Advt. 
 Views   719

ಮಕ್ಕಳಿಗೆ ಶಿಕ್ಷಣ ನೀಡುವುದೇ ದೊಡ್ಡ ಧರ್ಮ- ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು


ಕೊಪ್ಪಳ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪುರಸ್ಕಾರ ಮಾಡೋದು ಅತ್ಯುತ್ತಮ ಕಾರ್ಯ.

ಪ್ರತಿಭೆ ಯಾರ ಸೊತ್ತಲ್ಲ. ಅದು ಬಜಾರದಲ್ಲಿ ಸಿಗುವುದಿಲ್ಲ. ಪ್ರತಿಭೆ ಶ್ರೀಮಂತರ ಸೊತ್ತಲ್ಲ. ಅದು ಸಾಧಕರ ಸೊತ್ತು ಅನ್ನೋದಕ್ಕೆ ಸಾಕ್ಷಿ ಕಲಾಂ ಅವರು. ಅವರು ಹಡಗು ಕಟ್ಟುವವರ ಮಗ. ದೇಶ ಅಷ್ಟೇ ಅಲ್ಲ ವಿಶ್ವವೇ ಮೆಚ್ಚುವಂಥವರು ಆಗಿದ್ರು.

ದುಡ್ಡು ಇದ್ರೆ ಜಗತ್ತು ಆಳಬಹುದು ಅಲ್ಲ. ಜ್ಞಾನ ಇದ್ರೆ ಜಗತ್ತು ಆಳಬಹುದು. ಮೆದುಳಿನಲ್ಲಿ ಜ್ಞಾನ, ಹೃದಯದಲ್ಲಿ ಎಲ್ಲರ ಬಗ್ಗೆ ಪ್ರೇಮ ಇದ್ದರೆ ಜಗತ್ತು ಆಳಬಹುದು.

ಗಾಂಧಿಜಿಯವರನ್ನು ಮಹಾತ್ಮಾ ಅಂತ ಕರಿತಾರೆ. ಅವರು ಏಕೆ ದೊಡ್ಡವರಾದರು ಅಂದ್ರೆ ಅವರದು ದೊಡ್ಡ ಮನಸ್ಸು ಅದಕ್ಕೆ ಅವರು ದೊಡ್ಡವರಾದರು.

ಯಾವುದೇ ಜಾತಿ ಧರ್ಮ ಇರಲಿ ಮಾಡಬೇಕಾದ ದೊಡ್ಡ ಕೆಲಸ ಅಂದ್ರೆ ಮಕ್ಕಳಿಗೆ ಶಿಕ್ಷಣ ನೀಡುವುದು. ಅದಕ್ಕಿಂತ ದೊಡ್ಡ ಧರ್ಮವೇ ಇಲ್ಲ. 

ಒಂದು ಮಗು ಬೆಳೆದು ಯಶಸ್ಸು ಪಡೆಯಬೇಕಾದರೆ ಮೂರು ವಿಷಯಗಳು ಮುಖ್ಯ.- ಪರಿಸರ, ಪ್ರೇರಣೆ, ಪ್ರಯತ್ನ.
ಪರಿಸರ ಚೆನ್ನಾಗಿರಬೇಕು.  ಜೊತೆಗೆ ಪ್ರೇರಣೆ ಪ್ರಯತ್ನ ಬೇಕು. ಇವು ಇದ್ರೆ ಉನ್ನತ ಸಾಧನೆ ಸಾಧ್ಯ.
 ಬೀಜ ಸಸಿಯಾಗಿ ಗಿಡವಾಗಿ ಬೆಳೆಯಲು ಒಳ್ಳೆಯ ಮಣ್ಣು ಗೊಬ್ಬರ ನೀರು ಚೆನ್ನಾಗಿರಬೇಕು ಆಗ ಸಸಿ ಗಿಡವಾಗುತ್ತೆ. 

ವಿದ್ಯಾರ್ಥಿಗಳು ಒಂದೇ ಶಾಲೆ ಒಂದೇ ಕ್ಲಾಸ್ ಅದೇ ವಿಷಯ ಓದಿರ್ತಾರೆ ಆದರೆ ಪರೀಕ್ಷೆಯಲ್ಲಿ ಕೆಲವರು ರ‌್ಯಾಂಕ್ ಬಂದ್ರೆ ಕೆಲವರು ಫೇಲ್ ಆಗಿರ್ತಾರೆ ಕಾರಣ ಪರಿಸರ ಚೆನ್ನಾಗಿದ್ದರೂ ಪ್ರೇರಣೆ ಬೇಕು.

ಬಿದಿರು ಕಟ್ಟಿಗೆ ಆಯುವವನ ಕೈಗೆ ಸಿಕ್ಕರೆ ಒಲೆಗೆ ಹೋಗಿ ಕರಕಲ ಆಗುತ್ತದೆ. ಅದು ಕೊಳಲು ಮಾಡುವವನ ಕೈಗೆ ಹೋದರೆ ದೇವರ ಕೈಗೆ ತಲುಪುತ್ತದೆ. ಅದಕ್ಕೆ ಹೇಳೋದು ಪರಿಸರ ಮುಖ್ಯ ಅಂತ.

ಯಾರಿಗೆ ತಂದೆ ತಾಯಿ ಹೀರೋ ಆಗಲ್ಲವೋ ಅವರ ಜೀವನ ಜೀರೋ. ನಮ್ಮ ತಂದೆ ತಾಯಿ ಶ್ರಮ ಅವರ ಬೆವರ ಹನಿ, ಅವರ ಜೀವನ ನಮಗೆ ಪ್ರೇರಣೆ ಆಗಬೇಕು. ಮಕ್ಕಳಿಗೆ ತಂದೆ ತಾಯಿ ಕೊಡಲಿಕ್ಕೆ ಸಾಧ್ಯ ಇರೋದು ಎರಡೇ. ಒಂದು ಶಿಕ್ಷಣ ಇನ್ನೊಂದು ಸಂಸ್ಕಾರ.

ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡದು ಪ್ರಯತ್ನ. ಎಷ್ಟೇ ಸೋಲು ಆಗಲಿ ಪ್ರಯತ್ನ ಮಾಡಬೇಕು. ಜೀವನದ ನಿಜವಾದ ಸೌಂದರ್ಯ ಅಂದ್ರೆ ಬಿದ್ದವರು ಎದ್ದು ನಡೆಯೋದು ಓಡೋದು. ಕಷ್ಟ ಅಪಮಾನ ನೋವುಗಳ ಮಧ್ಯೆಯೂ ಸಾಧನೆ ಮಾಡಬೇಕು



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 25 2024 8:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಗನವಾಡಿಯ ಪುಷ್ಠಿ ಪೌಷ್ಠಿಕವಾಗಿದೆ : ಡಾ.ದಾಬಡೆ
Jul 25 2024 8:40AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶುಕ್ರವಾರ ಕೊಪ್ಪಳಕ್ಕೆ ಪ್ರತಾಪ್ ಸಿಂಹ ಮಲ್ಲಿಕಾರ್ಜುನ ಬಾಳಿಕಾಯಿ
Jul 25 2024 8:29AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಳಕಲ್ ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ
Jul 20 2024 8:43PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನದಾಫ್ /ಪಿಂಜಾರ ಅಭಿವೃದ್ದಿ ನಿಗಮ - ಅನುದಾನಕ್ಕೆ ಆಗ್ರಹ
Jul 20 2024 8:37PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಸೆಕ್ಯೂರ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಚಿಕಿತ್ಸೆ
Jul 20 2024 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ‌ ಬೇಡಿಕೆ ಬಗ್ಗೆ ಶಾಸಕರು ಸದನದಲ್ಲಿ ಧ್ವನಿ ಎತ್ತಲಿ
Jul 19 2024 5:54PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅರಣ್ಯ ಇಲಾಖೆ ಕಾರ್ಯಾಚರಣೆ - ಜಿಂಕೆ ಮಾಂಸ ಚರ್ಮ ಮಾರಾಟದ ಆರೋಪಿ ಅರೆಸ್ಟ್
Jul 19 2024 10:24AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರೈಲಿಗೆ ಸಿಲುಕಿ ಮೂವರು ಯುವಕರು ದಾರುಣ ಸಾವು
Jul 19 2024 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುನಿರಾಬಾದ್ ಠಾಣೆಯ ASI ರಾಮಣ್ಣ ಸಾವು
Jul 15 2024 8:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಿಗಮದ ಸಾಲ ಸೌಲಭ್ಯಗಳಿಗೆ ಶಾಸಕರ ಹಸ್ತಕ್ಷೇಪ ಬೇಡ





     
Copyright © 2021 Agni Divya News. All Rights Reserved.
Designed & Developed by We Make Digitize