Advt. 
 Views   114

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೇರಿ ಇಬ್ಬರ ವಿರುದ್ದ ದೂರು

Oct 28, 2025, 07:35 PM IST
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೇರಿ ಇಬ್ಬರ ವಿರುದ್ದ ದೂರು

ಕೊಪ್ಪಳ : ನಿನ್ನೆ ಬೆಣಕಲ್ ನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ಹಾಗೂ ಅದೇ ಗ್ರಾಮದ ಬೀರಪ್ಪ ಎಂಬುವವರ ವಿರುದ್ದ ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ತಾಯಿ ಬಸಮ್ಮ ನೀಡಿದ ದೂರಿನಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ FIR ಆಗಿದೆ.

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮಿ ಹಾಗೂ ಅದೆ ಗ್ರಾಮದ ಬೀರಪ್ಪ ನಡುವೆ ಅನೈತಿಕ ಸಂಬಂಧ ಇತ್ತು.‌ ಇದು ಗೊತ್ತಾಗಿ ಕುಟುಂಬದಲ್ಲಿ ಬುದ್ದಿವಾದ ಹೇಳಿದರೂ ಸಂಬಂಧ ಮುಂದುವರೆದಿತ್ತು.

ಆತ್ಮಹತ್ಯೆಗೆ ಒಂದು ದಿನ ಮುಂಚೆ ಲಕ್ಷ್ಮಿ ಗೆ ಬೀರಪ್ಪನ ಸಂಗ ಬೀಡುವಂತೆ ಹೇಳಲಾಗಿತ್ತು. ಆದರೆ ಮರುದಿನ ಬೀರಪ್ಪ ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಾ ನಾನು ಕರೆದುಕೊಂಡು ಹೋಗುತ್ತೇನೆ ಇಬ್ಬರು ಸೇರಿ ಜೀವನ ಮಾಡೋಣ ಅಂತ ಒತ್ತಾಯಿಸಿದ್ದಾನೆ.‌ ಅಲ್ಲದೆ ನೀನು ಬರದಿದ್ದರೆ ನಿನ್ನ ಸಾಯಿಸಿ ನಾನೂ ಸಾಯ್ತೀನಿ ಅಂದಿದ್ದಾನೆ ಬೀರಪ್ಪ.

ಇದು ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿ ಈ ಬಗ್ಗೆ ಬುದ್ದಿವಾದ ಹೇಳಿದರಾಯ್ತು ಅಂದುಕೊಂಡ ದಿನ ಮಧ್ಯಾಹ್ನ ಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನು ನೇಣಿಗೆ ಶರಣಾಗಿದ್ದಾಳೆ.

ನೀನು ಬರದಿದ್ದರೆ ನಿನ್ನ ಸಾಯಿಸಿ ನಾನು ಸಾಯ್ತೀನಿ ಅಂದಿದ್ದಕ್ಕೆ ಬೀರಪ್ಪ ನನ್ನನ್ನು ಬೀಡುವುದಿಲ್ಲ ನನ್ನ ಮಕ್ಕಳು ಅನಾಥ ಆಗ್ತವೆ ಎಂದು ಹೆದರಿ ಲಕ್ಷ್ಮಿ ಮಕ್ಕಳನ್ನು ಸಾಯಿಸಿ ನೇಣಿಗೆ ಶರಣಾದರೆ ಬೀರಪ್ಪ ಜೈಲಿಗೆ ಹೋದ.‌

ಲಕ್ಷ್ಮಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 13 2025 7:19AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಣಿಕೇರಿ PACS ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
Nov 13 2025 4:42AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ನೀರು ಕೊಡಲೇಬೇಕು ! ಕೊಡದಿದ್ದರೆ ಡ್ಯಾಂಗೆ ಮುತ್ತಿಗೆ : ಶ್ರೀರಾಮುಲು ಎಚ್ಚರಿಕೆ
Nov 12 2025 6:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : 3 ಲಕ್ಷ ರೂ ಬೆಲೆಯ ಗಾಂಜಾ ವಶ
Nov 11 2025 5:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರತಿಭಟನೆಗೆ ಕಟ್ಟಡ ಕಾರ್ಮಿಕರು ಟಿಪ್ಪರ್ ಮಾಲೀಕರು ಬೆಂಬಲ
Nov 10 2025 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಸ್ ಸ್ಟಾಂಡ್ ಗಾಂಜಾ ಪತ್ತೆ ಹಚ್ಚಿದ ಡಾಗ್ ಸ್ಕ್ವಾಡ್
Nov 10 2025 4:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಲ್ಡೋಟಾ ಕಾರ್ಖಾನೆಯಲ್ಲಿ ಕಾರ್ಮಿಕನ ಸಾವು
Nov 9 2025 7:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನವೆಂಬರ್ 12 ರಂದು ಗುತ್ತಿಗೆದಾರರ ಪ್ರತಿಭಟನೆ
Nov 8 2025 8:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಗಂಗಾವತಿ : ಕಾಲುವೆಯಲ್ಲಿ ಈಜಲು ಹೋದ ಇಬ್ಬರಲ್ಲಿ ಓರ್ವ ಕಾಣೆ
Nov 7 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
Nov 7 2025 7:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹೆಬ್ಬಾವಿನ ಹಿಡಿತಕ್ಕೆ ಸಿಕ್ಕು ಪ್ರಾಣ ಬಿಟ್ಟ ಕೋತಿ




Copyright © 2025 Agni Divya. All Rights Reserved.
Designed & Developed by We Make Digitize