Advt. 
 Views   3883
Jul 26 2022 10:09PM

ಅವರಿಲ್ಲದ ನೋವು- ಅವರ ಕೃತಿ ಬಿಡುಗಡೆ ಖುಷಿ : ಇದೂ ನಮಗೆ ಸಮರಸ


ಕೊಪ್ಪಳ : ದಾಂಪತ್ಯ ಬದುಕಿನಲ್ಲಿ , ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಜೊತೆಯಾಗಿ ಸಾಗಿದವರು ದಿ.ಗುರುಲಿಂಗಯ್ಯ ಹಿರೇಮಠ ಹಾಗೂ ದಿ.ಶ್ರೀಮತಿ ಶಾಂತಾದೇವಿ ಹಿರೇಮಠರವರು.

ದಂಪತಿಗಳು ರಚಿಸಿದ ಸಾಹಿತ್ಯ ಒಂದೇ ಕೃತಿಯಾಗಿ 'ಸಮರಸ' (ಕವನ ಸಂಕಲನ) ಹೆಸರಿನಲ್ಲಿ ಪ್ರಕಟವಾಗಿದ್ದು ಇದೇ ಜುಲೈ 31 ರಂದು ಬಿಡುಗಡೆಯಾಗಲಿದೆ. ದುಃಖ ಅಂದ್ರೆ ಸಮರಸ ಕವನ ಸಂಕಲನದ ಸಾಹಿತ್ಯಕ ದಂಪತಿಗಳು ಈಗ ಇಲ್ಲ ಎಂಬುದು.

'ಸಮರಸ' ಕೃತಿ ಬಗ್ಗೆ ಶಾಂತಾದೇವಿ ಅಮ್ಮರಿಗೆ ಬಹಳ ಕಾಳಜಿ, ನಿರೀಕ್ಷೆ ಇತ್ತು. ಕೃತಿಯ ಮುದ್ರಣದ ಓಡಾಟದ ಜವಾಬ್ದಾರಿಯನ್ನು ಅಕ್ಬರ್ ಕಾಲಿಮಿರ್ಚಿಯವರಿಗೆ ವಹಿಸಿದರು.

ಸಾಹಿತಿ ಈಶ್ವರ ಹತ್ತಿಯವರು ಮುನ್ನುಡಿ ಬರೆದರು.

ವಿಜಯಲಕ್ಷ್ಮೀ ಮೇಡಂ ಸಾಹಿತ್ಯ ಬಳಗ ಕೃತಿಯನ್ನು ಸಮಗ್ರ ಪರಿಶೀಲಿಸಿತು.

ಕೃತಿ ಸಿದ್ದವಾಗುವ ಹೊತ್ತಿಗೆ ಅಮ್ಮನವರಿಗೆ ಅನಾರೋಗ್ಯ ಕಾಡಿತು. ಸ್ವಲ್ಪ ಚೇತರಿಸಿಕೊಂಡರು ಆದ್ರೆ ಕೃತಿ ಬಿಡುಗಡೆ ಮುಂಚೆ ಹೊರಟು ಹೋದರು.

ದಂಪತಿಗಳ ತಲಾ 51 ಕವನಗಳು 'ಸಮರಸ' ಸಂಕಲನದಲ್ಲಿವೆ. ಜುಲೈ 31 ರವಿವಾರ ಬೆಳಗ್ಗೆ 10.30 ಕ್ಕೆ ಕೊಪ್ಪಳದ ತಾ.ಪಂ.ಸಭಾಂಗಣದಲ್ಲಿ ಸಂಕಲನ ಬಿಡುಗಡೆ ಇದೆ. 

ಸಾಹಿತಿ .ಎಂ.ಮದರಿ ಕವನ ಸಂಕಲನ ಬಿಡುಗಡೆಗೊಳಿಸುವರು.

ಕವನ ಸಂಕಲನ ಕುರಿತು ಮೊಳಕಾಲ್ಮೂರಿನ ಕವಿ ಜಬೀವುಲ್ಲಾ ಅಸದ್ ಮಾತನಾಡಲಿದ್ದಾರೆ.

ಹಿರಿಯ ಸಾಹಿತಿಗಳಾದ ಹೆಚ್. ಎಸ್. ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ.

ಅವರಿಲ್ಲ ಎಂಬ ನೋವು ಒಂದೆಡೆ
ಅವರ ಕೃತಿ ಬಿಡುಗಡೆ ಖುಷಿ ಇನ್ನೊಂದೆಡೆ. 
ಇದೂ ಕೂಡ ನಮ್ಮ ಪಾಲಿಗೆ 'ಸಮರಸ'



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 10 2025 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದ - ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ





     
Copyright © 2021 Agni Divya News. All Rights Reserved.
Designed & Developed by We Make Digitize