Advt. 
 Views   864
Jul 23 2022 9:57PM

ಕೊಪ್ಪಳ : ವಿದ್ಯಾರ್ಥಿ ಬಳಗದಿಂದ ಲೋಕಾರ್ಪಣೆಯಾಗಲಿವೆ ಮಹತ್ವದ ಕೃತಿಗಳು


ಕೊಪ್ಪಳದಲ್ಲಿ ಜುಲೈ 24 ರವಿವಾರ ಅಪರೂಪದ ಮತ್ತು ವಿಶೇಷ ಸಾಹಿತ್ಯಕ ಕಾರ್ಯಕ್ರಮ ಜರುಗಲಿದೆ.

ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಸವರಾಜ ಪುಜಾರ ಅವರ ಕೃತಿಗಳ ಲೋಕಾರ್ಪಣೆ ಜರುಗಲಿದೆ.

ವಿಶೇಷತೆ ಅಂದ್ರೆ ಸಾಹಿತಿಯೊಬ್ಬರ ಏಕಕಾಲದಲ್ಲಿ 5 ಕೃತಿಗಳ ಲೋಕಾರ್ಪಣೆ.

ಇನ್ನೊಂದು ವಿಶೇಷ ಅಂದ್ರೆ 2000-21 ರ ಸಾಲಿನ ವಿದ್ಯಾರ್ಥಿಗಳ ಬಳಗ ಕೃತಿ ಲೋಕಾರ್ಪಣೆ ಮಾಡಲಿದೆ.

ಮತ್ತೊಂದು ವಿಶೇಷ ಅಂದ್ರೆ ಅದೇ 2000-21 ರ ಸಾಲಿನ ವಿದ್ಯಾರ್ಥಿಗಳ ಬಳಗದವರು ಕೃತಿಗಳ ಕುರಿತು ಮಾತನಾಡಲಿದ್ದಾರೆ.

ಲೋಕಾರ್ಪಣೆಗೊಳ್ಳಲಿರುವ 5 ಕೃತಿಗಳು

1. ಕೊಪ್ಪಳ ಜಿಲ್ಲೆಯ ಕೋಮು ಸೌಹಾರ್ದ ತಾಣಗಳು - ಇದು ಜಿಲ್ಲೆಯ ಸೌಹಾರ್ದ ಪರಂಪರೆಯ ತಾಣಗಳ ಇತಿಹಾಸ ತಿಳಿಸುವ ಮಾರ್ಗದರ್ಶಿ ಮತ್ತು ಮಹತ್ವದ ಕೃತಿ.
2. ಮೌನದೊಳಗಿನ ಮಾತು- ಕವನ ಸಂಕಲನ
3.ಕಾಲ್ನಡಿಗೆ- ಲೇಖನಗಳ ಮಾಲೆ 
4. ಮಾತೆಂಬುದು ಮಕರಂದ
5. ಹಿತ್ತಲ ಗಿಡ ಮದ್ದು- ಪಾರಂಪರಿಕ ಔಷಧಿಗಳ ಕುರಿತ ಕೃತಿ.

ಕಾರ್ಯಕ್ರಮ ಉದ್ಘಾಟಿಸುವವರು ಉದ್ಯಮಿ ಬಸವರಾಜ ಗೌರಾ, ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ ಅತಿಥಿಯಾಗಿ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಗೌಡ ಪಾಟೀಲ್ ಹಲಗೇರಿ ವಹಿಸುವರು.

ಕೃತಿಗಳನ್ನು ಲೋಕಾರ್ಪಣೆಗೊಳಿಸುವವರು
1. ರಾಘವೇಂದ್ರ 
2. ಮುತ್ತುರಾಜ ಕುಷ್ಟಗಿ ನಗರಸಭೆ ಸದಸ್ಯರು
3. ಅಮರೇಶ ಉಪಲಾಪುರ ತಾ.ಪಂ.ಮಾಜಿ ಅಧ್ಯಕ್ಷರು
4. ಆರ್.ಸಿ.ಪಾಟೀಲ್
5. ವೀರನಗೌಡ ಪೋತ್ನಾಲ್ ವಕೀಲರು ಮಾನವಿ.

ಕೃತಿಗಳ ಕುರಿತು ಮಾತನಾಡುವವರು
1. ಶಂಕ್ರಯ್ಯ ಅಬ್ಬಿಗೇರಿಮಠ
2.ಮಂಜುನಾಥ ಡೊಳ್ಳಿನ
3. ಮಂಜುನಾಥ ದಿಮ್ಮಕ್ಕನವರ
4. ಗವಿಸಿದ್ದಪ್ಪ ದೊಡ್ಡಮನಿ
5. ಶ್ರೀಮತಿ ಬೇಬಿ

ಕಾರ್ಯಕ್ರಮ ಬೆಳಗ್ಗೆ 10.30 ಕ್ಕೆ ಕೊಪ್ಪಳದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಜರುಗಲಿದೆ. ಡಾ.ಬಸವರಾಜ ಪುಜಾರ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ
Jun 22 2025 9:17AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ SDPI ಸಂಸ್ಥಾಪನಾ ದಿನಾಚರಣೆ : ರಕ್ತದಾನ ಶಿಬಿರ
Jun 20 2025 12:02PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಚೈನ್ ಲಿಂಕ್ ಕಂಪನಿ ಸಿಬ್ಬಂದಿಯಿಂದ ಹಲ್ಲೆ : ದೂರು ದಾಖಲು





     
Copyright © 2021 Agni Divya News. All Rights Reserved.
Designed & Developed by We Make Digitize