Advt. 
 Views   47
Jan 21 2025 12:22PM

ಜನೆವರಿ 22 : ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸಮಾರಂಭ


ಕೊಪ್ಪಳ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಾಹಿತ್ಯಶ್ರೀ ಪ್ರಶಸ್ತಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಜನೆವರಿ 22 ಬುಧವಾರ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸಂಜೆ 4 ಗಂಟೆ ಜರುಗಲಿದೆ.

2021 ನೇ ವರ್ಷದ ಅಕಾಡೆಮಿಯ ಪುಸ್ತಕ ದತ್ತಿ ಬಹುಮಾನಕ್ಕೆ ಅಕ್ಷಯ ಕಾಂತಬೈಲು, ಡಾ. ಶ್ರೀಧರ ಎಚ್.ಜಿ, ಸಹನಾ ಕಾಂತಬೈಲು, ಡಾ. ನಾಗ ಎಚ್. ಹುಬ್ಳಿ , ಡಾ. ಪ್ರಸಾದಸ್ಬಾಮಿ ಎಸ್, ಸುಮಂಗಲಾ, ಅಕ್ಷಯ ಪಂಡಿತ್, ಡಾ. ಸುಶಿ ಕಾಡನಕುಪ್ಪೆ ಆಯ್ಕೆಯಾಗಿದ್ದಾರೆ.

2021 ನೇ ವರ್ಷದ ಪುಸ್ತಕ ಬಹುಮಾನಕ್ಕೆ ಚೀಮನಹಳ್ಳಿ ರಮೇಶಬಾಬು, ಡಾ. ಶೈಲೇಶ್ ಕುಮಾರ್, ಡಾ. ಗಜಾನನ ಶರ್ಮ, ಜಿ.ವಿ. ಆನಂದಮೂರ್ತಿ, ಬಿ. ಆರ್ . ಪೊಲೀಸ್ ಪಾಟೀಲ್, ಭಾರತಿ ಬಿ.ವಿ, ಡಾ. ಎಸ್.ಪಿ. ಪದ್ಮಪ್ರಸಾದ್, ಡಾ. ಡೊಮೆನಿಕ್ ಡಿ, ಡಾ. ಎಚ್.ಎಸ್. ಸತ್ಯನಾರಾಯಣ, ಸಿ.ವಿ.ಶೇಷಾದ್ರಿ ಹೊಳವನಹಳ್ಳಿ , ಡಾ. ಕಿರಣ್ ವಿ.ಎಸ್, ಡಾ. ಕೆ.ಎಸ್. ನಾಗರಾಜ, ಡಾ. ಎ. ಎಸ್. ಪ್ರಭಾಕರ, ದಾದಾಪೀರ್ ಜೈಮನ್, ಮುಜಾಫರ್ ಅಸ್ಸಾದಿ, ಡಾ. ಜಿ. ಕೃಷ್ಣಪ್ಪ , ಯಶಸ್ವಿನಿ ಕದ್ರಿ ಆಯ್ಕೆಯಾಗಿದ್ದಾರೆ.

2022 ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಗೆ ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ಡಾ. ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ , ಡಾ. ಅನಸೂಯ ಕಾಂಬಳೆ, ಬಿ. ಮಹೇಶ್ ಹರವೆ, ಎಚ್.ಎನ್.ಆರತಿ, ಚಲಂ ಹಾಡ್ಲಹಳ್ಳಿ , ರೂಮಿ ಹರೀಶ್, ಡಾ. ಸಾರಿಕಾದೇವಿ ಎಲ್. ಕಾಳಗಿ ಆಯ್ಕೆಯಾಗಿದ್ದಾರೆ.

2022 ನೇ ವರ್ಷದ ಗೌರವ ಪ್ರಶಸ್ತಿಗೆ ಪ್ರೊ. ಆರ್. ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ, ತಂಬಾಡಿ ರಾಮಯ್ಯ ಆಯ್ಕೆಯಾಗಿದ್ದು ಈ ಎಲ್ಲ ಮಹನೀಯರಿಗೆ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಜರುಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಪ್ರಸ್ತಾವಿಕ ನುಡಿ ಹೇಳಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರುವರು.

ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಎಲ್.ಎನ್. ಮುಕುಂದರಾಜ್. ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅಕಾಡೆಮಿ ಸದಸ್ಯರು ಅಜಮೀರ ನಂದಾಪುರ, ಡಾ. ಪಿ. ಚಂದ್ರಿಕಾ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Feb 9 2025 11:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೈಕ್ ಗಳ ಅಪಘಾತ ಓರ್ವ ಸಾವು
Feb 8 2025 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಏನೇ ಬದಲಾವಣೆ ನಿರ್ಧಾರ ಹೈಕಮಾಂಡ್ ಮಾಡಲಿದೆ : ಸಚಿವ ರಾಜಣ್ಣ
Feb 8 2025 8:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಪಾಸಣೆ ನೆಪದಲ್ಲಿ RTO - ಸಿಬ್ಬಂದಿ ಕಿರಿಕ್ : ಲಾರಿ ಡ್ರೈವರ್ ಪ್ರತಿಭಟನೆ
Feb 8 2025 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದೆಹಲಿ ಸ್ಥಿತಿ ಕರ್ನಾಟಕ ಕಾಂಗ್ರೆಸ್ ಗೂ ಬರಲಿದೆ : ಡಾ. ಬಸವರಾಜ
Feb 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತ ವಿರೋಧಿ ಮೂರು ಕಾಯ್ದೆ ವಾಪಸ್ ಪಡೆಯದ ರಾಜ್ಯ ಸರಕಾರ
Feb 6 2025 8:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಲಿ
Feb 5 2025 10:20PM | ವೈವಿಧ್ಯ | ವಿಷ್ಮಯ ಡಾ ಸಿದ್ದರಾಮ ಹೊನ್ಕಲ್ ಸಮಗ್ರ ಗಜಲ್ ಕೃತಿ ಕುರಿತು ಬರಹ
Feb 5 2025 8:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಲಾರಿ ಡಿಕ್ಕಿ ಬೈಕ್ ಸವಾರ ಸಾವು
Feb 5 2025 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ದೇವಸ್ಥಾನ ಬಳಿ ನವಜಾತ ಶಿಶು ಪತ್ತೆ
Feb 4 2025 10:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಂಭಮೇಳಕ್ಕೆ ತೆರಳಿದ್ದ ಯುವಕ ಸಾವು





     
Copyright © 2021 Agni Divya News. All Rights Reserved.
Designed & Developed by We Make Digitize