Advt. 
 Views   156

ಹಳೆ ದಿನಗಳ ನೆನಪು ಆ ಕಾಲದ ಕನಸು… ಈ Kite ಬ್ರದರ್ಸ್ ಗಾಳಿಪಟ !

Nov 20, 2025, 07:26 AM IST
ಹಳೆ ದಿನಗಳ ನೆನಪು  ಆ ಕಾಲದ ಕನಸು… ಈ Kite ಬ್ರದರ್ಸ್ ಗಾಳಿಪಟ !

ಕೊಪ್ಪಳ : ಬಾಲ್ಯ ಪ್ರತಿಯೊಬ್ಬರ ಬದುಕಿನಲ್ಲಿ ಸುವರ್ಣ ಯುಗ ಇದ್ದಂತೆ ಎಷ್ಟೇ ಹಣ ಕೊಟ್ಟರು ಎಷ್ಟೇ ಸಂಪತ್ತು ಇದ್ದರು ಬಾಲ್ಯ ಮತ್ತೆ ಮರಳಿ ಬರಲ್ಲ.

ಆದರೆ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಸಿನಿಮಾ ಬಂದಿದೆ ಅದೆ Kite ಬ್ರದರ್ಸ್. ಇದು ಬರಿ ಬಾಲ್ಯಕ್ಕೆ ಕರೆದುಕೊಂಡು ಅಷ್ಟೇ ಅಲ್ಲ ನಿಮ್ಮನ್ನ ಬಾಲ್ಯದಲ್ಲಿ ತೇಲಾಡಿಸಿ ನಗಿಸಿ ಹಗುರಾಗಿಸಿ ಕೊನೆಗೆ ಕಣ್ಣಂಚಲ್ಲಿ ಹನಿ ತರಿಸುತ್ತೆ ಈ ಸಿನಿಮಾ.

ಇದರ ನಿರ್ದೇಶಕರು ವೀರೇನ್ ಸಾಗರ್ ಬಗಾಡೆ ಹಾಗೂ ಕಾರ್ಯಕಾರಿ ನಿರ್ಮಾಪಕರು ವಿನೋದ್ ಬಗಾಡೆ. ಇಬ್ಬರು ಮೂಲತಃ ಕೊಪ್ಪಳದವರು.

Kite ಅಂದ್ರೆ ಗಾಳಿಪಟ. ನಮ್ಮ ದೇಹ ನೆಲದ ಮೇಲಿದ್ದರೂ ಗಾಳಿಪಟ ನಮ್ಮ ಆಸೆ ಕನಸು ದೃಷ್ಟಿ ಎಲ್ಲವನ್ನೂ ಆಕಾಶಕ್ಕೆ ಒಯ್ಯುತ್ತೆ. ಗಾಳಿಪಟದ ದಾರ ಮಾತ್ರ ನಮ್ಮ ಕೈಯಲ್ಲಿರಬೇಕು ಅಷ್ಟೆ.

ಇದು ಇಬ್ಬರು ಗೆಳೆಯರು ಬಾಲ್ಯದ ನೆನಪುಗಳೊಂದಿಗೆ ತಾವು ಕಲಿತ, ಕುಸಿದು ಬಿದ್ದ ಶಾಲೆಯನ್ನು ಹೇಗೆ ಕಟ್ಟುತ್ತಾರೆ ಎಂಬುದು ಒಂದು ಸಣ್ಣ ಎಳೆಯಾದರೂ ಇದು ಬರಿ ಮಕ್ಕಳು ನೋಡುವ ಸಿನಿಮಾ ಅಲ್ಲ. ಮಕ್ಕಳ ಜೊತೆ ಪಾಲಕರು ಕೂಡ ನೋಡುವ ಸಿನಿಮಾ. ಏಕೆಂದರೆ ಪಾಲಕರ ಬದುಕಿನಲ್ಲಿ ಬಾಲ್ಯ ಬಂದು ಹೋಗಿರುತ್ತಲ್ಲ !

ನವೆಂಬರ್ 21ರಿಂದ ಕೊಪ್ಪಳದ ಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರತಿದಿನ ಸಾಯಂಕಾಲ 6ಕ್ಕೆ , ರಾತ್ರಿ 9ಕ್ಕೆ ಶೋ ಇರುತ್ತದೆ. ನೋಡಿ ಆನಂದಿಸಿರಿ.

ವಿರೇನ್ ಬಗಾಡೆ ಮತ್ತು ವಿನೋದ್ ಬಗಾಡೆ ಕೊಪ್ಪಳದ ಕುಂಬಾರ ಓಣಿ ಶಾಲೆ, ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ ನಲ್ಲಿ ಓದಿ ಬೆಳೆದು ಬೆಂಗಳೂರು ತಲುಪಿ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಇವರಿಗೆ ಪ್ರೋತ್ಸಾಹಿಸಿ.
------------
ಗಾಳಿಯ ಮೊರೆತಕ್ಕೆ ನಗುವ ಗಾಳಿಪಟ
ಮೋಡಗಳ ನೆರಳಲ್ಲಿ ಮಗುಚುವ ಬಣ್ಣಗಳು
ದಾರ ಹಿಡಿದ ಕೈಗಳಲ್ಲಿ ಪುಳಕ
ಹಳೆ ದಿನಗಳ ನೆನಪು, ಆ ಕಾಲದ ಕನಸು…ಈ ಗಾಳಿಪಟ !



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize