ಕೊಪ್ಪಳ : ಮಸಬಹಂಚಿನಾಳ ನಿಂದ ಕುಕನೂರಿಗೆ ಹೋಗುವ ಹೆದ್ದಾರಿ ಪಕ್ಕ ತಗ್ಗಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳು ಅರೆಬರೆ ಕೊಳೆತ ಸ್ಥಿತಿಯಲ್ಲಿ ಕಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕುಡಿಯುವ ನೀರಿನ ಪೈಪಲೈನ್ ಗಾಗಿ ತೆಗೆದಿರುವ ತಗ್ಗುಗಳಲ್ಲಿ ಈ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಕುಕನೂರಿನ
ರುದ್ರೇಶ ಗಂಗಾವತಿ (23), ರವಿ ರಾಮಣ್ಣ ತಟ್ಟಿ (32) ಇಬ್ಬರು ಒಂದೆ ಓಣಿಯ ಸ್ನೇಹಿತರು ಎಂದು ತಿಳಿದು ಬಂದಿದೆ.
ರವಿ ವಾಹನ ಚಾಲಕನಾಗಿದ್ದ. ಗುರುವಾರ ದಿನ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ಹೋಗಿದ್ದ ರವಿ ಇಂದು ಶವವಾಗಿ ಕಂಡಿದ್ದಾನೆ.
ಇವರಿಬ್ಬರು ತಂದಿದ್ದ ಬೈಕ್ ಸ್ವಲ್ಪ ದೂರದಲ್ಲಿ ಬಿದ್ದಿತ್ತು. ಇದನ್ನು ನೋಡಿದ ಸಾರ್ವಜನಿಕರು ಎಪ್ರಿಲ್ 9 ರಂದು ಕುಕನೂರು ಪೊಲೀಸ್ ಠಾಣೆಗೆ ಬೈಕ್ ಒಪ್ಪಿಸಿದ್ದರು.
ಇಂದು ಸ್ಥಳಕ್ಕೆ ಕುಕನೂರು ಪೊಲೀಸರು ಹಾಗೂ ಎಸ್ಪಿ ಡಾ. ರಾಮ್ ಅರಸಿದ್ದಿ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಬಸವರಾಜ ರಾಯರಡ್ಡಿ ಭೇಟಿ ನೀಡಿದರು.