Advt. 
 Views   148

ಹಣತೆ ಹಚ್ಚಿ ಮನ ಬೆಳಗುವಳು ಕೋಪದಲ್ಲಿ ನನ್ನನ್ನೇ ಜ್ವಲಿಸುವಳು

Feb 21, 2026, 07:50 PM IST
ಹಣತೆ ಹಚ್ಚಿ ಮನ ಬೆಳಗುವಳು ಕೋಪದಲ್ಲಿ ನನ್ನನ್ನೇ ಜ್ವಲಿಸುವಳು

ಅವಳು...

ನನ್ನವಳು ಒಂದರ್ಥದಲಿ ಚಂಚಲೆ
ಬದಲಾಗುವ ಸಮಯದಂತೆ ಅವಳ ಮನಸು

ಒಂದೊಂದು ಸಂದರ್ಭದಲ್ಲಿ ಒಂದೊಂದು ತರಹ
ಒಮ್ಮೆ ನಗಿಸಿ, ಮತ್ತೊಮ್ಮೆ ಅಳಿಸುವಳು

ಒಮ್ಮೊಮ್ಮೆ ನಕ್ಕು ಅಳಿಸುವಳು
ಜೊತೆಗೆ ತಾನೂ ಅಳುವಳು

ನನ್ನನ್ನು ಇಂಚಿಂಚು ಬಲ್ಲವಳು
ಆದರೂ ನನ್ನ ಮುಂದೆ ಅವಳು ಮುಗ್ದೆ

ನನ್ನವಳು ಒಮ್ಮೊಮ್ಮೆ ವಾಗ್ಮಿ, ಬೃಹಸ್ಪತಿ
ಆದರೂ ಕೆಲವು ಸಲ ಮಂತ್ರಮುಗ್ದೆ

ಎಲ್ಲಾ ಅರಿತವಳು ಇವಳು
ಆದರೂ ಮರೆತಂತೆ ನಟಿಸುತ್ತಾಳೆ

ಮನಸ್ಸಲ್ಲಿ ನೋವು ತುಂಬಿದಾಗ
ಮಾತೇ ಮರೆತು ಹೋಗುವಳು

ಒಲವ ತುಂಬಿದ ಹೃದಯಸಾಗರದಲ್ಲಿ
ಮುನಿಸಿನ ಸುನಾಮಿ ಬೀಸಿ ತಾನೇ ಮರೆಯಾಗುವಳು

ಬೆಟ್ಟದಷ್ಟು ಪ್ರೀತಿಯ ತೋರುತ್ತಾ
ಬೆಟ್ಟದ ಮೇಲತ್ತಿ ನಿಲ್ಲುತ್ತಾಳೆ

ಬಯ್ದು ಬಯ್ದು ಸುಸ್ತಾಗಿ
ಬಂದು ಬಿಗಿದಪ್ಪಿ ಮುತ್ತಿಕ್ಕುತ್ತಾಳೆ

ಅವಳು ವಾಚಾಳಿ, ವಾಕ್ಚತುರೆ
ಮುದ್ದಿಸುತ್ತಾಳೆ, ಅಪ್ಪಿಕೊಳ್ಳುತ್ತಾಳೆ

ರೋಷದಲ್ಲಿ ದೂರ ತಳ್ಳಿ ದುಃಖಿಸುವಳು
ವಾತ್ಸಲ್ಯ ತೋರಿ ಹತ್ತಿರ ಕರೆಯುವಳು

ಒಲವಿನ ಸಾಲ ಕೊಡುತ್ತಾಳೆ
ನೋವಿನ ಬಡ್ಡಿ ಸೇರಿಸಿ ವಸೂಲಿ ಮಾಡುತ್ತಾಳೆ

ಹಣತೆ ಹಚ್ಚಿ ಮನ ಬೆಳಗುವಳು
ಕೋಪದಲ್ಲಿ ನನ್ನನ್ನೇ ಜ್ವಲಿಸುವಳು

ಪ್ರತೀ ಮಾತಿಗೂ ಕರಗುತ್ತಾಳೆ
ಕೊನೆಗೆ ಕೊರಗಿ ಸೊರಗಿ ಕೂರುತ್ತಾಳೆ

ಒಮ್ಮೆ ಕವನ, ಒಮ್ಮೆ ಕಥೆ
ಒಮ್ಮೊಮ್ಮೆ ಕ್ಲಿಷ್ಟ ಕಾದಂಬರಿಯಾಗುತ್ತಾಳೆ

ಆದರೂ ಅವಳೇ ನನಗೆ ಸ್ಪೂರ್ತಿ
ನನ್ನನ್ನು ಸೋಲಿಸಲು ಬರುವ ಜಯ ಅವಳು

ನೂರು ನೋವಿನ ನಡುವೆ ಬದುಕುವ ಅವಳು
ನನ್ನ ಉಸಿರಿಗೆ ಉಸಿರಾಗಿ ಬೆರೆಯುತ್ತಾಳೆ
- ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
---------------
ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231, ಮೊ. ಸಂ: 9448570340
Email:- skotnekal@Gmail.com



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize