Advt. 
 Views   2139

ಏಳು ತಲೆಮಾರಿನಿಂದ ನಮ್ಮ ಸ್ವಂತ ಆಸ್ತಿ : ಹುಜೂರ್ ಅಹ್ಮದ್

Mar 06, 2025, 08:58 PM IST
ಏಳು ತಲೆಮಾರಿನಿಂದ ನಮ್ಮ  ಸ್ವಂತ ಆಸ್ತಿ : ಹುಜೂರ್ ಅಹ್ಮದ್

ಕೊಪ್ಪಳ ನಗರದ ಮಧ್ಯ ಭಾಗ ಜವಾಹರ ರಸ್ತೆ ಮತ್ತು ಹಸನ್ ರಸ್ತೆ ಮಧ್ಯೆ ಇರುವ 17 ಪ್ಲಾಟ್ ಗಳು  ವಕ್ಫ ಆಸ್ತಿಯಲ್ಲ ಅವು ನಮ್ಮ ಪಾರಂಪರಿಕ ಆಸ್ತಿ ಆಗಿದ್ದು ಏಳು ತಲೆಮಾರುಗಳಿಂದ ನಮ್ಮ ಕುಟುಂಬದ ಆಸ್ತಿಯಾಗಿದೆ ಎಂದು ಎಸ್ಡಿಪಿಐ ಜಿಲ್ಲಾ ಮಾಜಿ ಅಧ್ಯಕ್ಷರಾದ ಹುಜೂರ್ ಅಹ್ಮದ್ ಹೇಳಿದರು.

ಅವರು ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಫೆ. 2 ರಂದು ಸೈ. ಯಾಕೂಬ್ ಹುಸೇನಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ನಮ್ಮ ತಾತ ನೂರ್ ಅಹ್ಮದ್ ಅವರ ಹೆಸರಿನಲ್ಲಿ ಈ ಪ್ಲಾಟ್ ಗಳಿಗೆ 1962 ರಲ್ಲಿ ಮ್ಯೂಟೇಶನ್ ನೀಡಲಾಗಿದೆ. ಒಂದು ವೇಳೆ ನಮ್ಮ ಆಸ್ತಿ ವಕ್ಫಗೆ ದಾನ ಮಾಡಿದ್ದರೆ ಈ ಮ್ಯೂಟೇಶನ್ ನಮಗೆ ಸಿಗುತ್ತಿರಲಿಲ್ಲ. ನಮ್ಮ ಒಟ್ಟು ಏಳು ಪ್ಲಾಟ್ ಗಳ ಪೈಕಿ ಒಂದು ಪ್ಲಾಟ್ ನಲ್ಲಿ ಕಬರಸ್ತಾನ್ ಇದೆ. ಅದು ನಮ್ಮ ಪೂರ್ವಜರಿಗಾಗಿ ಮೀಸಲಾಗಿರುವ ಕುಟುಂಬದ ಸ್ಮಶಾನ ಆಗಿದೆ. ಅಲ್ಲಿ ಬೇರೆಯವರ ಸಮಾಧಿ ಇಲ್ಲ. 

 ನಮ್ಮ ವಿರುದ್ದ ಸುಳ್ಳು ಆರೋಪ ಮಾಡಿದವರ ಸಹೋದರ ನಮ್ಮ ಏರಿಯಾದಲ್ಲಿ ರಸ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸುತ್ತಿದ್ದು ಇದನ್ನು ವಿರೋಧಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ತಡೆಯಾಜ್ಞೆ ತಂದಿರುವೆ. ಇದಾದ ನಂತರ ನಮ್ಮ ವಿರುದ್ದ ಸುಳ್ಳು ಆರೋಪ , ದೂರು ನೀಡುವುದು ಮಾಡುತ್ತಿದ್ದಾರೆ. ಇವರ ದೂರು ಸುಳ್ಳು ಎಂದು ನಗರಸಭೆ ಸರ್ವೆನಲ್ಲಿ ಸಾಬೀತಾಗಿದೆ ಎಂದು ಹುಜೂರ್ ಅಹ್ಮದ ಹೇಳಿದರು.

ಈ ಸಂದರ್ಭದಲ್ಲಿ ಹುಜೂರ್ ಅವರ ಕುಟುಂಬಸ್ಥರಾದ ಮಹ್ಮದ ಇಸಾಕ್ ಅಹ್ಮದ್, ಎಂ.ಜಿ.ಸಕ್ಲೆನ್, ಶಕೀಲ್ ಅಹ್ಮದ್, ಫರೀದ್ ಅಹ್ಮದ್ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize