ಕೊಪ್ಪಳ : ಕಾರ್ಖಾನೆ ವಿರುದ್ದ ಆರಂಭವಾಗಿರುವ ಹೋರಾಟ ಸಣ್ಣ ಪ್ರಮಾಣ ಅಂತ ಅಂದುಕೊಳ್ಳೊದು ಬೇಡ. ನಾವು ದೃಢ ನಿರ್ಧಾರದಿಂದ ಹೋರಾಡಿದರೆ ಯಶಸ್ವಿಯಾಗುತ್ತೇವೆ ಏಕೆಂದರೆ ಇದು ನಮ್ಮ ಉಸಿರಿಗಾಗಿ ಹೋರಾಟ , ಸ್ವಚ್ಛ ಗಾಳಿಗಾಗಿ ಹೋರಾಟ ಎಂದು ಜುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷರು ಗುರುರಾಜ ರಾಯ್ಕರ್ ಹೇಳಿದರು.
ಕಾರ್ಖಾನೆ ವಿರುದ್ದ ನಡೆದಿರುವ ಅನಿರ್ದಿಷ್ಟ ಧರಣಿಯಲ್ಲಿ ಬುಧವಾರ ಅಸೋಸಿಯೇಶನ್ ಯಿಂದ ಭಾಗವಹಿಸಿ ಮಾತನಾಡಿದರು.
ಈ ಹೋರಾಟ ಸಣ್ಣ ಪ್ರಮಾಣದ್ದು ಅಲ್ಲ. ನಾವು ದೃಢ ಆಗೋಣ ದೃಢ ನಿರ್ಧಾರ ಮಾಡೋಣ ಏಕೆಂದರೆ ಈ ಹೋರಾಟ ನಮ್ಮೆಲ್ಲರ ಉಳಿವಿಗಾಗಿ. ನಮ್ಮಉಸಿರಿಗಾಗಿ ಹೋರಾಟ. ಒಗ್ಗಟ್ಟಿನಿಂದ ಹೋರಾಡಿದರೆ ನಾವು ಯಶಸ್ವಿಯಾಗುತ್ತೇವೆ ಕೊಪ್ಪಳ ಸುಂದರವಾಗಿ ಉಳಿಯುತ್ತೆ ಎಂದರು.
ಸಂವಿಧಾನ ದಿನಾಚರಣೆ ನಿಮಿತ್ತ ಧರಣಿಯಲ್ಲಿ ಸಂವಿಧಾನ ಪೀಠಿಕೆ ವಾಚನ ನಡೆಯಿತು.
ಧರಣಿಯಲ್ಲಿ ಜುವೆಲರ್ಸ್ ಅಸೋಸಿಯೇಷನ್ನ ಅನಂತ ಕುಮಾರ್ ಜಂತಗಲ್, ವಾಸಿಂ ಅಕ್ರಂ, ಪಂಪಣ್ಣ ದುರ್ಗಾ ಜುವೆಲರ್ಸ್, ಕಿರಣ್ ಪವಾರ್, ಕೃಷ್ಣ ಚಿತ್ರಗಾರ, ಗಜೇಂದ್ರ ಚಿತ್ರಗಾರ, ಅರುಣ್ ಕಾಳಿಕಾ ಜುವೆಲರ್ಸ್, ಮೌನೇಶ ಎಂ, ವೀರಭದ್ರಪ್ಪ ಜಂತಕಲ್, ಸೋಮನಾಥ ಸಿ.ಜೆ., ರವೀಂದ್ರ ಮೋಹಿತೆ ಓಕೆ ಜುವೆಲರ್ಸ್, ರಮೇಶ್ ಕಲಾಲ್, ಗಣೇಶ್ ಸಿದ್ದಮ್ಮನಹಳ್ಳಿ, ಬಸವರಾಜ್ ಕೊಡೇಕಲ್, ವಿಜಯ್ ಎನ್ಕೆ, ಪ್ರಕಾಶ್ ವೆರ್ಣೇಕರ್, ದಿಲೀಪ್ ರಾಯ್ಕರ್, ಮಹೇಶ್ ಮನ್ನಾಪುರ್, ಶಂಕರ್ ಶೇಟ್, ರಾಘವೇಂದ್ರ ಕೊಡೇಕಲ್, ವಸಂತ ಕುರುಡೇಕರ್, ರಾಘವೇಂದ್ರ ರೇವಣಕರ್, ಓಬಳೇಶ ಪಾಲ್, ವಿಮಲ್ ಜೈನ್, ಕುಬೇರ್ ದೇವಪೂರ, ಕೇದಾರನಾಥ ದೇವಪೂರ, ಮಂಜುನಾಥ ವೆರ್ಣೇಕರ್, ಯಾಸೀನ್ ಕಿಲ್ಲೇದಾರ್ ಇತರರು ಉಪಸ್ಥಿತರಿದ್ದರು.