Advt. 
 Views   1115
Jul 24 2022 8:13PM

ಹಳೆ ವಿದ್ಯಾರ್ಥಿಗಳ ಬಳಗದಿಂದ ಕೃತಿಗಳ ಬಿಡುಗಡೆ-ಅವಲೋಕನ


ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಸವರಾಜ ಪುಜಾರ ಅವರ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ 2000-01 ನೇ ಸಾಲಿನ ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ, ಸಂಭ್ರಮದಿಂದ ಜರುಗಿತು.

ಹಳೆ ವಿದ್ಯಾರ್ಥಿಗಳೆ ಕಾರ್ಯಕ್ರಮ ಆಯೋಜಿಸಿ ಕೃತಿ ಲೋಕಾರ್ಪಣೆಗೊಳಿಸಿ, ಕೃತಿ ಕುರಿತು ಮಾತನಾಡಿದ್ದು ಮತ್ತು ಹಿರಿಯ ಸಾಹಿತಿಗಳು ಸಭಿಕರಾಗಿ ಕುಳಿತು ಸಾಹಿತ್ಯಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮವನ್ನು ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ ಉದ್ಘಾಟಿಸಿದರು.
----------------------
ಎಷ್ಟೋ ಜನರಿಗೆ ಶಾಲೆಗಳಿಗೆ ಅವಕಾಶ ಇಲ್ಲದ ಆ ಕಾಲದಲ್ಲಿ ಅಂಬೇಡ್ಕರ್ ಅವರು ಕೊಟ್ಟ ಹಕ್ಕು ಮತ್ತು ಸೌಲಭ್ಯದಿಂದ ಅಕ್ಷರ ಕಲಿತು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ನನ್ನ ಉದ್ಯೋಗದ ಆರಂಭದ ದಿನಗಳಲ್ಲಿ ಬಸವರಾಜ ಪುಜಾರ ಸರ್, ಪರೀಕ್ಷಿತರಾಜ್ ಸರ್ ಧನ ಸಹಾಯ ಮಾಡಿದ್ದಾರೆ. ನಾನು ಎರಡು ಸಲ ನಗರಸಭೆ ಸದಸ್ಯನಾಗಿ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಎಲ್ಲ ಅವರ ಸಹಕಾರ.  ಪುಜಾರ ಸರ್ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ.
- ಮುತ್ತುರಾಜ ಕುಷ್ಟಗಿ ನಗರಭೆ ಸದಸ್ಯರು
------------------
ಶರಣರು, ದಾಸರು, ಸೂಫಿ ಸಂತರ ತತ್ವಗಳಿಂದ ಈ ಭಾಗ ಸೌಹಾದದ ನೆಲೆವೀಡು. ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳಿದ್ದಾರೆ. ಅಂಥವರಿಂದ ಎಲ್ಲ ಧರ್ಮದ ಶಾಂತಿಪ್ರಿಯರ ಬದುಕು ಅಲ್ಲೋಲ ಕಲ್ಲೋಲಗೊಳ್ಳುವುದು. ಅದನ್ನು ಮೀರಿ ನಿಲ್ಲಲು ಸೌಹಾರ್ದ ತಾಣಗಳತ್ತ ಗಮನ ಹರಿಸುವ ಅವಶ್ಯಕತೆಯಿದೆ. ಜಿಲ್ಲೆಯ ಕೋಮು ಸೌಹಾರ್ದ ತಾಣಗಳ ಬಗ್ಗೆ ಪುಜಾರ ಸರ್ PHD ಕೃತಿ ಮಹತ್ವದ ಕೃತಿ.
- ಮಂಜುನಾಥ ಡೊಳ್ಳಿನ
ಹಿರಿಯ ಸಹಾಯ ವಾರ್ತಾಧಿಕಾರಿಗಳು
( ಕೊಪ್ಪಳ ಜಿಲ್ಲೆಯ ಕೋಮು ಸೌಹಾರ್ದ ತಾಣಗಳು ಕೃತಿ ಕುರಿತು)
-------------------
ಮಾತು ಸೃಷ್ಟಿಕರ್ತನ ಅನುಗ್ರಹಗಳಲ್ಲಿ ಒಂದು. ವಿಶ್ವದಲ್ಲಿ ಅತ್ಯಂತ ಹರಿತ, ಕಹಿ ಮತ್ತು ಸಿಹಿಯಾದದ್ದು ಮಾತು. ಮಾತಿನಿಂದ ಜಗತ್ತು ಗೆಲ್ಲಲು ಸಾಧ್ಯವಿದೆ.
- ಜಾಫರ್ ಗೇಟಿನ್
(ಮಾತೆಂಬುದು ಮಕರಂದ ಕೃತಿ ಕುರಿತು)
--------------------
ಹಳೆಗನ್ನಡ ಮತ್ತು ವಚನಗಳ ಪ್ರಭಾವ ಈ ಕೃತಿಯಲ್ಲಿದೆ. ಬರಹದಲ್ಲಿ ಉಪನ್ಯಾಸಕರ ಚಿಂತನೆ, ಸಂಶೋಧಕರ ವಿಮರ್ಶಾ ದೃಷ್ಟಿಕೋನ, ಸಂವಾದದ ಸ್ವರೂಪ ಎಲ್ಲ ಮೇಳೈಸಿದೆ ಈ ಕೃತಿಯಲ್ಲಿ.
- ಶಂಕ್ರಯ್ಯ ಅಬ್ಬಿಗೇರಿಮಠ ಉಪನ್ಯಾಸಕರು
( ಮೌನದೊಳಗಿನ ಮಾತು ಕೃತಿ ಕುರಿತು)

ಗವಿಸಿದ್ದಪ್ಪ ದೊಡ್ಡಮನಿ 'ಕಾಲ್ನಡಿಗೆ' ಕೃತಿ ಕುರಿತು, ಮಂಜುನಾಥ ತಿಮ್ಮಕ್ಕನವರ 'ಹಿತ್ತಲ ಗಿಡ ಮದ್ದು' ಕೃತಿ ಕುರಿತು ಮಾತನಾಡಿದರು.
------------------
ಶಿಕ್ಷಕ ವೃತ್ತಿ ಅನನ್ಯವಾದದ್ದು. ವಿದ್ಯೆ ಹೇಳಿಕೊಟ್ಟ ಗುರುಗಳ ಋಣ ಯಾವ ರೀತಿಯಲ್ಲೂ ತೀರಿಸಲು ಸಾದ್ಯವಿಲ್ಲ. ದೇಶದ ಅನೇಕ ಯುವಕ-ಯುವತಿಯರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರ ಸಾಧನೆಗಳಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ.
-ಚಂದ್ರಶೇಖರಗೌಡ ಪಾಟೀಲ್ ಹಲಗೇರಿ
(ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು )
---------------------
ವೇದಿಕೆಯಲ್ಲಿ ರಾಘವೇಂದ್ರ , ಉದ್ಯಮಿ ಶ್ರೀನಿವಾಸ ಗುಪ್ತಾ , ವಕೀಲರಾದ ವೀರನಗೌಡ ಉಪಸ್ಥಿತರಿದ್ದರು.
------------------
ಅಡಿವೆಪ್ಪ ಸ್ವಾಗತಿಸಿದರು.ಕು.ನಿಧಿ ಸವಡಿ ಪ್ರಾರ್ಥಿಸಿದರು. ಮಂಜುಳಾ ಪಾಟೀಲ್ ನಿರೂಪಿಸಿದರು. ಮಿನಾಕ್ಷಿ ಉಪಲಾಪುರ ವಂದಿಸಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize