Advt. 
 Views   56

ಕೊಪ್ಪಳ ಐಟಿ ಎಐ ಹಬ್ ಮಾಡಿ - ನಟ ಚೇತನ್

Nov 18, 2025, 06:58 AM IST
ಕೊಪ್ಪಳ ಐಟಿ ಎಐ ಹಬ್ ಮಾಡಿ - ನಟ ಚೇತನ್

ಕೊಪ್ಪಳ : ಬೆಂಗಳೂರಿಗೆ ಬಿಡದಿ ಹತ್ತಿರ 9 ಸಾವಿರ ಎಕರೆಯ ಐಟಿ ಹಬ್ ತರ್ತೀವಿ ಅಂತಾರೆ ಉಪಮುಖ್ಯಮಂತ್ರಿಗಳು. ಈಗಾಗಲೇ ಅಲ್ಲಿ ಭೂಮಿ ಸಮಸ್ಯೆ ಆಗಿದೆ. ಅದನ್ನು ಬಗೆಹರಿಸೋದು ಬಿಟ್ಟು ಅದಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆ. ಅದೇ ಐಟಿ - ಎಐ ಹಬ್ ಕೊಪ್ಪಳದಲ್ಲಿ ಮಾಡಬಹುದಲ್ಲ ಇದರಿಂದ ಈ ಭಾಗವೂ ಅಭಿವೃದ್ಧಿ ಆಗಿ ಉದ್ಯೋಗವೂ ಸಿಗುತ್ತೆ ಎಂದು ನಟ, ಸಾಮಾಜಿಕ ಹೋರಾಟಗಾರರ ಚೇತನ್ ಹೇಳಿದರು.

ಅವರು ಮಂಗಳವಾರ ಕೊಪ್ಪಳ ಹತ್ತಿರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ನಗರೀಕರಣ ಮಾಡುವುದಲ್ಲ. ಅಖಂಡ ಕರ್ನಾಟಕದ ಏಳಿಗೆ ಬಗ್ಗೆ ವಿಚಾರ ಮಾಡಬೇಕು ಹೊರತು ಬ್ಯಾಂಕ್ ಬ್ಯಾಲೆನ್ಸ್ , ಇಂಡಸ್ಟ್ರೀ ಮಾಫಿಯಾ, ವೈಯಕ್ತಿಕ ಬೆಳವಣಿಗೆ ಹೆಚ್ಚು ಮಾಡಿಕೊಳ್ಳುವುದಲ್ಲ.

ಕಾರ್ಖಾನೆಗಳಿಂದ ಈ ಭಾಗದ 28 ಬೃಹತ್ ಕಾರ್ಖಾನೆ ಸೇರಿ ನೂರಾರು ಕಾರ್ಖಾನೆಗಳಿಂದ ಪರಿಸರ ನಾಶ, ಆರೋಗ್ಯಕ್ಕೆ ಹಾನಿ ಆಗ್ತಿದೆ. ಇಲ್ಲಿನ ಉದ್ಯೋಗ ಪರ ರಾಜ್ಯದವರಿಗೆ ಸಿಗ್ತಿದೆ. ಕಾರ್ಖಾನೆಗಳಿಂದ ಲಾಭ ಶೇ. 1 ಇರುವ ಶ್ರೀಮಂತರಿಗೆ ಸಿಗ್ತಿದೆ. ಆದರೆ ಇಲ್ಲಿ ರೈತರ ಭೂಮಿ, ಬೆಳೆ ಹಾಳಾಗಿವೆ. ಕ್ಯಾನ್ಸರ್‌ ಬರ್ತಿದೆ. ಕಾರ್ಖಾನೆಗಳಿಂದ ಲಾಭ ಪಡೆಯುವ ಮಾಲೀಕ ವರ್ಗಕ್ಕೆ ಹೆಚ್ಚಿನ ತೆರಿಗೆ ಹಾಕಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸುಧಾರಿಸಬೇಕು.

ಎಲ್ಲ ಹೋರಾಟಗಳಿಂದ ಪರಿಹಾರ ಸಿಗಲ್ಲ. ಶಾಶ್ವತ ಪರಿಹಾರ ಬೇಕು ಅಂದ್ರೆ ಸಮಾನತೆ, ಸಂವಿಧಾನ ಒಪ್ಪುವ ನಾವು ಕಾನೂನು ರೂಪಿಸುವವರು ಆಗಬೇಕು. ಜನಪರವಾದ ಈ ಕೊಪ್ಪಳದ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize