ಕೊಪ್ಪಳ : ದೆಹಲಿ ಕೆಂಪುಕೋಟೆ ಹತ್ತಿರ ನಿನ್ನೆ ನಡೆದ ಭೀಕರ ಸ್ಫೋಟ ಹಿನ್ನೆಲೆ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಕೊಪ್ಪಳ ಬಸ್ ನಿಲ್ದಾಣದಲ್ಲಿ ಪೊಲೀಸರು ಪರಿಶೀಲನೆ ಸಂದರ್ಭದಲ್ಲಿ 'ಬಿಂದು ಡಾಗ್ ಸ್ಕ್ವಾಡ್' ಗಾಂಜಾ ಪತ್ತೆ ಹಚ್ಚಿದೆ.
ಜಾರ್ಖಂಡ್ ನ ಆರು ಯುವಕರ ತಂಡ ಕೆಲಸಕ್ಕಾಗಿ ಯಲಬುರ್ಗಾಕ್ಕೆ ಹೊರಟಿದ್ದು ಅವರ ಬ್ಯಾಗ್ ನಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಓಡಿ ಹೋಗಿದ್ದಾರೆ. ಅವರಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಗಾಂಜಾ ಪ್ರಮಾಣ ತಿಳಿದು ಬಂದಿಲ್ಲ.
ದೆಹಲಿ ಘಟನೆ ನಂತರ ನಿನ್ನೆ ತಡರಾತ್ರಿಯಿಂದಲೇ ಪೊಲೀಸರು ಕಟ್ಟೆಚ್ಚರವಹಿಸಿದ್ದು ತುಂಗಭದ್ರಾ ಆಣೆಕಟ್ಟು ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲೆಯ ವಿವಿಧೆಡೆ ಪರಿಶೀಲನೆ ನಡೆದಿದೆ.