ಕೊಪ್ಪಳ : ಕಳೆದ ವರ್ಷ ಬೆಳಗಾವಿ ಅಧಿವೇಶನ ಸಂದರ್ಭ 2 A ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಡಿ. 10 ನ್ನು 'ಲಿಂಗಾಯತರ ಮೇಲಿನ ದೌರ್ಜನ್ಯ ದಿನ ' ಎಂದು ಆಚರಿಸಲು ಲಿಂಗಾಯತ ಪಂಚಮಸಾಲಿ ಸಮುದಾಯ ನಿರ್ಧರಿಸಿದೆ.
ಈ ಬಗ್ಗೆ ರವಿವಾರ ಕೊಪ್ಪಳದಲ್ಲಿ ಜಯಮೃತ್ಯುಂಜಯ ಸ್ವಾಮಿಜಿಯವರು ನಡೆಸಿದ ಸಭೆಯಲ್ಲಿ ನಿರ್ಧಾರ ಪ್ರಕಟವಾಗಿದೆ.
ಈ ಕುರಿತು ಪಂಚಸೇನಾ ಸಂಘಟನೆ ಕಲ್ಯಾಣ ಕರ್ನಾಟಕದ ಮಾಧ್ಯಮ ವಕ್ತಾರ ರವೀಂದ್ರ ತೋಟದ ಪತ್ರಿಕಾ ಪ್ರಕಟಣೆ ನೀಡಿದ್ದು ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ನಡೆಸಿದ್ದ ಲಾಠಿ ಪ್ರಹಾರ ಖಂಡಿಸಿ ಇದೆ ಡಿ. 10 ರಂದು ಬೆಳಗಾವಿಯಲ್ಲಿ ಬಾಯಿ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಒಂದು ದಿನದ ಮೌನ ಪ್ರತಿಭಟನೆ ಮಾಡಲಾಗುತ್ತದೆ.
ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಪಂಚ ಸೇನಾ ರಾಜ್ಯ ಅಧ್ಯಕ್ಷರು ರುದ್ರಗೌಡ ಸೊಲಬಗೌಡ್ರ, ಜಿಲ್ಲಾ ಅಧ್ಯಕ್ಷರು ವಿಶ್ವನಾಥ ಮರಿಬಸಪ್ಪನವರ, ಬಸವಲಿಂಗಪ್ಪ ಭೂತೆ, ಶಿವಶರಣಪ್ಪ ಶಿವಪೂಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷರು ಬಸನಗೌಡ ತೊಂಡಿಹಾಳ, ತಾಲೂಕು ಅಧ್ಯಕ್ಷರು ಕರಿಯಪ್ಪ ಮೇಟಿ ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ವೀರಣ್ಣ ಅಣ್ಣಿಗೇರಿ, ಸುರೇಶಗೌಡ್ರ ಶಿವನಗೌಡ್ರ, ಹಾಗೂ ಏಳು ತಾಲೂಕಿನ ಪಂಚಸೇನಾ ಅಧ್ಯಕ್ಷರು ಉಪಸ್ಥಿತರಿದ್ದರು.