Advt. 
 Views   3869

ಒಲೆಯ ಮುಂದೆ ಊದುಗೋಳವಿ ಊದುತ್ತಿದ್ದವಳು...

Dec 31, 2023, 08:44 PM IST
ಒಲೆಯ ಮುಂದೆ ಊದುಗೋಳವಿ ಊದುತ್ತಿದ್ದವಳು...

ಅವ್ವ ನೀ ನನ್ನ‌ ಜೀವ ಕಣವ್ವ

ಮನೆಯ ಮುಂದಿನ 
ಕಟ್ಟೆಯ ಮೇಲೆ ಕುಳಿತು
ಅಡಕಿ ಚೀಲ ಹಿಡಿದು
ನಿಂತಿರುತ್ತಿದ್ದ ಜೀವ,
ಒಲೆಯ ಮುಂದೆ ಊದುಗೋಳವಿ ‌ಹಿಡಿದು
ಊದುತ್ತಿದ್ದವಳು ಕಾಣಲಿಲ್ಲ....
ಅರೇ ಕ್ಷಣ ಉಸಿರು ನಿಂತಂತಾಗಿತ್ತು.

ದ್ಯಾವರ ಕೋಣ್ಯಾಗಿನ ದೀಪ 
ಮಂದಗಾಗಿದ್ದು ತಿಳಿದು
ದೀಪದ ಕುಡಿ ಒಡೆದು ಬಂದಾಳೆಂದು
ಅಲ್ಲೆ ಜಗಲಿ ಮುಂದೆ ನಿಂತಿದ್ದೆ.
ಆಕಿ ಬರಲೇ ಇಲ್ಲ.
ನಮ್ಮವ್ವ ಬರಲೇ ಇಲ್ಲ....

ಎದುರು ಮನೆಯ ಲಚ್ಚವ್ವ
“ಲೋ ಸೂರಪ್ಪ ಇನ್ನೆಲ್ಲಿಯ ನಿಮ್ಮವ್ವ “
ಅಂದಾಗ ಭೂಮಿ ಬಾಯಿಬಿಟ್ಟಿತ್ತು
ನಾನು ಅಕ್ಷರಶಃ ಸತ್ತಿದೆ.
ದೇಹವಷ್ಟೇ ಉಸಿರಾಡುತ್ತಿತ್ತು.
ಅವ್ವ....ಅವ್ವ...ಅಂತಾ ಅಂದಾಗ
ಹೆಂಡತಿ ಕೈ ಹಿಡಿದು “ಏನಾಯಿತು ?”
ಎಂದಾಗಲೇ ಎಚ್ಚರವಾಗಿದ್ದು.

ಗಂಟಲು ಒಣಗಿ ಮಾತಾಡದಂತಾಗಿತ್ತು
ನನ್ನಾಕೆ ನನ್ನ ಸಾವರಿಸಿದಾಗಲೇ 
ತಿಳಿದದ್ದು
ಅದು ಕೆಟ್ಟ ಕನಸು....
ಅವ್ವನ ಕೋಣೆಗೆ ಹೋಗಿ 
ಮಲಗಿದ ಅವಳ ತಲೆ ಸವರಿದಾಗಲೆ
ಜನ್ಮಕ್ಕಿಷ್ಟು ಸಮಾಧಾನವಾಯಿತು.
ಅವಳಿಲ್ಲದ ಆ ಅರಿಗಳಿಗೆಯ
ನೆನಸಿಕೊಂಡರೆನೇ ಭಯ
ಅವ್ವ ನೀ ದೇವರು ಕಣವ್ವ.....

  - ಸುರೇಶ ತಂಗೋಡ



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Apr 13 2026 8:34AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಸ್ತೆ ಬದಿ ಯುವಕರಿಬ್ಬರ ಶವ ಪತ್ತೆ
Apr 11 2026 4:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ನಗರ ಬಿಜೆಪಿ ಮಂಡಲಕ್ಕೆ ನೂತನ ತಂಡ ಪ್ರಕಟ
Apr 11 2026 3:44AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಧ್ಯರಾತ್ರಿ ಹೊತ್ತಿನಲ್ಲಿ 10 ಹಂದಿ ಕಳ್ಳತನ
Apr 9 2026 6:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಾಲೇಜಿಗೆ ಹೆಮ್ಮೆ ತಂದ ಫಲಿತಾಂಶ
Apr 9 2026 5:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ SVC ಕಾಲೇಜು : ಮೊದಲ ಬ್ಯಾಚಿನ ಫಲಿತಾಂಶ ತಾಲೂಕಿಗೆ ಟಾಪ್
Apr 9 2026 6:49AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ತೀರದಲ್ಲಿ ಅಕ್ರಮ ಮರಳು ದಂಧೆ : ಜನರ ಆಕ್ರೋಶ
Apr 7 2026 7:22AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಿಂದಿ ಪರ ರಾಜ್ಯಪಾಲರು : ಕರವೇ ಆಕ್ರೋಶದ ಪ್ರತಿಭಟನೆ
Apr 6 2026 9:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಹಕ್ಕೊತ್ತಾಯ
Apr 6 2026 6:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಂಪಿ ಪ್ರಾಧಿಕಾರದಿಂದ ಮುಕ್ತಿ ಕೊಡಿ : ಕೊಪ್ಪಳದಲ್ಲಿ ಆಗ್ರಹ
Apr 4 2026 8:52AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಂಚಕ್ಕೆ ಕೈ ಚಾಚಿದ ಪೊಲೀಸರು ಲೋಕಾಯುಕ್ತರ ಬಲೆಗೆ




Copyright © 2026 Agni Divya. All Rights Reserved.
Designed & Developed by We Make Digitize