Advt. 
 Views   455

ಭಾಗ್ಯನಗರ ಕೈಮಗ್ಗ ಸೀರೆ ರಫ್ತು ಉತ್ತೇಜನಕ್ಕೆ ಮನವಿ

Oct 18, 2025, 11:56 AM IST
ಭಾಗ್ಯನಗರ ಕೈಮಗ್ಗ ಸೀರೆ ರಫ್ತು ಉತ್ತೇಜನಕ್ಕೆ  ಮನವಿ

ಕೊಪ್ಪಳ : ವಿಶ್ವ ಪ್ರಸಿದ್ದ ಭಾಗ್ಯನಗರ ಕೈ ಮಗ್ಗ ಸೀರೆ ರಫ್ತಿಗೆ ಉತ್ತೇಜನ ಸಿಗಲು ಕ್ರಮ ವಹಿಸುವಂತೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಅವರು, ಗುರುವಾರ ಕೊಪ್ಪಳ ತಾಲೂಕಿನ ಮುನಿರಾಬಾದ ಗ್ರಾಮದ ಬಳಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು.

ಭಾಗ್ಯನಗರ ಕೈ ಮಗ್ಗ ಸೀರೆಗೆ ತನ್ನದೇ ಆದ ಇತಿಹಾಸವಿದೆ. ಆದರೆ, ಈಚೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಸಿಗದೆ ಇರುವುದರಿಂದ ಇದೇ ವೃತ್ತಿ ಜೀವನ ಸಾಗಿಸುತ್ತಿರುವ ನೇಕಾರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಕೈ ಮಗ್ಗ ಸೀರೆ ವಿದೇಶಗಳಿಗೆ ರಫ್ತು ಮಾಡಲು ಅವಕಾಶ ಕಲ್ಪಿಸಿದರೆ ಸೂಕ್ತ ಮಾರುಕಟ್ಟೆ ದೊರೆಯಲಿದೆ.

ಜತೆಗೆ ದೇಶಿಯವಾಗಿ ಕೇಂದ್ರ ಸರಕಾರ, ಸಮರ್ಪಕ ಮಾರುಕಟ್ಟೆ ಒದಗಿಸಲು ಆದ್ಯತೆ ನೀಡಬೇಕು ಎಂದು ವೀರೇಶ ಮಹಾಂತಯ್ಯನಮಠ ಅವರು ಕೇಂದ್ರ ಸಚಿವರ ಬಳಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೈಮಗ್ಗದ ಮಾಲೀಕರಾದ ಉಮೇಶ್ ಚಾಮರದ , ಎಸ್.ಅಭಯ್ ಕುಮಾರ್ ಸೇರಿದಂತೆ ಇತರರು ಇದ್ದರು.

ಎಚ್.ಡಿ.ದೇವೆಗೌಡರ ಆರೋಗ್ಯ ವಿಚಾರಣೆ:
ಮಾಜಿ ಪ್ರಧಾನಿ ದೇವೆಗೌಡ್ರರ ಕುಟುಂಬದೊಂದಿಗೆ ವೀರೇಶ ಮಹಾಂತಯ್ಯನಮಠ ಅವರು ಅತ್ಯಾಪ್ತತೆ ಹೊಂದಿರುವುದರಿಂದ ಮನವಿ ಸ್ವೀಕರಿಸಿದ ವೇಳೆ ನಿರ್ಮಲಾ ಸೀತಾರಾಮನ್ ಅವರು, ದೇವೆಗೌಡರ ಅವರ ಆರೋಗ್ಯದ ಬಗ್ಗೆ ಮಹಾಂತಯ್ಯನಮಠ ಅವರ ಬಳಿ ವಿಚಾರಿಸಿದರು. ನನಗೆ ಖುದ್ದಾಗಿ ಭೇಟಿಯಾಗಲು ಸಮಯ ಸಿಕ್ಕಿಲ್ಲ. ಆದರೆ, ದೂರವಾಣಿ ಮೂಲಕ ದೇವೆಗೌಡ್ರು ಅವರೊಂದಿಗೆ ಮಾತನಾಡುವೆ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇದೇ ವೇಳೆ ತಿಳಿಸಿದರು.

ಬಳಿಕ ವೀರೇಶ ಮಹಾಂತಯ್ಯನಮಠ ಅವರು, ಎಚ್.ಡಿ. ದೇವೆಗೌಡರ ಜೀವನ ಆಧಾರಿತ ನೇಗಿಲು ಗರಿ ಇಂಗ್ಲೀಷ್ ಪ್ರತಿಯ ಪುಸ್ತಕವನ್ನು ಸಚಿವರಿಗೆ ಉಡುಗೊರೆಯಾಗಿ ನೀಡಿದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize