ಕೊಪ್ಪಳ : ಮಹಾರಾಷ್ಟ್ರದ ಪುಣೆಯಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ 15 ಲಕ್ಷ ಬೆಲೆಯ ಅಭರಣ ಮತ್ತು ವಸ್ತುಗಳ ಬ್ಯಾಗ್ ಮಾಲಿಕರಿಗೆ ಮರಳಿಸಿ ಚಾಲಕ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಘಟನೆ ಜೂನ್ 24 ರಂದು ಜರುಗಿದೆ.
ಬ್ಯಾಗ್ ಮರೆತು ಹೋದವರು, ಬ್ತಾಗ್ ಮರಳಿಸಿದ ಚಾಲಕ ನಿರ್ವಾಹಕ ಕೊಪ್ಪಳದವರು.
ಕೊಪ್ಪಳದ ರವೀಂದ್ರ ಮೆಡಿಕಲ್ಸ್ ನವರ ಕುಟುಂಬ ಜೂನ್ 24 ರಂದು ಕೊಪ್ಪಳ - ಪುಣೆ ಬಸ್ ನಲ್ಲಿ ಪುಣೆಗೆ ಪ್ರಯಾಣಿಸಿತ್ತು. ಆ ಬಸ್ ಚಾಲಕರಾಗಿ ಚರ್ಲಿಂಗಪ್ಪ, ನಿರ್ವಾಹಕರಾಗಿ ಸಂಗನಗೌಡ ಪಾಟೀಲ್ ಕರ್ತವ್ಯದಲ್ಲಿದ್ದರು.
ಬಸ್ ಪುಣೆ ತಲುಪಿದಾಗ ರಮೇಶ ಮೇಡಿಕಲ್ಸ್ ನವರ ಕುಟುಂಬ ಮರೆತು ಆಭರಣದ ಬ್ಯಾಗ್ ಬಸ್ ನಲ್ಲಿ ಬಿಟ್ಟು ಇಳಿದು ಆಟೋದಲ್ಲಿ ಮನೆಗೆ ಪ್ರಯಾಣಿಸುವಾಗ ಬ್ಯಾಗ್ ಇಲ್ಲದ್ದು ಕಂಡಿದೆ.
ಕೂಡಲೇ ಸಂಪರ್ಕಿಸಿದಾಗ ಚರ್ಲಿಂಗಪ್ಪ , ಸಂಗನಗೌಡ ಪಾಟೀಲ್, ಆಭರಣಗಳ ಬ್ಯಾಗ್ ಮರಳಿಸಿದ್ದಾರೆ.
ಬ್ಯಾಗ್ ಮರಳಿ ಪಡೆದ ರಮೇಶ ಮೆಡಿಕಲ್ಸ್ ಕುಟುಂಬದವರು ಜೂನ್ 27 ರಂದು ಕೊಪ್ಪಳ ಡೀಪೋಗೆ ಬಂದು ಇಬ್ಬರಿಗೂ ಸನ್ಮಾನಿಸಿ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.