Advt. 
 Views   151

ಅಂಜನಾದ್ರಿಗೆ ಅರ್ಪಿಸಿದ ಆಭರಣದಲ್ಲಿ ಚಿನ್ನಲೇಪಿತ ತಾಮ್ರ ?

May 11, 2026, 03:16 AM IST
ಅಂಜನಾದ್ರಿಗೆ ಅರ್ಪಿಸಿದ ಆಭರಣದಲ್ಲಿ ಚಿನ್ನಲೇಪಿತ ತಾಮ್ರ ?

ಕೊಪ್ಪಳ : ಅಂಜನಾದ್ರಿಯ ಆಂಜನೇಯಸ್ವಾಮಿಗೆ ಅರ್ಪಿಸಿದ ಕೋಟ್ಯಾಂತರ ಬೆಲೆಯ ಚಿನ್ಜದ ಆಭರಣದಲ್ಲಿ ತಾಮ್ರ ಪತ್ತೆಯಾಗಿದೆ. ದೇಶದ ಟಾಪ್ 3 ಕಂಪನಿಯಾದ AMR ಮಾಲೀಕ ಮಹೇಶ್ ರಡ್ಡಿ ಹೀಗೆಕೆ ಮಾಡಿದರು ? ಎಂಬ ಪ್ರಶ್ನೆ ಉದ್ಭವಿಸಿದೆ.

ಮೇ 8 ರಂದು ಬೆಳಗಿನ ಜಾವ ನೆಲ್ಲೂರು ಮೂಲದ ಉದ್ಯಮಿ ಮಹೇಶ ರಡ್ಡಿ 2. 30 ಕೋಟಿ ಬೆಲೆಯ ಬಂಗಾರದ ಪ್ರಭಾವಳಿ, ಗದೆ, ಕಿರೀಟ ಸೇರಿ ವಿವಿಧ ಆಭರಣಗಳನ್ನು ಆಂಜನೇಯಸ್ವಾಮಿಗೆ ಅರ್ಪಿಸಿದ್ದರು. ಈ ಸಂದರ್ಭ ಗಂಗಾವತಿ ಶಾಸಕ ಜನಾರ್ದನ ರಡ್ಡಿ ಕೂಡ ಜೊತೆಗಿದ್ದರು.

ಆದರೆ ನಿನ್ನೆ ಮೇ 10 ರಂದು ಅಂಜನಾದ್ರಿಯ ಆಡಳಿತಾಧಿಕಾರಿ, ಎಸಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಈ ಬಂಗಾರದ ಆಭರಣಗಳ ಮೌಲ್ಯಮಾಪನ ಮಾಡಿಸಿದಾಗ ಆಭರಣಗಳಲ್ಲಿ ತಾಮ್ರವೂ ಇರುವ ಅಂಶ ಪತ್ತೆಯಾಗಿದೆ. ಅಷ್ಟೇ ಅಲ್ಲ 29 ಗ್ರಾಂನಷ್ಟು ಬಂಗಾರ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.

ಲೋಹ ತಜ್ಞರು ಹಾಗೂ ಬ್ಯಾಂಕ್ ಗಳಲ್ಲಿ ಬಂಗಾರದ ಸಾಲಕ್ಕೆ ಆಭರಣ ಮೌಲ್ಯಮಾಪನ ಮಾಡುವವರು ಉದ್ಯಮಿ ಮಹೇಶ ರಡ್ಡಿ ನೀಡಿದ ಆಭರಣಗಳ ಮೌಲ್ಯಮಾಪನ ಮಾಡಿದಾಗ ಇದು ಗೊತ್ತಾಗಿದೆ.

ತಾಮ್ರಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನ ಅಲ್ಲ ಎಂದು ಆಡಳಿತಾಧಿಕಾರಿ ಮಹೇಶ ಮಾಲಗಿತ್ತಿ ಹೇಳಿದ್ದಾರೆ.

ದೇವಾಲಯಗಳಿಗೆ ದಾನ, ಕಾಣಿಕೆಯಾಗಿ ಬಂದ ಚಿನ್ನ ಬೆಳ್ಳಿ ಆಭರಣಗಳ ಮೌಲ್ಯಮಾಪನ ಮಾಡಿ ದಾಖಲೆ ಇಡಬೇಕಾಗುತ್ತೆ. ಈ ನಿಟ್ಟಿನಲ್ಲಿ ಮೌಲ್ಯಮಾಪನ ಮಾಡಿದಾಗ ಈ ವಿಷಯ ಗೊತ್ತಾಗಿದೆ.

ಆದರೆ ದೇವಸ್ಥಾನಕ್ಕೆ ಬಂಗಾರದ ಕಾಣಿಕೆಗಳನ್ನು ಸ್ವೀಕರಿಸುವ ಮುಂಚೆಯೆ ಅವುಗಳನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಬೇಕಾಗಿತ್ತು ಎಂಬ ಮಾತು ಕೇಳ ಬಂದಿದೆ.

ಜಿಲ್ಲಾಡಳಿತ ಅಥವಾ ಅಂಜನಾದ್ರಿ ಆಡಳಿತಾಧಿಕಾರಿ ಈ ಚಿನ್ನ ಲೇಪಿತ ತಾಮ್ರವನ್ನು ದಾನಿಗೆ ವಾಪಸ್ ಕೊಡುತ್ತಾರೊ ಅಥವಾ ಸ್ವೀಕರಿಸಿ ಖಜಾನೆಯಲ್ಲಿ ಇಡುತ್ತಾರೊ ? ಕಾದು ನೋಡಬೇಕು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize