Advt. 
 Views   169
Jun 9 2024 7:44PM

ಕೊಪ್ಪಳ : ರಾಜ್ಯ ಸರಕಾರ ಒಪ್ಪಿದರೂ ಕೇಂದ್ರ ಸ್ಪಂದಿಸಿಲ್ಲ


ಕೊಪ್ಪಳ : ರಾಯಚೂರಿಗೆ ಏಮ್ಸ್ ಬೇಕು ಎಂಬ ಹೋರಾಟ ಇಂದಿಗೆ 759 ದಿನಕ್ಕೆ ಕಾಲಿಟ್ಟಿದ್ದು ನಮ್ಮ ಬೇಡಿಕೆಗೆ ಕೇಂದ್ರ ಸರಕಾರ ನಿರ್ಲಕ್ಷ್ತ ವಹಿಸಿದೆ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ ಹೇಳಿದರು.

ರವಿವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು 1956 ರಲ್ಲಿ ಜವಾಹರಲಾಲ್ ನೆಹರು ಮೊದಲು ಏಮ್ಸ್  ಆರಂಭಿಸಿದ್ರು . ಇಂದು ದೇಶದಲ್ಲಿ 24 ಏಮ್ಸ್ ಇವೆ. ನಂಜುಂಡಪ್ಪ ವರದಿಯಂತೆ ರಾಯಚೂರು ಜಿಲ್ಲೆ ಶಿಕ್ಷಣ ಉದ್ಯೋಗದಲ್ಲಿ ಹಿಂದುಳಿದಿದೆ. ಹಾಗಾಗಿ ರಾಯಚೂರಿಗೆ ಏಮ್ಸ್ ಬೇಕು. ರಾಯಚೂರಿಗೆ ಏಮ್ಸ್ ದೊರೆತರೆ ಕಲ್ಯಾಣ ಕರ್ನಾಟಕಕ್ಕೆ ದೊರೆತಂತೆ. 

250 ಎಕರೆ ಪ್ರದೇಶದ ಏಮ್ಸ್ ನಲ್ಲಿ 19 ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಇರುತ್ತವೆ. ಇದರಿಂದ ನಮ್ಮ ಭಾಗಕ್ಕೆ ಉತ್ತಮ ವೈದ್ಯಕೀಯ ಶಿಕ್ಷಣ , 50 ಸಾವಿರದಷ್ಟು ವೈದ್ಯಕೀಯ ಉದ್ಯೋಗ, ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. 

ಆದರೆ ಧಾರವಾಡ ಭಾಗದ ರಾಜಕಾರಣಿಗಳ ಹುನ್ನಾರದಿಂದ ನಮಗೆ ಏಮ್ಸ್ ದೊರೆಯುವಲ್ಲಿ ತಡವಾಗುತ್ತಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ರಾಜ್ಯ ಸರಕಾರ ಒಪ್ಪಿದರೂ ಕೇಂದ್ರ ಸರಕಾರ ನಿರ್ಲಕ್ಷ್ಯ ತೋರುತ್ತಿದೆ.  ಕಲ್ಯಾಣ ಕರ್ನಾಟಕದ ರಾಜಕಾರಣಿಗಳು ಈ ಬಗ್ಗೆ ಮಾತನಾಡಲಿಲ್ಲ.  ನಮ್ಮ ಭಾಗದ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ. ನಮ್ಮ ಹೋರಾಟ ತೀವ್ರಗೊಳ್ಳಲು ಕೊಪ್ಪಳ ಜಿಲ್ಲೆಯ ಸಂಘ ಸಂಸ್ಥೆಗಳು, ಸಂಘಟನೆಗಳು ಬೆಂಬಲಿಸಿ ಕೈ ಜೋಡಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕ ಅಶೋಕ ಕುಮಾರ್ ಜೈನ್, ಹೋರಾಟಗಾರರಾದ ರಮೇಶ ತುಪ್ಪದ, ಜಗದೀಶ ಪೂರತಿಪ್ಲಿ, ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 25 2024 8:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಗನವಾಡಿಯ ಪುಷ್ಠಿ ಪೌಷ್ಠಿಕವಾಗಿದೆ : ಡಾ.ದಾಬಡೆ
Jul 25 2024 8:40AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶುಕ್ರವಾರ ಕೊಪ್ಪಳಕ್ಕೆ ಪ್ರತಾಪ್ ಸಿಂಹ ಮಲ್ಲಿಕಾರ್ಜುನ ಬಾಳಿಕಾಯಿ
Jul 25 2024 8:29AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಳಕಲ್ ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ
Jul 20 2024 8:43PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನದಾಫ್ /ಪಿಂಜಾರ ಅಭಿವೃದ್ದಿ ನಿಗಮ - ಅನುದಾನಕ್ಕೆ ಆಗ್ರಹ
Jul 20 2024 8:37PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಸೆಕ್ಯೂರ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಚಿಕಿತ್ಸೆ
Jul 20 2024 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ‌ ಬೇಡಿಕೆ ಬಗ್ಗೆ ಶಾಸಕರು ಸದನದಲ್ಲಿ ಧ್ವನಿ ಎತ್ತಲಿ
Jul 19 2024 5:54PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅರಣ್ಯ ಇಲಾಖೆ ಕಾರ್ಯಾಚರಣೆ - ಜಿಂಕೆ ಮಾಂಸ ಚರ್ಮ ಮಾರಾಟದ ಆರೋಪಿ ಅರೆಸ್ಟ್
Jul 19 2024 10:24AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರೈಲಿಗೆ ಸಿಲುಕಿ ಮೂವರು ಯುವಕರು ದಾರುಣ ಸಾವು
Jul 19 2024 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುನಿರಾಬಾದ್ ಠಾಣೆಯ ASI ರಾಮಣ್ಣ ಸಾವು
Jul 15 2024 8:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಿಗಮದ ಸಾಲ ಸೌಲಭ್ಯಗಳಿಗೆ ಶಾಸಕರ ಹಸ್ತಕ್ಷೇಪ ಬೇಡ





     
Copyright © 2021 Agni Divya News. All Rights Reserved.
Designed & Developed by We Make Digitize