ಕೊಪ್ಪಳ : ನಾನೊಬ್ಬ ಹೆಣ್ಣು ಮಗಳು, ಎಚ್ಚರವಾಗಿದ್ದೆ ಪ್ರತಿಭಟನೆ ಮಾಡಿದ್ದೇನೆ ಅದರ ಮೂಲಕ ಅವರಿಗೆ ಒಳ್ಳೆಯ ಉತ್ತರ ಕೊಟ್ಟಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಎರಡು ದಿನಗಳ ಹಿಂದೆ ಸಂಸದ ರಾಜಶೇಖರ ಹಿಟ್ನಾಳ ಹುಲಿಕೆರೆ ಪ್ರಕರಣ ಸಂಬಂಧ ಮಾತನಾಡುತ್ತಾ ತಮ್ಮ ಬಗ್ಗೆ ಅಕ್ಷೇಪಾರ್ಹ ಪದ ಬಳಕೆ ಬಗ್ಗೆ ಪ್ರತಿಕ್ರಿಯಿಸಿದರು.
ಅವರು ಬಳಸಿದ ಪದದಿಂದ ನೋವಾಯಿತು. ನಾವು ಹೆಣ್ಣುಮಕ್ಕಳು ಅವರಂತೆ ಮಾತನಾಡಕಾಗಲ್ಲ ಮನಸ್ಸಿಗೆ ಬೇಜಾರಾಗುತ್ತದೆ.
ಈಗ ನನ್ನ ಬಗ್ಗೆ ಮಾತಾಡಿದ್ರು , ಹಿಂದೆ ಸಾಣಾಪುರ ಘಟನೆ ಅದಾಗ ಅದು ಸಣ್ಣ ಘಟನೆ ಅಂದಿದ್ದರು. ಹೆಣ್ಣುಮಕ್ಕಳ ವಿಷಯದಲ್ಲಿ ಸಂಸದರು ಲಘುವಾಗಿ ಮಾತಾಡ್ತಾರಲ್ಲ ಬಹಳ ಬೇಜಾರಾಗುತ್ತೆ ಎಂದು ಅವರು ಹೇಳಿದರು.
ಕೊಪ್ಪಳದಲ್ಲಿ ಹೋಳಿ ಹಬ್ಬ ಆಯೋಜಿಸಿದ ಕುರಿತು ಎರಡು ದಿನಗಳ ಹಿಂದೆ ಸಂಸದ ರಾಜಶೇಖರ ಹಿಟ್ನಾಳ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹುಲಿಕೆರೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ ಅಲ್ಲಿ ನಡೆದಿದ್ದ ಎಲ್ಲ ಕಾಮಗಾರಿಯನ್ನು ಹೇಮಲತಾ ನಾಯಕ ಅವರು ಶಿವರಾತ್ರಿ ಕಾರ್ಯಕ್ರಮಕ್ಕೆ ಬಂದಾಗ ನೋಡಿದ್ದರು. ಆಗ ಅವರು ಏಕೆ ಸುಮ್ಮನಿದ್ದರು ಎನ್ನುತ್ತ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.
ಇಂದು ಹೇಮಲತಾ ನಾಯಕ ಅವರು ಹುಲಿಕೆರೆ ಪ್ರಕರಣ ಕುರಿತು ಮಾತನಾಡುತ್ತ ದರ್ಗಾ - ದೇವಸ್ಥಾನ ಕಮಿಟಿ ಅವರು ಒಪ್ಪಿಗೆ ಕೊಟ್ರೆ ಸಾಕಾ ರಸ್ತೆ ಮಾಡಿಕೊಳ್ಳಲು ? ಈ ಬಗ್ಗೆ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ದೂರು ಕಳಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ನೀಲಕಂಠಯ್ಯ ಹಿರೇಮಠ, ಬಿಜೆಪಿ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷರು ಗಣೇಶ ಹೊರತಟ್ನಾಳ, ಬಿಜೆಪಿ ನಗರ ಅಧ್ಯಕ್ಷರು ಅಮರೇಶ ಮುರಲಿ, ಮಹೇಶ ಅಂಗಡಿ ಉಪಸ್ಥಿತರಿದ್ದರು.