Advt. 
 Views   4041

ಫಿಲಿಫೈನ್ಸ್ ದೇಶದಲ್ಲಿ ಪ್ರದರ್ಶನಗೊಂಡ ಸಿನಿಮಾ !

Dec 14, 2023, 11:13 PM IST
ಫಿಲಿಫೈನ್ಸ್ ದೇಶದಲ್ಲಿ ಪ್ರದರ್ಶನಗೊಂಡ ಸಿನಿಮಾ !

ಕೊಪ್ಪಳ : ತಾಲೂಕಿನ ಬಿಸರಳ್ಳಿ ಮೂಲದ ಪ್ರತಿಭೆಗಳಾದ ಪ್ರತೀಕ್ ಮತ್ತು ಪ್ರೀತಮ್ ಜೊತೆ ಅನೇಕ ಬಾಲ ಪ್ರತಿಭೆಗಳು ನಟಿಸಿರುವ ಓ ನನ್ನ ಚೇತನ ಸಿನಿಮಾ ಡಿ. 15 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿಯೂ ಬಿಡುಗಡೆ ಇದೆ.

ರವಿಚಂದ್ರನ್ ರವರ ಫೆವರೆಟ್ ಸಿನಿಮಾ 'ಅಪೂರ್ವ' ದ ನಾಯಕಿ ಅಪೂರ್ವ ನಿರ್ದೇಶಿಸಿರುವ, ಯೋಗೇಶ್ - ರಾಧಿಕಾ ಪಂಡಿತ್ ನಟನೆಯ ಹಿಟ್ ಸಿನಿಮಾ 'ಅಲೆಮಾರಿ' ಯ ನಿರ್ದೇಶಕ ಹರಿ ಸಂತು ಕತೆ ಚಿತ್ರಕತೆ ಸಂಭಾಷಣೆ ಬರೆದಿರುವ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವಾರ್ಡ್ ಪಡೆದ , ಅಪ್ಪು ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿ ಪಡೆದ ಸಿನಿಮಾ ಓ ನನ್ನ ಚೇತನ. 

ಇಷ್ಟೆಲ್ಲ ಹೆಗ್ಗಳಿಕೆಯ ಈ ಸಿನಿಮಾದ ಇನ್ನೊಂದು ಹೆಗ್ಗಳಿಕೆ ಅಂದ್ರೆ ಈಗಾಗಲೇ ಓ ನನ್ನ ಚೇತನ  ಫಿಲಿಫೈನ್ಸ್ ದೇಶದಲ್ಲಿ ಹತ್ತಾರು ಶೋ ಕಂಡಿದೆ.

ಈ ಸಿನಿಮಾ ಶೂಟಿಂಗ್ ಆಗಿದ್ದೆ ಲಾಕ್ ಡೌನ್ ಟೈಂಲ್ಲಿ. ಹರಿ ಸಂತು ಅವರಿಗೆ ಲಾಕ್ ಡೌನ್ ಟೈಂಲ್ಲಿ ಅಮೇರಿಕಾದ ಚಿಕಾಗೊದಿಂದ ಡಾ. ನಾರಾಯಣ ಹೊಸ್ಮನೆಯವರು ಕರೆ ಮಾಡಿ ಮಾತನಾಡುತ್ತ 9 ವರ್ಷದ ಒಳಗಿನ ಮಕ್ಕಳ ಮೆದುಳಿನ ಕೋಶಗಳು ತುಂಬಾ ಸೂಕ್ಷ್ಮ ಆಗಿರುತ್ತವೆ. ಅವರಿಗೆ ಮೊಬೈಲ್ ಕೊಟ್ಟರೆ ಮುಂದೆ ಬ್ರೈನ್ ಟೂಮರ್ ಆಗುವ ಸಾಧ್ಯತೆ ಇರುತ್ತೆ ಅಂತ ಹೇಳಿ ಅಮೇರಿಕದಲ್ಲಿ ಬ್ರೈನ್ ಟೂಮರ್ ನಿಂದ ಮಕ್ಕಳಿಗೆ ಆಗಿರುವ ಹಾನಿ ಬಗ್ಗೆ ಹೇಳಿದ್ದಾರೆ.

ಇದು ಕೇಳಿದ ನಂತರ ಓ ನನ್ನ ಚೇತನ ಸಿನಿಮಾ ಕತೆ ಮೂಡಿದ್ದು.

ಲಾಕ್ ಡೌನ್ ಅಂದ್ರೆ  ಭಯದಲ್ಲಿ ಸಾವಿನ ಸುದ್ದಿ ಕೇಳುತ್ತಿದ್ದ ದಿನಗಳು. ಆಗ ಎಲ್ಲರಿಗೂ ಸಾಥ್ ಕೊಟ್ಟಿದ್ದು ಮೊಬೈಲ್. ಶಾಲಾ ಮಕ್ಕಳಿಗೆ ಮನೆಯಿಂದ ವಿದ್ಯೆ ಕಲಿಯೋಕೆ ಆನ್ ಲೈನ್ ಕ್ಲಾಸ್ ಆರಂಭವಾದವು.

ಅಂಥ ಮೊಬೈಲ್ ಎಫೆಕ್ಟ್ ಹೇಳುವ ಕತೆಯ ಈ ಸಿನಿಮಾ ಮಕ್ಕಳೊಂದಿಗೆ ಪಾಲಕರು ನೋಡಬೇಕಾದ ಮಕ್ಕಳ ಸಿನಿಮಾ ಇದು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize