Advt. 
 Views   110

ಕಾರ್ಖಾನೆ ವಿಷಯದಲ್ಲಿ ರಾರಾ ಬ್ರದರ್ಸ್ ಮೌನ : ಜನ ತರಾಟೆ

Feb 24, 2026, 04:53 AM IST
ಕಾರ್ಖಾನೆ ವಿಷಯದಲ್ಲಿ ರಾರಾ ಬ್ರದರ್ಸ್ ಮೌನ : ಜನ ತರಾಟೆ

ಕೊಪ್ಪಳ ಹತ್ತಿರ ಕಾರ್ಖಾನೆ ವಿರೋಧಿಸಿ ಇಂದು ನಡೆದ ಬಂದ್ ನ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಮತ್ತು ಅದಕ್ಕೂ ಮುಂಚೆ ಮೆರವಣಿಗೆಯಲ್ಲಿ ಉಡಾಫೆ ಶಾಸಕ ರಾಘವೇಂದ್ರ ಹಿಟ್ನಾಳ , ಕೇರ್ ಲೆಸ್ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿಯವರಿಗೆ ಜನ ತರಾಟೆಗೆ ತೆಗೆದುಕೊಂಡರು.

ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಗೆ ಭೇಟಿ ಕೊಡಲು ಈ ಮುಂಚೆ ಬೆಂಬಲಿಗರು ಸಲಹೆ ಮಾಡಿದಾಗ ಕ್ಯಾರೆ ಎನ್ನದ ರಾಘವೇಂದ್ರ ಹಿಟ್ನಾಳ ಒಮ್ಮೆಯೂ ಸದನದಲ್ಲಿ ಕಾರ್ಖಾನೆ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಶಾಸಕರು ಕಾರ್ಖಾನೆ ಪರ ಇರಬಹುದಾ ? ಎಂಬ ಶಂಕೆ ಜನರಿಗೆ.

ತಾವು ಏನು‌‌ ಮಾಡಿದರೂ ನಡೆಯುತ್ತೆ , ನಮ್ಮನ್ನು ಕೇಳೋರು ಯಾರು ? 4 ವರ್ಷ 10 ತಿಂಗಳಾದ ಮೇಲೆ ಜನರ ಹತ್ರ ಹೋದ್ರೆ ಆಯ್ತು ಓಟು ಹಾಕುತ್ತಾರೆ ಎಂಬ ಉಡಾಫೆಯ ರಾರಾ ಬ್ರದರ್ಸ್ ಇಂದು ಮೆರವಣಿಗೆ ಹಾಗೂ ವೇದಿಕೆಗೆ ಬಂದಾಗ ಜನ ತರಾಟೆಗೆ ತೆಗೆದುಕೊಂಡರು. ರೈತರ ಸಿಂಬಲ್ ಆಗಿರುವ ಹಸಿರು ಟವಲ್ ಅವರಿಬ್ಬರು ಹಾಕಿಕೊಂಡಿದ್ದಕ್ಕೆ ತೆಗೆಯಿರಿ ಅದನ್ನು ಎಂದು ಕೆಲವರು ಆಗ್ರಹಿಸಿದರು.

ಮಾಜಿ ಸಂಸದ ಸಂಗಣ್ಣ ಕರಡಿ ವೇದಿಕೆಯಲ್ಲಿ ಮಾತನಾಡುವಾಗ ಕೂಡ ಜನ ವಿರೋಧ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹಾಗೂ ಜೆಡಿಎಸ್ ಮುಖಂಡರಾದ ಸಿ.ವಿ.ಚಂದ್ರಶೇಖರ ಹೊರತು ಪಡಿಸಿ ಎಲ್ಲ ರಾಜಕಾರಣಿಗಳ ಭಾಷಣಕ್ಕೆ ಜನ ವಿರೋಧ ವ್ಯಕ್ತಪಡಿಸಿದರು.
---------------------
" ಶಾಸಕರು ಸಂಸದರು ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬೇಕು ಇಲ್ಲದಿದ್ದರೆ ನಿಮಗೆ ಮತ ಹಾಕುವುದಿಲ್ಲ ಎಂದು ಜನ ಹೇಳಬೇಕು ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು "
- ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ

ಜನರ ಬದುಕು ಅಪಾಯದಲ್ಲಿದೆ ಕಾರ್ಖಾನೆಗಳ ವಿಷಾನಿಲದಿಂದ ಜನ ಮಾರಕ ರೋಗಗಳಿಂದ ಬಳಲುತ್ತಿದ್ದಾರೆ ರೈತರ ಬೆಳೆ ಹಾಳಾಗುತ್ತಿದೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜನ ದಂಗೆ ಏಳುವ ಸಂದರ್ಭ ಬರಬಹುದು
- ಟಿ ರಾಮಸ್ವಾಮಿ ಮಾಜಿ ಶಾಸಕರು



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize