ಕೊಪ್ಪಳ : ಟಿಪ್ಪರ್ ಗಳ ರಾಕ್ಷಸ ವೇಗಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಗೌರಿ ಹುಣ್ಣಿಮೆ ನಿಮಿತ್ಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದ ಭಕ್ತ ಟಿಪ್ಪರ್ ನಿಂದಾಗಿ ಸಾವು ಕಂಡಿದ್ದಾರೆ.
ಈ ಘಟನೆ ತಾಲೂಕಿನ ಬೂದಗುಂಪಾ ಹತ್ತಿರ NH 50 ರಲ್ಲಿ ಆಗಿದ್ದು ಆಟೋಗೆ ಟಿಪ್ಪರ್ ಹಿಂದಿನಿಂದ ಡಿಕ್ಕಿ ಹೊಡೆದು ಬಸವರಾಜ ಕತ್ತಿ ಎಂಬುವವರು ಜೀವ ಕಳೆದುಕೊಂಡಿದ್ದಾರೆ. ಇವರು ಇಳಕಲ್ ನ ಗೊರೆಬಾಳನವರು.
ಗೌರಿ ಹುಣ್ಣಿಮೆ ಮುಗಿಸಿಕೊಂಡು ಸಂಬಂಧಿಕರ ಊರಾದ ಶಹಪುರದಲ್ಲಿ ಇದ್ದರು. ತಾಯಿ ಲಕ್ಷ್ಮವ್ವ ಜೊತೆ ಇಬ್ಬರು ಮಕ್ಕಳಾದ ಬಸವರಾಜ ಕತ್ತಿ ಮತ್ತು ಕೃಷ್ಣ ಕತ್ತಿ ಆಟೋದಲ್ಲಿ ವಾಪಸ್ ಊರಿಗೆ ಹೊರಟಿದ್ದರು.
ವಿಪರೀತ ವೇಗವಾಗಿ ಬಂದ ಟಿಪ್ಪರ್ ಆಟೋಗೆ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಬಸವರಾಜ ಕತ್ತಿ ಕೆಳಗೆ ಬಿದ್ದಾಗ ಅವರ ಮೇಲೆ ಟಿಪ್ಪರ್ ಹೋಗಿ ಅವರು ಸ್ಥಳದಲ್ಲಿಯೆ ಸಾವಿಗೀಡಾಗಿದ್ದಾರೆ. ಉಳಿದವರು ಗಾಯಗೊಂಡಿದ್ದಾರೆ.
ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.