Advt. 
 Views   318

ಕಾರ್ಖಾನೆ ವಿಸ್ತರಣೆ ನಿಲ್ಲಿಸಲು ಸ್ವಾಮಿಜಿ ಹೋರಾಟ ಮುಂದುವರೆಸಲು ಚಾಮರಸ ಪಾಟೀಲ್ ವಿನಂತಿ

Nov 01, 2025, 06:21 AM IST
ಕಾರ್ಖಾನೆ ವಿಸ್ತರಣೆ ನಿಲ್ಲಿಸಲು ಸ್ವಾಮಿಜಿ ಹೋರಾಟ ಮುಂದುವರೆಸಲು ಚಾಮರಸ ಪಾಟೀಲ್ ವಿನಂತಿ

ಕೊಪ್ಪಳ : ಇಲ್ಲಿನ ಗವಿಮಠಕ್ಕೆ ಬಹಳ ದೊಡ್ಡ ಶಕ್ತಿ ಇದೆ. ಕಾರ್ಖಾನೆ ವಿಸ್ತರಣೆ ವಿರೋಧಿ ಹೋರಾಟವನ್ನು ಗವಿಮಠದ ಸ್ವಾಮಿಜಿಯವರು ಮುಂದುವರೆಸಿ ಕಾರ್ಖಾನೆ ವಿಸ್ತರಣೆ ನಿಲುಗಡೆ ಆಗೋವರೆಗೂ ಕೊಂಡೊಯ್ಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು ಚಾಮರಸ ಪಾಟೀಲ್ ವಿನಂತಿ ಮಾಡಿದರು.

ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ ಗವಿಮಠಕ್ಕೆ ಬಹು ದೊಡ್ಡ ಭಕ್ತ ಸಮೂಹ ಇದೆ.‌ ರೈತರಿಗಷ್ಟೆ ಅಲ್ಲ. ಜನಸಾಮಾನ್ಯರ ಆರೋಗ್ಯದ ಮೇಲೂ ಕಾರ್ಖಾನೆಯಿಂದ ಕೆಟ್ಟ ಪರಿಣಾಮ ಆಗ್ತದೆ. ಸ್ವಾಮಿಜಿಯವರು ಮೌನ ಅನುಷ್ಠಾನ ಮಾಡುತ್ತಿದ್ದಾರೆ.‌ ಅದರ ಜೊತೆಗೆ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಪತ್ರ ಬರೆದು ಈ ಬಗ್ಗೆ ಒತ್ತಾಯ ಮಾಡಬೇಕು ಎಂದು ವಿನಂತಿಸಿದರು.

ತುಂಗಭದ್ರಾ ಜಲಾಶಯ ಸುತ್ತ ನೂರಾರು ಕಾರ್ಖಾನೆಗಳ ಹೊಗೆ ಧೂಳಿನಿಂದ ನೀರು ಕಲುಷಿತಗೊಂಡಿದೆ. ನಮ್ಮ ಭಾಗದಲ್ಲಿ ಮೊದಲೆಲ್ಲ ಎಡದಂಡೆ ಕಾಲುವೆಯಲ್ಲಿ ತಿಳಿ ನೀರು ಬರುತ್ತಿತ್ತು. ಕುಡಿಯಬಹುದಿತ್ತು. ಆದರೆ ಈಗ ಆ ನೀರು ಸ್ನಾನ ಮಾಡಿದರೆ ತುರಿಕೆ ಬರುತ್ತೆ.

ಕೊಪ್ಪಳ ಹತ್ತಿರವೆ ದೊಡ್ಡ ಫ್ಯಾಕ್ಟರಿ ಬಂದ್ರೆ ಏನು ಗತಿ.‌ ಈಗಾಗಲೇ ಫ್ಯಾಕ್ಟರಿ ಇರುವ ಹಳ್ಳಿ ಜನರ ಆರೋಗ್ಯ ಹಾಳಾಗಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆ ವಿಸ್ತರಣೆ ಆಗಬಾರದು. ಹಿಂದೆ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಆ ಭಾಗದ ಸ್ವಾಮಿಜಿ ವಿರೋಧಿಸಿದರು. ರೈತ ಸಂಘ ಕೂಡ ಅವರ ಹೋರಾಟಕ್ಕೆ ಬೆಂಬಲ ನೀಡಿತ್ತು ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷರು ಬಡಗಲಪುರ ನಾಗೇಂದ್ರ, ಕಾರ್ಯಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ , ಜಿಲ್ಲಾಧ್ಯಕ್ಷರು ಭೀಮಸೇನ ಕಲಕೇರಿ, ಎನ್.ಡಿ. ವಸಂತಕುಮಾರ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize