Advt. 
 Views   499

ಕೊಪ್ಪಳ : ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯುವಂತೆ ಪಿಯು ಉಪನ್ಯಾಸಕರ–ಪ್ರಾಚಾರ್ಯರ ಒತ್ತಾಯ

Oct 23, 2025, 04:58 PM IST
ಕೊಪ್ಪಳ : ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯುವಂತೆ ಪಿಯು ಉಪನ್ಯಾಸಕರ–ಪ್ರಾಚಾರ್ಯರ ಒತ್ತಾಯ

ಕೊಪ್ಪಳ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿ ಪರಿಶೀಲನೆ ಕುರಿತು ಶಾಲಾ ಶಿಕ್ಷಣ ಇಲಾಖೆ ಹಾಗೂ ಡಿ.ಎಸ್.ಇ.ಅರ್.ಟಿ. ಜಂಟಿಯಾಗಿ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಪಿಯು ಕಾಲೇಜುಗಳ ಉಪನ್ಯಾಸಕ ಮತ್ತು ಪ್ರಾಚಾರ್ಯರ ಸಂಘಗಳು ಆರೋಪಿಸಿವೆ.

“ಕಾಲೇಜುಗಳ ಶೈಕ್ಷಣಿಕ ಮತ್ತು ಇತರೆ ಸೌಲಭ್ಯಗಳ ಪರಿಶೀಲನೆಗೆ ನಮ್ಮದು ವಿರೋಧವಿಲ್ಲ. ಆದರೆ ಇಲಾಖೆಗೆ ಸಂಬಂಧಿಸದ ಡಯಟ್‌ ಅಧಿಕಾರಿಗಳು ಹಾಗೂ ಉಪನ್ಯಾಸಕರು ಪರಿಶೀಲನೆ ನಡೆಸುವುದು ತರವಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಈ ಸುತ್ತೋಲೆಯಿಂದ ನೌಕರರಲ್ಲಿ ಅಭದ್ರತೆ ಉಂಟಾಗಿದೆ. ಆದ್ದರಿಂದ ಇದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಜಿಲ್ಲಾ ಉಪನಿರ್ದೇಶಕ ಜಿ.ಎಚ್. ಜಗದೀಶ ಅವರ ಮುಖಾಂತರ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ಕಾರ್ಯದರ್ಶಿ ಬಸವರಾಜ, ಕಜಾಂಚಿ ಟಿ.ಸಿ. ಶಾಂತಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಹಿರಿಯ ಪ್ರಾಚಾರ್ಯರು ರಾಜಶೇಖರ ಪಾಟೀಲ್, ಶಿವಾನಂದ, ಮಂಜುನಾಥ ಸ್ವಾಮಿ, ಉಪನ್ಯಾಸಕರು ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ರಾಚಪ್ಪ ಕೇಸರಬಾವಿ, ಕೆ.ಎಸ್. ಹುಲಿ, ಎಸ್.ವಿ. ಮೇಳಿ, ಕೆ.ಎಚ್. ಕೊಳ್ಳಣ್ಣನವರ್, ಶಿವಾನಂದ ಮೇಟಿ, ಲಲಿತಮ್ಮಾ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 13 2025 7:19AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಣಿಕೇರಿ PACS ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
Nov 13 2025 4:42AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ನೀರು ಕೊಡಲೇಬೇಕು ! ಕೊಡದಿದ್ದರೆ ಡ್ಯಾಂಗೆ ಮುತ್ತಿಗೆ : ಶ್ರೀರಾಮುಲು ಎಚ್ಚರಿಕೆ
Nov 12 2025 6:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : 3 ಲಕ್ಷ ರೂ ಬೆಲೆಯ ಗಾಂಜಾ ವಶ
Nov 11 2025 5:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರತಿಭಟನೆಗೆ ಕಟ್ಟಡ ಕಾರ್ಮಿಕರು ಟಿಪ್ಪರ್ ಮಾಲೀಕರು ಬೆಂಬಲ
Nov 10 2025 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಸ್ ಸ್ಟಾಂಡ್ ಗಾಂಜಾ ಪತ್ತೆ ಹಚ್ಚಿದ ಡಾಗ್ ಸ್ಕ್ವಾಡ್
Nov 10 2025 4:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಲ್ಡೋಟಾ ಕಾರ್ಖಾನೆಯಲ್ಲಿ ಕಾರ್ಮಿಕನ ಸಾವು
Nov 9 2025 7:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನವೆಂಬರ್ 12 ರಂದು ಗುತ್ತಿಗೆದಾರರ ಪ್ರತಿಭಟನೆ
Nov 8 2025 8:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಗಂಗಾವತಿ : ಕಾಲುವೆಯಲ್ಲಿ ಈಜಲು ಹೋದ ಇಬ್ಬರಲ್ಲಿ ಓರ್ವ ಕಾಣೆ
Nov 7 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
Nov 7 2025 7:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹೆಬ್ಬಾವಿನ ಹಿಡಿತಕ್ಕೆ ಸಿಕ್ಕು ಪ್ರಾಣ ಬಿಟ್ಟ ಕೋತಿ




Copyright © 2025 Agni Divya. All Rights Reserved.
Designed & Developed by We Make Digitize