ಕೊಪ್ಪಳ : ನಗರ ಠಾಣೆ ಇನ್ಸ್ಪೆಕ್ಟರ್ ಹುದ್ದೆಗೆ ಸರಿಯಾಗಿ 60 ದಿನಗಳ ನಂತರ ಸುರೇಶ್. ಡಿ ಅವರಿಗೆ ಆದೇಶ ಬಂದಿದೆ.
ಫೆ. 11 ಅಂದ್ರೆ ನಾಳೆಗೆ ಸರಿಯಾಗಿ ಎರಡು ತಿಂಗಳ ಹಿಂದೆ ಕೊಪ್ಪಳ ನಗರ ಠಾಣೆ ಪಿಐ ಆಗಿದ್ದ ಜಯಪ್ರಕಾಶ ಕೆ. ಅವರನ್ನು ಕೊಪ್ಪಳ ಗ್ರಾಮೀಣ ವೃತ್ತಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು.
ಆದರೆ ಕೊಪ್ಪಳ ಗ್ರಾಮೀಣ ವೃತ್ತದಲ್ಲಿದ್ದ ಸುರೇಶ ಡಿ. ನಗರ ಠಾಣೆ ಪಿಐ ಹುದ್ದೆಗೆ ಬರಲು ಆಸಕ್ತರಾಗಿದ್ದರು. ಆದರೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಎರಡು ತಿಂಗಳಿನಿಂದ ಜಯಪ್ರಕಾಶ ಕೆ. ಅವರ ವರ್ಗಾವಣೆಯಿಂದ ತೆರವಾದ ಕೊಪ್ಪಳ ನಗರ ಠಾಣೆ ಇನ್ಸಪೆಕ್ಟರ್ ಹುದ್ದೆಗೆ ಯಾರನ್ನೂ ವರ್ಗಾಯಿಸಿರಲಿಲ್ಲ.
ಅತ್ತ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದ ಸುರೇಶ್ ಅವರು ಜಾಯಿನ್ ಆಗಿರಲಿಲ್ಲ. ಇತ್ತ ನಗರ ಠಾಣೆ ಪಿಐ ಹುದ್ದೆಗೆ ಪ್ರಭಾರಿಗಳು ಕರ್ತವ್ಯ ನಿರ್ವಹಿಸಿದರು.
ಅಂತಿಮವಾಗಿ ಇಂದು ನಗರ ಠಾಣೆಗೆ ಸುರೇಶ್. ಡಿ ವರ್ಗಾವಣೆಯಾಗಿದ್ಧಾರೆ.