Advt. 
 Views   210

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೇರಿ ಇಬ್ಬರ ವಿರುದ್ದ ದೂರು

Oct 28, 2025, 07:35 PM IST
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೇರಿ ಇಬ್ಬರ ವಿರುದ್ದ ದೂರು

ಕೊಪ್ಪಳ : ನಿನ್ನೆ ಬೆಣಕಲ್ ನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ಹಾಗೂ ಅದೇ ಗ್ರಾಮದ ಬೀರಪ್ಪ ಎಂಬುವವರ ವಿರುದ್ದ ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ತಾಯಿ ಬಸಮ್ಮ ನೀಡಿದ ದೂರಿನಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ FIR ಆಗಿದೆ.

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮಿ ಹಾಗೂ ಅದೆ ಗ್ರಾಮದ ಬೀರಪ್ಪ ನಡುವೆ ಅನೈತಿಕ ಸಂಬಂಧ ಇತ್ತು.‌ ಇದು ಗೊತ್ತಾಗಿ ಕುಟುಂಬದಲ್ಲಿ ಬುದ್ದಿವಾದ ಹೇಳಿದರೂ ಸಂಬಂಧ ಮುಂದುವರೆದಿತ್ತು.

ಆತ್ಮಹತ್ಯೆಗೆ ಒಂದು ದಿನ ಮುಂಚೆ ಲಕ್ಷ್ಮಿ ಗೆ ಬೀರಪ್ಪನ ಸಂಗ ಬೀಡುವಂತೆ ಹೇಳಲಾಗಿತ್ತು. ಆದರೆ ಮರುದಿನ ಬೀರಪ್ಪ ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಾ ನಾನು ಕರೆದುಕೊಂಡು ಹೋಗುತ್ತೇನೆ ಇಬ್ಬರು ಸೇರಿ ಜೀವನ ಮಾಡೋಣ ಅಂತ ಒತ್ತಾಯಿಸಿದ್ದಾನೆ.‌ ಅಲ್ಲದೆ ನೀನು ಬರದಿದ್ದರೆ ನಿನ್ನ ಸಾಯಿಸಿ ನಾನೂ ಸಾಯ್ತೀನಿ ಅಂದಿದ್ದಾನೆ ಬೀರಪ್ಪ.

ಇದು ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿ ಈ ಬಗ್ಗೆ ಬುದ್ದಿವಾದ ಹೇಳಿದರಾಯ್ತು ಅಂದುಕೊಂಡ ದಿನ ಮಧ್ಯಾಹ್ನ ಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನು ನೇಣಿಗೆ ಶರಣಾಗಿದ್ದಾಳೆ.

ನೀನು ಬರದಿದ್ದರೆ ನಿನ್ನ ಸಾಯಿಸಿ ನಾನು ಸಾಯ್ತೀನಿ ಅಂದಿದ್ದಕ್ಕೆ ಬೀರಪ್ಪ ನನ್ನನ್ನು ಬೀಡುವುದಿಲ್ಲ ನನ್ನ ಮಕ್ಕಳು ಅನಾಥ ಆಗ್ತವೆ ಎಂದು ಹೆದರಿ ಲಕ್ಷ್ಮಿ ಮಕ್ಕಳನ್ನು ಸಾಯಿಸಿ ನೇಣಿಗೆ ಶರಣಾದರೆ ಬೀರಪ್ಪ ಜೈಲಿಗೆ ಹೋದ.‌

ಲಕ್ಷ್ಮಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize