ಕೊಪ್ಪಳ : 2028 ರ ವಿಧಾನಸಭೆ ಮತ್ತು ಗ್ರಾ. ಪಂ, ತಾ.ಪಂ, ಜಿಮಪಂ ಚುನಾವಣೆಗೆ ಕಹಳೆ ಎಂಬಂತೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಿನ್ನೆ ರವಿವಾರ ಸಂಜೆ ಶಿವಶಾಂತವೀರ ಮಂಗಲ ಭವನದಲ್ಲಿ ಅದ್ದೂರಿಯಾಗಿ ಜರುಗಿತು.
ಅದಕ್ಕೂ ಮುಂಚೆ ಬನ್ನಿಕಟ್ಟಿಯಿಂದ ಮಂಗಲ ಭವನದವರೆಗೆ ರಾಜ್ಯ ಯುವ ಘಟಕದ ಅಧ್ಯಕ್ಷರು ನಿಖಿಲ್ ಕುಮಾರಸ್ವಾಮಿ ಭರ್ಜರಿ ರೋಡ್ ಶೋ ನಡೆಯಿತು.
ಸಮಾವೇಶದಲ್ಲಿ ಸಿಂಧನೂರಿನ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡರು ಮುಸ್ಲಿಮರ ಶೇ. 4 ಮೀಸಲಾತಿ ಬಗ್ಗೆ ಮಾತನಾಡಿ ಮುಸ್ಲಿಂರ ಓಟು ಪಡೆದು ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಮುಸ್ಲಿಂರನ್ನು ಕೈಬಿಟ್ಟಿದೆ ಎಂದು ನೆನಪಿಸಿದರು.
ಹೆಚ್. ಡಿ. ದೇವೇಗೌಡರು ಮುಸ್ಲಿಂರಿಗೆ 4% ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿದರು. ಆ ಮೀಸಲಾತಿಯನ್ನು 2022 ರಲ್ಲಿ ಬಿಜೆಪಿಯವರು ತೆಗೆದು ಹಾಕಿದರು.
2023 ರ ಚುನಾವಣೆಯಲ್ಲಿ ತಾವು ಆಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಮರ 4% ಮೀಸಲಾತಿ ವಾಪಸ್ ಕೊಡ್ತೀವಿ ಎಂದು ರಾಜ್ಯದ ಅನೇಕ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ಸಿಗರು ಹೇಳಿದರು. ಆದರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಆಗ್ತಿದೆ ಆದರೆ ಮುಸ್ಲಿಮರ ಮೀಸಲಾತಿ ಕೊಟ್ಟಿಲ್ಲ.
2023 ರಲ್ಲಿ ಜೆಡಿಎಸ್ ಗೆ ಓಟ್ ಹಾಕಿದ್ರೆ ಬಿಜೆಪಿ ಬರುತ್ತೆ ಅಂತ ಕಾಂಗ್ರೆಸ್ ನವರು ಹೇಳಿ ಹೆದರಿಸಿದರು. ಆದ್ರೆ ಬಿಜೆಪಿ ಬಂದು ಆಗಲೆ 15 ವರ್ಷ ಆಗಿದೆ.
ಕಾಂಗ್ರೆಸ್ ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಚುನಾವಣೆಯಲ್ಲಿ ಉಪಯೋಗಿಸಿ ನಂತರ ಕೈಬಿಡುತ್ತೆ. ಇವತ್ತಿಗೂ ಕಾಂಗ್ರೆಸ್ ಒಬ್ಬ ಮುಸ್ಲಿಂ ನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಆದರೆ ನಾವು ಜೆಡಿಎಸ್ ನವರು ಹಿಂದೆಯೆ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನು ಮಾಡಿದ್ಧೆವು ಎಂದು ವೆಂಕಟರಾವ ನಾಡಗೌಡರು ಹೇಳಿದರು.
------------
ನಂತರ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷರು ಸುರೇಶ ಭೂಮರಡ್ಡಿ - ನಾವು 2023 ರ ಚುನಾವಣೆಯಲ್ಲಿ 20 ದಿನದಲ್ಲಿ 45 ಸಾವಿರ ಓಟು ಪಡೆದಿದ್ದೇವೆ. ಇನ್ನೂ 45 ಸಾವಿರ ಓಟು ಬರುತ್ತಿದ್ವು. ಅಲ್ಪಸಂಖ್ಯಾತರಿಗೆ ಇಲ್ಲ ಸಲ್ಲದು ಹೇಳಿ ದಾರಿ ತಪ್ಪಿಸಿದ್ರು. ಈಗ ಸಿವಿಸಿ ಬಗ್ಗೆ ಎಲ್ಲ ಗೊತ್ತಾಗಿದೆ. ಸಿವಿಸಿ ಮತ್ತು ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ ಮಾಡಲ್ಲ ಎಂದರು.