Advt. 
 Views   136

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೇರಿ ಇಬ್ಬರ ವಿರುದ್ದ ದೂರು

Oct 28, 2025, 07:35 PM IST
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೇರಿ ಇಬ್ಬರ ವಿರುದ್ದ ದೂರು

ಕೊಪ್ಪಳ : ನಿನ್ನೆ ಬೆಣಕಲ್ ನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ಹಾಗೂ ಅದೇ ಗ್ರಾಮದ ಬೀರಪ್ಪ ಎಂಬುವವರ ವಿರುದ್ದ ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ತಾಯಿ ಬಸಮ್ಮ ನೀಡಿದ ದೂರಿನಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ FIR ಆಗಿದೆ.

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮಿ ಹಾಗೂ ಅದೆ ಗ್ರಾಮದ ಬೀರಪ್ಪ ನಡುವೆ ಅನೈತಿಕ ಸಂಬಂಧ ಇತ್ತು.‌ ಇದು ಗೊತ್ತಾಗಿ ಕುಟುಂಬದಲ್ಲಿ ಬುದ್ದಿವಾದ ಹೇಳಿದರೂ ಸಂಬಂಧ ಮುಂದುವರೆದಿತ್ತು.

ಆತ್ಮಹತ್ಯೆಗೆ ಒಂದು ದಿನ ಮುಂಚೆ ಲಕ್ಷ್ಮಿ ಗೆ ಬೀರಪ್ಪನ ಸಂಗ ಬೀಡುವಂತೆ ಹೇಳಲಾಗಿತ್ತು. ಆದರೆ ಮರುದಿನ ಬೀರಪ್ಪ ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಾ ನಾನು ಕರೆದುಕೊಂಡು ಹೋಗುತ್ತೇನೆ ಇಬ್ಬರು ಸೇರಿ ಜೀವನ ಮಾಡೋಣ ಅಂತ ಒತ್ತಾಯಿಸಿದ್ದಾನೆ.‌ ಅಲ್ಲದೆ ನೀನು ಬರದಿದ್ದರೆ ನಿನ್ನ ಸಾಯಿಸಿ ನಾನೂ ಸಾಯ್ತೀನಿ ಅಂದಿದ್ದಾನೆ ಬೀರಪ್ಪ.

ಇದು ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿ ಈ ಬಗ್ಗೆ ಬುದ್ದಿವಾದ ಹೇಳಿದರಾಯ್ತು ಅಂದುಕೊಂಡ ದಿನ ಮಧ್ಯಾಹ್ನ ಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನು ನೇಣಿಗೆ ಶರಣಾಗಿದ್ದಾಳೆ.

ನೀನು ಬರದಿದ್ದರೆ ನಿನ್ನ ಸಾಯಿಸಿ ನಾನು ಸಾಯ್ತೀನಿ ಅಂದಿದ್ದಕ್ಕೆ ಬೀರಪ್ಪ ನನ್ನನ್ನು ಬೀಡುವುದಿಲ್ಲ ನನ್ನ ಮಕ್ಕಳು ಅನಾಥ ಆಗ್ತವೆ ಎಂದು ಹೆದರಿ ಲಕ್ಷ್ಮಿ ಮಕ್ಕಳನ್ನು ಸಾಯಿಸಿ ನೇಣಿಗೆ ಶರಣಾದರೆ ಬೀರಪ್ಪ ಜೈಲಿಗೆ ಹೋದ.‌

ಲಕ್ಷ್ಮಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize