Advt. 
 Views   4221
Jan 30 2023 12:05AM

ದಿ. ಶಾಂತಾದೇವಿ ಹಿರೇಮಠ ಅವರ ಪ್ರಥಮ ಪುಣ್ಯಸ್ಮರಣೆ


ಅದೇನೋ ಅವ್ಯಕ್ತ ಆತಂಕ ಭಾವನೆಗಳು
ಕಣ್ಣರಿಯದಿದ್ದರೂ ಚುರುಗುಟ್ಟಿತು ಕರುಳು
ಮುಂಬರುವ ಸಂಕಟದ ಮುನ್ಸೂಚನೆಗಳು
ತಾಯಿಮಗಳ ಕರುಳಬಳ್ಳಿ ಕತ್ತರಿಸಬಹುದೆ ?

ಹೆತ್ತು ಹಾಲುಣಿಸದಿದ್ದರೂ ತುತ್ತಿಟ್ಟವಳು
ಹೊತ್ತು ಲಾಲಿಸದಿದ್ದರೂ ಹೊತ್ತಿಗಾದವಳು
ಮಧುರ ನೆನಪುಗಳ ಉಡಿ ತುಂಬಿದವಳು
ತಾಯಿಮಗಳ ಬಾಂಧವ್ಯಬಳ್ಳಿ ಬಾಡಬಹುದೆ ?

ಪುಟ್ಟ ಹೃದಯವನು ಜೇನಲದ್ದಿದವಳು
ದಿಟ್ಟತನದಿ ಬದುಕಿ  ದಿಕ್ಕು ತೋರಿದವಳು
ಅವರಿವರೆನ್ನದೆ  ಒಪ್ಪಿಅಪ್ಪಿದ ಗುಣದವಳು
ತಾಯಿಮಗಳ ಸ್ನೇಹದಬಳ್ಳಿ ಒಣಗಬಹುದೆ ?

ಕಾಲನಕರೆಯ ಮುನ್ನವೇ ಸ್ವಾಗತಿಸಿದವಳು
ದೇಹದಾನವ ಮಾಡಿ ಮಾದರಿಯಾದವಳು                             
ಅಕ್ಕರದಿ ಅಕ್ಷರಗಳನು ಉಸಿರಾಡಿದವಳು
ತಾಯಿಮಗಳ ಅರಿವಿನಬಳ್ಳಿ ಮುರಟಬಹುದೆ ?

ಸುಟ್ಟ ಬತ್ತಿಯನೇ ಮತ್ತೆಮತ್ತೆ ಹೊಸೆದವಳು
ತಾನುರಿದು ನಂದಾದೀಪವಾಗಿ ಬೆಳಗಿದವಳು
ಬಾಳಸಂಜೆಯ ಪಯಣದಿ ಶಾಂತವಾದವಳು
ತಾಯಿಮಗಳ ಪ್ರೀತಿಬಳ್ಳಿ ಮತ್ತೆ ಚಿಗುರದಿರಬಹುದೆ !

- ಶ್ರೀಮತಿ ವಿಜಯಲಕ್ಷ್ಮಿ ಕೊಟಗಿ

   ಮೊ :  9632240787.
( ದಿ. ಶಾಂತಾದೇವಿ ಹಿರೇಮಠರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನುಡಿನಮನ)



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ





     
Copyright © 2021 Agni Divya News. All Rights Reserved.
Designed & Developed by We Make Digitize