Advt. 
 Views   972
Aug 24 2022 3:45PM

ನಾಡಕವಿ ದಿ.ಗವಿಸಿದ್ದ ಎನ್.ಬಳ್ಳಾರಿಯವರ ಕೊಪ್ಪಳ ಜಿಲ್ಲೆಯ ಹೋರಾಟದ ಹಾಡು


ಕೊಪ್ಪಳ ಜಿಲ್ಲೆಯಾಗಬೇಕು
ಕಿಲ್ಲೆಮ್ಯಾಲೆ ಝಂಡಾ ಹಾರಬೇಕು.

ಕವಿರನ್ನ ಹಾಡಿದಂತ ಬೆಟ್ಟಸಾಲು
ಇಂದ್ರಕೀಲ ಇರುವುದಿಲ್ಲಿ
ಜೈನ ಮುನಿಪುಂಗವರು
ತಪಗೈದ ನಾಡಿದು.

ಮೌರ್ಯದರಸು ಶೌರ್ಯದರಸು
ಹಾದು ಹೋದ ನಾಡಿದು
ಸ್ವಾತಂತ್ರ್ಯಕ್ಕಾಗಿ ಮಾಡಿ
ಮಡಿದ ವೀರರ ನೆಲೆವೀಡು.
ಅಶೋಕ ಶೋಕ ಶಾಸನಗಳು
ಸಾರುತಿವೆ ಹಿಂಸೆ ಬೇಡವೆಂದು
ಬುದ್ಧ ಸಂದೇಶ ಹೊತ್ತ ಪ್ರಬುದ್ಧರ
ಸಿದ್ಧ ಪುರುಷರ ನಾಡಿದು.

ಕೊಪ್ಪಳ ಜಿಲ್ಲೆಯಾಗಬೇಕು
ಕಿಲ್ಲೆಮ್ಯಾಲೆ ಝಂಡಾ ಹಾರಬೇಕು

ಕವಿ ಚಕ್ರವರ್ತಿ ನೃಪತುಂಗ
ಸಾರಿದ ತಿರುಳ್ ಗನ್ನಡ ಸೀಮೆ
ಕನ್ನಡದ ಕರುಳೆಂದು
ನಾಡಿನೊಳು ಇದಕ್ಕೆ ದೊಡ್ಡ ಹಿರಿಮೆ.

ಕನ್ನಡಕ್ಕೆ ಕುತ್ತು ಬಂದಾಗ
ಕೈ ಎತ್ತಿದ ಈ ಊರು
ಆಗಾಗ ಎಳದೈತೆ ಕನ್ನಡದ ತೇರು
ಜಿಲ್ಲೆಗಾಗಿ ಮಾಡೈತೆ ಜೋರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Feb 9 2025 11:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೈಕ್ ಗಳ ಅಪಘಾತ ಓರ್ವ ಸಾವು
Feb 8 2025 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಏನೇ ಬದಲಾವಣೆ ನಿರ್ಧಾರ ಹೈಕಮಾಂಡ್ ಮಾಡಲಿದೆ : ಸಚಿವ ರಾಜಣ್ಣ
Feb 8 2025 8:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಪಾಸಣೆ ನೆಪದಲ್ಲಿ RTO - ಸಿಬ್ಬಂದಿ ಕಿರಿಕ್ : ಲಾರಿ ಡ್ರೈವರ್ ಪ್ರತಿಭಟನೆ
Feb 8 2025 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದೆಹಲಿ ಸ್ಥಿತಿ ಕರ್ನಾಟಕ ಕಾಂಗ್ರೆಸ್ ಗೂ ಬರಲಿದೆ : ಡಾ. ಬಸವರಾಜ
Feb 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತ ವಿರೋಧಿ ಮೂರು ಕಾಯ್ದೆ ವಾಪಸ್ ಪಡೆಯದ ರಾಜ್ಯ ಸರಕಾರ
Feb 6 2025 8:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಲಿ
Feb 5 2025 10:20PM | ವೈವಿಧ್ಯ | ವಿಷ್ಮಯ ಡಾ ಸಿದ್ದರಾಮ ಹೊನ್ಕಲ್ ಸಮಗ್ರ ಗಜಲ್ ಕೃತಿ ಕುರಿತು ಬರಹ
Feb 5 2025 8:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಲಾರಿ ಡಿಕ್ಕಿ ಬೈಕ್ ಸವಾರ ಸಾವು
Feb 5 2025 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ದೇವಸ್ಥಾನ ಬಳಿ ನವಜಾತ ಶಿಶು ಪತ್ತೆ
Feb 4 2025 10:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಂಭಮೇಳಕ್ಕೆ ತೆರಳಿದ್ದ ಯುವಕ ಸಾವು





     
Copyright © 2021 Agni Divya News. All Rights Reserved.
Designed & Developed by We Make Digitize