Advt. 
 Views   248

ಕೊಪ್ಪಳ : ಕನ್ನೇರಿ ಮಠದ ಸ್ವಾಮಿಜಿ ಬಂಧನಕ್ಕೆ ಆಗ್ರಹ

Oct 17, 2025, 06:49 PM IST
ಕೊಪ್ಪಳ : ಕನ್ನೇರಿ ಮಠದ ಸ್ವಾಮಿಜಿ ಬಂಧನಕ್ಕೆ ಆಗ್ರಹ

ಕೊಪ್ಪಳ : ಬಸವ ತತ್ವ ಶರಣ ತತ್ವ ಅವಮಾನಿಸಿರುವ ಕನ್ನೇರಿ ಮಠದ ಅದೃಷ್ಯ ಕಾಡ ಸಿದ್ದೇಶ್ವರ ಸ್ವಾಮಿಜಿ ಅವರನ್ನು ಬಂಧಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ತತ್ವ ಸಂಘಟನೆ ಪ್ರಮುಖರು ಅಶೋಕ ಸರ್ಕಲ್ ನಲ್ಲಿ ಆಗ್ರಹಿಸಿದರು. ‌

ಅ. 9 ರಂದು ಮಹಾರಾಷ್ಟ್ರದ ಜತ್ ತಾಲೂಕು ಬೀರೂರು ಗ್ರಾಮದಲ್ಲಿ ನಡೆದ ಬಸವ ಪರಂಪರೆಯ ವಿರಕ್ತ ಮಠದ ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ ಅವಾಚ್ಯ ಭಾಷೆ ಬಳಸಿ ಅಪಮಾನ ಮಾಡಿದ್ದಾರೆ.‌ ಈ ಸಂದರ್ಭದಲ್ಲಿ ಮಾನಹಾನಿಕಾರಕ ಶಬ್ದ ಬಳಸಿ, ಲಿಂಗಾಯತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರು ಎಂದು ಅಪಮಾನಿಸಿದ್ದಾರೆ.

ಶಾಂತಿ ಭಂಗ ಮಾಡುವ, ಕೋಮುಗಲಭೆ ಮಾಡುವ ಜನರ ಮಧ್ಯೆ ವಿಷ ಬೀಜ ಬಿತ್ತುವ ಕನ್ನೇರಿ ಮಠದ ಸ್ವಾಮಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಂತರ ಅಶೋಕ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ತಹಶಿಲ್ದಾರ ಕಚೇರಿಗೆ ತೆರಳಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ಯುವಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟನ ಅಧ್ಯಕ್ಷ ಗುಡದಪ್ಪ ಹಡಪದ, ರಾಷ್ಟ್ರೀಯ ಬಸವದಳ ಅಧ್ಯಕ್ಷ ಶಿವಬಸಯ್ಯ ವೀರಾಪೂರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ ಕುಕನೂರ, ಕಾರ್ಯದರ್ಶಿ ಸೋಮನಗೌಡ ವಗರನಾಳ, ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ವಣಗೇರಿ, ಕಾರ್ಯದರ್ಶಿ ಶರಣ ಬಸವನಗೌಡ ಪಾಟೀಲ್, ವೀರಭದ್ರಪ್ಪ ನಂದ್ಯಾಳ, ಬಾಪುಗೌಡ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ನಾಲ್ವಾಡ, ತಾಲೂಕ ಬಣಜಿಗ ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣಾ ಬಳ್ಳೊಳ್ಳಿ, ಮುಖಂಡರಾದ ಮಾರುತಿ ಅಂಗಡಿ, ಮಂಜುನಾಥ ಶೇಡದ, ಮುತ್ತಣ್ಣ ಬೀರಲದಿನ್ನಿ, ಪರಪ್ಪ ಗೊಂದಿಹೊಸಳ್ಳಿ, ಈಶಪ್ಪ ದಿನ್ನಿ, ದೇವೀಶ ಗಬ್ಬೂರ, ಶರಣಬಸವ ಬಳ್ಳಾರಿ, ರೇಣಕಪ್ಪ ಮಂತ್ರಿ, ಮಂಜುನಾಥ ಹಿರೇಮಠ, ಕಳಕಪ್ಪ ವಿವೇಕಿ, ಶಂಕ್ರಪ್ಪ ಟಣಕನಕಲ್, ಸಂಗಮೇಶ ಕಡಗದ, ಮಹಿಳಾ ಮುಖಂಡರಾದ ಈರಮ್ಮ ಕೊಳ್ಳಿ, ಶಿಲ್ಪಾ ಸಸಿಮಠ, ನಿರ್ಮಲಾ, ವಿಶಾಲಾಕ್ಷಿ, ಮಲ್ಲಮ್ಮ ಕಡಗದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 13 2025 7:19AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಣಿಕೇರಿ PACS ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
Nov 13 2025 4:42AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ನೀರು ಕೊಡಲೇಬೇಕು ! ಕೊಡದಿದ್ದರೆ ಡ್ಯಾಂಗೆ ಮುತ್ತಿಗೆ : ಶ್ರೀರಾಮುಲು ಎಚ್ಚರಿಕೆ
Nov 12 2025 6:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : 3 ಲಕ್ಷ ರೂ ಬೆಲೆಯ ಗಾಂಜಾ ವಶ
Nov 11 2025 5:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರತಿಭಟನೆಗೆ ಕಟ್ಟಡ ಕಾರ್ಮಿಕರು ಟಿಪ್ಪರ್ ಮಾಲೀಕರು ಬೆಂಬಲ
Nov 10 2025 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಸ್ ಸ್ಟಾಂಡ್ ಗಾಂಜಾ ಪತ್ತೆ ಹಚ್ಚಿದ ಡಾಗ್ ಸ್ಕ್ವಾಡ್
Nov 10 2025 4:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಲ್ಡೋಟಾ ಕಾರ್ಖಾನೆಯಲ್ಲಿ ಕಾರ್ಮಿಕನ ಸಾವು
Nov 9 2025 7:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನವೆಂಬರ್ 12 ರಂದು ಗುತ್ತಿಗೆದಾರರ ಪ್ರತಿಭಟನೆ
Nov 8 2025 8:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಗಂಗಾವತಿ : ಕಾಲುವೆಯಲ್ಲಿ ಈಜಲು ಹೋದ ಇಬ್ಬರಲ್ಲಿ ಓರ್ವ ಕಾಣೆ
Nov 7 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
Nov 7 2025 7:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹೆಬ್ಬಾವಿನ ಹಿಡಿತಕ್ಕೆ ಸಿಕ್ಕು ಪ್ರಾಣ ಬಿಟ್ಟ ಕೋತಿ




Copyright © 2025 Agni Divya. All Rights Reserved.
Designed & Developed by We Make Digitize