ದರಿಂದ  ತಿಂಗಳಿಗೆ ಹಲವಾರು ಜನ ತೊಂದರೆಗೆ ಈಡಾಗುತ್ತಿದ್ದಾರೆ ಇದನ್ನ ಅನೇಕ ಬಾರಿ ನಗರಸಭೆಗೆ ಶಾಸಕರ ಗಮನಕ್ಕೆ ತಂದರು ಸಮಸ್ಯೆ ಪರಿಹಾರ ಆಗಿಲ್ಲ. ಅದಕ್ಕೆ  ಸಚಿವರ ಗಮನ ಸೆಳೆಯಲು ಸಮಾಜ ಸೇವಕ ಶಫೀಕ್ ಕೊಟ್ಟೂರು, ಇಬ್ರಾಹಿಂ ಪಟೇಲ್, ಕರಿಂ ಪಾಷಾ ಗಚ್ಚಿನಮನಿ,  ಸಲೀಂ ಖಾದ್ರಿ ಸೇರಿದಂತೆ ಅನೇಕರು ಅಂಡರ್ ಪಾಸ್ ನಲ್ಲಿ ಸಚಿವರಿಗೆ ಮನವಿ ಮಾಡಿ  ತಡೆದರು.

ಸಚಿವರಿಗೆ ಸಮಸ್ಯೆ  ಹೇಳಿ ಸ್ಥಳ ನೋಡಲು ಕರೆದರು. ಆದರೆ ಕ್ಯಾರೆ ಎನ್ನದ ಸಚಿವರು ಕಾರಿನಿಂದ ಇಳಿಯಲಿಲ್ಲ. 

ಸಚಿವರ ಕಾರಿನಲ್ಲೇ ಇದ್ದ ಶಾಸಕ ರಾಘವೇಂದ್ರ ಹಿಟ್ನಾಳ ಆಯ್ತು ಸಮಸ್ಯೆ ಬಗೆಹರಿಸೋಣ ಅಂತ ಸಿಡುಕಿದರು ಎಂದು ತಿಳಿದು ಬಂದಿದೆ.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ





     
Copyright © 2021 Agni Divya News. All Rights Reserved.
Designed & Developed by We Make Digitize