Advt. 
 Views   1484
Jan 30 2023 12:05AM

ದಿ. ಶಾಂತಾದೇವಿ ಹಿರೇಮಠ ಅವರ ಪ್ರಥಮ ಪುಣ್ಯಸ್ಮರಣೆ


ಅದೇನೋ ಅವ್ಯಕ್ತ ಆತಂಕ ಭಾವನೆಗಳು
ಕಣ್ಣರಿಯದಿದ್ದರೂ ಚುರುಗುಟ್ಟಿತು ಕರುಳು
ಮುಂಬರುವ ಸಂಕಟದ ಮುನ್ಸೂಚನೆಗಳು
ತಾಯಿಮಗಳ ಕರುಳಬಳ್ಳಿ ಕತ್ತರಿಸಬಹುದೆ ?

ಹೆತ್ತು ಹಾಲುಣಿಸದಿದ್ದರೂ ತುತ್ತಿಟ್ಟವಳು
ಹೊತ್ತು ಲಾಲಿಸದಿದ್ದರೂ ಹೊತ್ತಿಗಾದವಳು
ಮಧುರ ನೆನಪುಗಳ ಉಡಿ ತುಂಬಿದವಳು
ತಾಯಿಮಗಳ ಬಾಂಧವ್ಯಬಳ್ಳಿ ಬಾಡಬಹುದೆ ?

ಪುಟ್ಟ ಹೃದಯವನು ಜೇನಲದ್ದಿದವಳು
ದಿಟ್ಟತನದಿ ಬದುಕಿ  ದಿಕ್ಕು ತೋರಿದವಳು
ಅವರಿವರೆನ್ನದೆ  ಒಪ್ಪಿಅಪ್ಪಿದ ಗುಣದವಳು
ತಾಯಿಮಗಳ ಸ್ನೇಹದಬಳ್ಳಿ ಒಣಗಬಹುದೆ ?

ಕಾಲನಕರೆಯ ಮುನ್ನವೇ ಸ್ವಾಗತಿಸಿದವಳು
ದೇಹದಾನವ ಮಾಡಿ ಮಾದರಿಯಾದವಳು                             
ಅಕ್ಕರದಿ ಅಕ್ಷರಗಳನು ಉಸಿರಾಡಿದವಳು
ತಾಯಿಮಗಳ ಅರಿವಿನಬಳ್ಳಿ ಮುರಟಬಹುದೆ ?

ಸುಟ್ಟ ಬತ್ತಿಯನೇ ಮತ್ತೆಮತ್ತೆ ಹೊಸೆದವಳು
ತಾನುರಿದು ನಂದಾದೀಪವಾಗಿ ಬೆಳಗಿದವಳು
ಬಾಳಸಂಜೆಯ ಪಯಣದಿ ಶಾಂತವಾದವಳು
ತಾಯಿಮಗಳ ಪ್ರೀತಿಬಳ್ಳಿ ಮತ್ತೆ ಚಿಗುರದಿರಬಹುದೆ !

- ಶ್ರೀಮತಿ ವಿಜಯಲಕ್ಷ್ಮಿ ಕೊಟಗಿ

   ಮೊ :  9632240787.
( ದಿ. ಶಾಂತಾದೇವಿ ಹಿರೇಮಠರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನುಡಿನಮನ)



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize