Advt. 
 Views   103

ಧೂಳು ಗೋಳು : ಊರಿಗೆ ಹೋದ್ರೂ ಗೋಳು ನೋಡದ ಶಾಸಕರಿಗೆ ಧಿಕ್ಕಾರ

Feb 25, 2026, 06:22 PM IST
ಧೂಳು ಗೋಳು : ಊರಿಗೆ ಹೋದ್ರೂ ಗೋಳು ನೋಡದ ಶಾಸಕರಿಗೆ ಧಿಕ್ಕಾರ

ಕಾರ್ಖಾನೆ ವಿರುದ್ದ ಧರಣಿ 115 ದಿನ ಆದರೂ ಧರಣಿ ಸ್ಥಳಕ್ಕೆ ಬಾರದ ಶಾಸಕ ರಾಘವೇಂದ್ರ ಹಿಟ್ನಾಳ ಫೆ. 24 ರ ಕೊಪ್ಪಳ ಬಂದ್ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಬಂದಾಗ ಜನರ ಸಮಸ್ಯೆಗೆ ಸ್ಪಂದಿಸದ ನೀವು ಮಾತನಾಡಬೇಡಿ ಎಂದು ಜನ  ಚುರುಕು ಮುಟ್ಟಿಸಿದ್ದರು

ಮೂರನೆ ಸಲ ಗೆದ್ದ ಮೇಲೆ ಕ್ಷೇತ್ರಕ್ಕೆ ವಿಕೆಂಡ್ ಶಾಸಕ ಆಗಿರುವ ರಾಘವೇಂದ್ರ ಹಿಟ್ನಾಳಗೆ ಫೆ. 24 ರ ವೇದಿಕೆಯಲ್ಲಿ ಕುಳಿತಾಗ ಜನರಿಂದ ಬಂದ ಆಕ್ರೋಶ , ಅಸಮಾಧಾನ ಅರ್ಥ ಆಗಿಲ್ಲ ಅನಿಸುತ್ತೆ.

ಮೊನ್ನೆಯ ಎಫೆಕ್ಟ್ ಎಂಬಂತೆ ನಿನ್ನೆ ಶಾಸಕ ಕಾರ್ಖಾನೆಗಳ ಧೂಳು ಹೊಗೆಯಿಂದ ಜೀವನವೆ ಝರ್ಜರಿತ ಆಗಿರುವ ಹಿರೇಬಗನಾಳಕ್ಕೆ ಹೋಗಿದ್ರು. ಅಲ್ಲಿಯ ಜನ ನಮ್ಮೂರು ನೋಡ್ರಿ ಎಷ್ಟು ಧೂಳು ಇದೆ ಒಂದ್ಸಲ ನೋಡ ಬರ್ರಿ ಅಂತ ಕರೆದರೆ ಶಾಸಕರು ಕೇರ್ ಲೆಸ್ ಮಾಡಿ ಕಾರು ಹತ್ತುವಾಗ ಜನ ಧಿಕ್ಕಾರ ಕೂಗಿದ್ಧಾರೆ. ‌

ಗ್ರಾಮಸ್ಥರು ಕೇಳಿದ್ದಾದರೂ ಏನು ? ಕಾರ್ಖಾನೆಗಳಿಂದ ಆಗಿರುವ ಹಾನಿಯ ವರದಿ ಜಾರಿ ಮಾಡಿ ಮತ್ತು ಹಾನಿಕಾರಕ ಕಾರ್ಖಾನೆಗಳನ್ನು ಬಂದ್ ಅಥವಾ ಶಿಫ್ಟ್ ಮಾಡಿ, ಒಂದ್ಸಲ ಮುಖ್ಯಮಂತ್ರಿಗಳನ್ನು ಬಜೆಟ್ ಆದ ಮೇಲೆ ನಮ್ಮ ಗ್ರಾಮಕ್ಕೆ ಕರೆದುಕೊಂಡು ಬರ್ರಿ ಅಂತ.

ಇದಕ್ಕೆ ಕೊಟ್ಟ ಉತ್ತರ ಮಾತ್ರ ಬಂಡಲ್. ಮಾಲಿನ್ಯ ತಡೆಯಲು ಮಂಡಳಿಗೆ ಪತ್ರ ಬರಿತಿನಿ, ಲಾರಿ ಓಡಾಟಕ್ಕೆ ಬೇರೆ ಬೈಪಾಸ್ ಮಾಡಿಸೋಣ ಅಂದ್ರು.‌ ಶಾಸಕರ ಮಾತಿನಲ್ಲಿ ಜನಪರ ಕಾಳಜಿ ಜೀರೋ ಅಂತ ಗ್ಯಾರಂಟಿ ಆಗಿಯೆ ಅವರು ಊರಾಗ ಹೋಗಿ ಬರೋಣ ಬರ್ರಿ ಧೂಳು ನೋಡ ಬರ್ರಿ ಅಂದ್ರೆ ಶಾಸಕರು ಮುಖ ತಿರುಗಿಸಿ ಕಾರು ಹತ್ತಲು ಹೊರಟರು. ಜನ ಧಿಕ್ಕಾರ ಕೂಗಿದರು.

ಇದು ಮೂರು ಸಲ ಶಾಸಕ ಆಗಿರುವ ರಾಘವೇಂದ್ರ ಹಿಟ್ನಾಳ ಜನರ ಸಮಸ್ಯೆಗೆ ತೋರಿಸುವ ಸ್ಪಂದನೆ !

ಹಿಂದೆ SMK ಅವರ ಕಾಂಗ್ರೆಸ್ ಸರಕಾರ ಸಂದರ್ಭ ಬಗನಾಳನಲ್ಲಿ ಲಾಠಿ ಚಾರ್ಜ್ ಆದಾಗ ದೇಶದ ಮಾಜಿ ಪ್ರಧಾನಿ ದೇವೇಗೌಡರು ಬಗನಾಳಗೆ ಬಂದಿದ್ದರು. ಶಾಸಕರಿಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಬಗನಾಳಗೆ ಕರೆದುಕೊಂಡು ಬರೋದು ಕಷ್ಟವೆ ?



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize