ಕೊಪ್ಪಳ : ಕೋರ್ಟ ನ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ದುರುಳನೊಬ್ಬ ಪತ್ನಿ ಅತ್ತೆ ಮಾವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಇಂದು ಕೊಪ್ಪಳದಲ್ಲಿ ಜರುಗಿದೆ.
ವೈವಾಹಿಕ ಜೀವನದ ವಾಜ್ಯ ನಿಮಿತ್ಯ ಕೋರ್ಟ್ ನಲ್ಲಿ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ಕೌನ್ಸಿಲಿಂಗ್ ಮುನ್ನ ಈ ಘಟನೆ ನಡೆದಿದೆ.
ಕಾರಟಗಿ ತಾಲೂಕು ಸಿದ್ದಾಪುರದ ಚಿರಂಜೀವಿ ಭೋವಿ ಎಂಬಾತನೆ ಹಳೆ ಕುಮಟಾದ ತನ್ನ ಪತ್ನಿ ರೋಜಾ , ಅತ್ತೆ ಶಾಂತಮ್ಮ , ಮಾವ ಶಂಕ್ರಪ್ಪ ಇವರಿಗೆ ಹಿಂದಿನಿಂದ ಬಂದು ಪೆಟ್ರೋಲ್ ಸುರುವಿದ್ದಾನೆ. ಬೆಂಕಿ ಹಚ್ಚಲು ಯತ್ನಿಸಿದ್ದಾನೆ.
12 ವರ್ಷದ ಹಿಂದೆ ಮದುವೆಯಾಗಿದ್ದು ಆಗಿನಿಂದ ನಿರಂತರ ಅಳಿಯ ಜಗಳ ಆಡುತ್ತಿದ್ದು ಪತ್ನಿ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಹಲ್ಲೆ ಮಾಡುವುದು ಸೇರಿದಂತೆ ಮಾನಸಿಕ ಹಿಂಸೆ ಕೊಡುತ್ತಿದ್ದ. ಈ ಕಾರಣದಿಂದ ಪತ್ನಿ ರೋಜಾ ಡಿವೋರ್ಸ್ ಗಾಗಿ ಕೋರ್ಟ್ ಮೊರೆ ಹೋಗಿದ್ದು ಇಂದು ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ಕೌನ್ಸಿಲಿಂಗ್ ನಡೆದಿತ್ತು.
ಈ ಸಂದರ್ಭ ಒಳ ಬಂದಿದ್ದ ಚಿರಂಜೀವಿ ಬ್ಯಾಗಿನಲ್ಲಿ ಪೆಟ್ರೋಲ್ ಬಾಟಲಿ ಇಟ್ಟುಕೊಂಡು ಬಂದಿದ್ಧಾನೆ. ಪತ್ನಿ ಅತ್ತೆ ಮಾವರಿಗೆ ಹಿಂದಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಾಗ ವಕೀಲರು ಬಚಾವ್ ಮಾಡಿದ್ದಾರೆ.
ಚಿರಂಜೀವಿಯನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.