Advt. 
 Views   563
Jan 24 2025 4:46PM

ಕೊಪ್ಪಳ : ಚಾಲಕರ ದಿನ 46 ಚಾಲಕರಿಗೆ ಪ್ರಶಂಸಾ ಪತ್ರ ನಗದು ಪುರಸ್ಕಾರ


ಕೊಪ್ಪಳ : ಸಾರಿಗೆ ಸಂಸ್ಥೆಯ 'ಚಾಲಕರ ದಿನ' ವನ್ನು ಶುಕ್ರವಾರ ಬಸ್ ನಿಲ್ದಾಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಡಿವೈಎಸ್ಪಿ ಮುತ್ತಣ್ಣ ಸರವಗೋಳ ಚಾಲನೆ ನೀಡಿ ಉತ್ತಮ ಮತ್ತು ಸುರಕ್ಷೀತ ಚಾಲನೆಗೆ ಹೆಸರಾದ ಸಂಸ್ಥೆಯ ಚಾಲಕರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. 

ಇದೇ ಸಂದರ್ಭದಲ್ಲಿ ಕೊಪ್ಪಳ ಸಾರಿಗೆ ವಿಭಾಗದಲ್ಲಿ 2024 ರಲ್ಲಿ 300 ಕ್ಕೂ ಹೆಚ್ಚು ದಿನ ಚಾಲನಾ ಕರ್ತವ್ಯ ನಿರ್ವಹಿಸಿದ ಎಂ.ಡಿ.ಶೇಕ್ ಉಸ್ಮಾನ್, ಅಶೋಕ ಡೊಳ್ಳಿನ, ಉಮೇಶ ಗೌಡ ಸೇರಿದಂತೆ 46 ಚಾಲಕರಿಗೆ  ಡಿವೈಎಸ್ಪಿ ಮುತ್ತಣ್ಣ ಸರವಗೊಳ ಸಾರಿಗೆ ವಿಭಾಗೀಯ ಕಚೇರಿಯ ಪ್ರಶಂಸಾ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಕೊಪ್ಪಳ ಡಿಪೋ ಮ್ಯಾನೇಜರ್  ರಮೇಶ ಚಿಣಗಿ  ಮಾತನಾಡಿ ನಮ್ಮ ಸಾರಿಗೆ ಸಂಸ್ಥೆಯ ಚಾಲಕರು ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಕಾರ್ಯದಲ್ಲಿ ತೊಡಗಿ ಉಳಿದ ಸಿಬ್ಬಂದಿ ಜೊತೆ ಚಾಲಕರೂ ಸಂಸ್ಥೆಯ ಏಳಿಗೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಭಿನಂದನಾರ್ಹರು ಸಂಸ್ಥೆಯ ಪರವಾಗಿ ಚಾಲಕರಿಗೆ ಅಭಿನಂದನೆಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವೆಂಕಟೇಶ್, ಡಿಟಿಒ ರಾಜೇಂದ್ರ ಜಾಧವ, ಕಾರ್ಮಿಕ ಕಲ್ಯಾಣ ಅಧಿಕಾರಿ ಸತ್ಯನಾರಾಯಣ, ಅಕೌಂಟ್ ಆಫೀಸರ್ ಜಯಶ್ರೀ, ಸಂಚಾರಿ ನಿರೀಕ್ಷಕರು ಕಾವ್ಯ, ನಿಲ್ದಾಣಾಧಿಕಾರಿ ಮಂಜುನಾಥ ಬಂಡಿ,  ಕಂಟ್ರೋಲರ್ ಗಳಾದ ರವೀಂದ್ರ , ಶಾಲೂ ತಾಯಿ, ಅಮೀನಸಾಬ ಕೋಳಿ, ಮಾರುತಿ ದಾಸರ, ಚೆನ್ನಮ್ಮ, ಸಾವಿತ್ರಿ, ಶರಣಮ್ಮ , ಕೊಪ್ಪಳ ಡಿಪೋದ  ನಾಗರಾಜ ನಾಗಿರೆಡ್ಡಿ ಹಾಗೂ  ಸಿಬ್ಬಂದಿ ಉಪಸ್ಥಿತರಿದ್ದರು.
 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ





     
Copyright © 2021 Agni Divya News. All Rights Reserved.
Designed & Developed by We Make Digitize