Advt. 
 Views   1374
Mar 16 2022 11:26AM

ಆನೆಗೊಂದಿ ಹತ್ತಿರ ರಣವಿಕ್ರಮ ಶೂಟಿಂಗ್


ಬಹುಶಃ ಏಳು ವರ್ಷಗಳಾದವು. ತುಂಗಭದ್ರೆಯ ಮಗ್ಗುಲಲ್ಲಿ ಅಪ್ಪು ಅಭಿನಯದ 'ರಣವಿಕ್ರಮ' ಸಿನಿಮಾ ಶೂಟಿಂಗ್ ನಡೆದು. 

ಆನೆಗೊಂದಿ-ಹಂಪಿ ನಡುವೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಅರ್ಧ ಕಾಮಗಾರಿ ಆಗಿದ್ದಾಗ ಕುಸಿದು ಬಿತ್ತಲ್ಲ ಅದೇ ತುಂಗಭದ್ರಾ ನದಿ ಆಚೆ ಅಂದ್ರೆ ಹಂಪಿ ಕಡೆ ಗುಡ್ಡದ ಪ್ರದೇಶದಲ್ಲಿ ಪುನೀತ್ ರಾಜಕುಮಾರರವರ ' ರಣವಿಕ್ರಮ' ಸಿನಿಮಾಗಾಗಿ ಹಳ್ಳಿಯ ಸೆಟ್ ಹಾಕಲಾಗಿತ್ತು.

ಸ್ವಾತಂತ್ರ್ಯ ಪೂರ್ವ ಕಾಲದ 'ವಿಕ್ರಮ ತೀರ್ಥ' ಹಳ್ಳಿಯ ಸೆಟ್ ಅದು. ಅಲ್ಲಿ ಸೆಟ್ ಹಾಕುವವರೆಗೆ ಯಾರಿಗೂ ಸುಳಿವು ಇರಲಿಲ್ಲ ಅಲ್ಲಿ ಶೂಟಿಂಗ್ ನಡೆಯಲಿದೆ ಅಂತ. ನಂತರ ಶೂಟಿಂಗ್ ಆರಂಭವಾದ ಮೇಲೆ ಸುದ್ದಿ ಹಬ್ಬಿತು. 'ಪುನೀತ್ ರಾಜಕುಮಾರ ನಮ್ಮ ಜಿಲ್ಲೆ ಹತ್ತಿರ ಶೂಟಿಂಗ್ ಗೆ ಬಂದಿದ್ದಾರಾ' ಅನ್ನೋದು ಕೊಪ್ಪಳ ಜಿಲ್ಲೆಯವರ ಆನಂದದ ಉದ್ಘಾರ.

ದಿನೇ ದಿನೆ ಅಭಿಮಾ

ನಿಗಳು, ಸಿನಿಮಾ ಪ್ರಿಯರು ಸೆಟ್ ಬಳಿ ಜಮಾಯಿಸತೊಡಗಿದರು. ಮುರಿದು ಬಿದ್ದ ತೂಗು ಸೇತುವೆಯ ಅವಶೇಷಗಳ ಹತ್ರ ಬೆಳಗ್ಗೆಯೇ ಅಭಿಮಾನಿಗಳು ಹಾಜರ್. ತುಂಗಭದ್ರಾ ಆಚೆ ಸೆಟ್ ಗೆ ಬರಲಿರುವ ತಮ್ಮ ಆರಾಧ್ಯದ ಅಪ್ಪು ನೋಡಬೇಕು ಅನ್ನುವ ಆಸೆ. ಇಂಜಿನ್ ಚಾಲಿತ ಬೋಟ್ ಗಳು ನಿತ್ಯ ಸಾವಿರಾರು ಅಭಿಮಾನಿಗಳನ್ನು ಇತ್ತಕಡೆಯಿಂದ ಅತ್ತಕಡೆ ಕರೆದುಕೊಂಡು ಹೋಗಿ ಬರೋದು ಮಾಡತೊಡಗಿದವು. ಅವರಿಗೆ ಭರ್ಜರಿ ದುಡಿಮೆ.

ದಿನವೂ ಶೂಟಿಂಗ್ ನೋಡಲು ಬರುವ ಅಭಿಮಾನಿಗಳ ಸಂಖ್ಯೆ ಸಾವಿರಗಟ್ಟಲೆ ಹೆಚ್ಚಾಗತೊಡಗಿತು. ನದಿ ಪಕ್ಕದ ಗುಡ್ಡದಲ್ಲಿದ್ದ ಹಳ್ಳಿ ಸೆಟ್ ನಿಂದ ದೂರ ನಿಂತು ಅಭಿಮಾನಿಗಳು ಅಪ್ಪು ಅಪ್ಪು ಅಂತ ಅಭಿಮಾನದಿಂದ ಕೂಗುತ್ತಿದ್ದರು. ಆಗ ಅಪ್ಪು ದಿನಕ್ಕೆ ನಾಲ್ಕು ಸಲ ಅಭಿಮಾನಿಗಳ ಹತ್ತಿರ ಬಂದು ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದರು. ಅಭಿಮಾನಿಗಳತ್ತ ಕೈ ಬಿಸಿ ಅವರ ಖುಷಿ ಕಂಡು ಸಂತೋಷದಿಂದ ಸೆಟ್ ಗೆ ಹೋಗುತ್ತಿದ್ದರು.

ಶೂಟಿಂಗ್ ನಲ್ಲಿ ಹಿರಿಯ ನಟರಾದ ಅವಿನಾಶ್, ರಂಗಾಯಣ ರಘು, ನಾಯಕಿ ಅಂಜಲಿ ಸೇರಿದಂತೆ ನೂರಾರು ಕಲಾವಿದರು ಇರುತ್ತಿದ್ರು.

ಬಂಡೆ ಕಲ್ಲುಗಳ ಮಧ್ಯೆ ನಿಂತು ಅಪ್ಪು ನೋಡಲು ಕಾತರರಾಗಿ ನಿರಾಶೆಯಾದ ಅಭಿಮಾನಿಗಳು ಅರ್ಧ ಮುರಿದು ಬಿದ್ದ ಆನೆಗೊಂದಿ ಸೇತುವೆಯ ಉಳಿದ ಅವಶೇಷದ ಮೇಲೆ ಹತ್ತಿ ನಿಂತು ಅಪ್ಪು ನೋಡಲು ಪ್ರಯತ್ನಿಸುತ್ತಿದ್ರು.

ನಾವು ಹೋದ ಹಿಂದಿನ ದಿನ ಸಂಜೆ ಹಳ್ಳಿಯ ಸೆಟ್ ಹತ್ತಿರ ಇದ್ದ ನಿಜವಾದ ಕಲ್ಲಿನ ಮಂಟಪದ ಹತ್ತಿರ ಗೌರಿ....ಗೌರಿ ಹಾಡಿನ ಶೂಟಿಂಗ್ ಆಗಿತ್ತು. ಸುಮಾರು ದಿನ ಶೂಟಿಂಗ್ ನಡೆದು ರಣವಿಕ್ರಮ‌ ಬಿಡುಗಡೆ ಆಗಿ ಯಶಸ್ಸು ಕಂಡಿತು. 

ಇವತ್ತು ಅಪ್ಪು ಇಲ್ಲ. ಆನೆಗೊಂದಿ ಬಳಿ ಹೋದಾಗ ಅಪ್ಪು ಶೂಟಿಂಗ್ ನೆನಪಾಗುತ್ತವೆ.
-------------------------
ಟಿವಿ ರಿಪೋರ್ಟ್‌ರ್ ಒಬ್ಬಾಕೆ ವಿಕ್ರಮ ತೀರ್ಥ ಎಂಬ ಹಳ್ಳಿ ಬಗ್ಗೆ ಓದಿ ಅದನ್ನು ನೋಡಲು(ವರದಿಗಾಗಿ) ಹೋಗಿ ನಾಪತ್ತೆ ಆಗ್ತಾಳೆ. ಮುಂದೇನು ಕತೆ ? ಎಂಬುದು ರಣವಿಕ್ರಮ ನೋಡಿ (ನೋಡಿಲ್ಲವಾದರೆ)

ಬೆಂಗಳೂರಿನಲ್ಲಿ ಮೆಟ್ರೊ ಆರಂಭವಾದ ಮೇಲೆ ಮೆಟ್ರೊದಲ್ಲಿ ಶೂಟಿಂಗ್ ನಡೆದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ರಣವಿಕ್ರಮ ಸಿನಿಮಾದ್ದು.

 

 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize