ಕೊಪ್ಪಳ : ತಾಲೂಕಿನ ಕುಣಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ ಕಟ್ಟಮನಿ, ಉಪಾಧ್ಯಕ್ಷರಾಗಿ ಯಮನೂರಪ್ಪ ಚಂಗೂಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಗುರುವಾರ ನಡೆದ ಚುನಾವಣೆ ಪ್ರಕ್ರಿಯೆ ಸಂಧರ್ಭದಲ್ಲಿ ನಿರ್ದೇಶಕರಾದ ಶಿವಕುಮಾರ ಏಣಿಗಿ, ಸಿದ್ದನಗೌಡ ಮಾಲಿಪಾಟೀಲ, ಮಾರುತಿ ಕುರುಬರ, ಅಡಿವಪ್ಪ ತಳವಾರ, ಲಕ್ಷ್ಮಣ ಬೆಣಕಲ್, ಶೇಖರಪ್ಪ ಬುರುಡಿ, ರಾಮಣ್ಣ ಹರಿಜನ, ನಿಂಗಪ್ಪ ಕರ್ಕಿಹಳ್ಳಿ, ಶ್ರೀಮತಿ ಶ್ರೀದೇವಿ ಶರಣಬಸಪ್ಪ ಕುಂಬಾರ್ ಹಾಗೂ ಶ್ರೀಮತಿ ರಾಮವ್ವ ಮರಿಯಪ್ಪ ಬಾಳಮ್ಮನವರ್ ಉಪಸ್ಥಿತರಿದ್ದರು.
ಚುನಾವಣಾ ಪ್ರಕ್ರಿಯೆಯನ್ನು ಮುಖ್ಯ ಕಾರ್ಯನಿರ್ವಾಹಕರಾದ ಶಿವಕುಮಾರ್ ಕುರುಬರ, ಚುನಾವಣಾ ಅಧಿಕಾರಿಯಾಗಿ ಶ್ರೀ ಅನಿಲಕುಮಾರ ಬಬಲಾದ ಯಶಸ್ವಿಯಾಗಿ ನೆರವೇರಿಸಿದರು.
ಹೊಸ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯ ಬಳಿಕ ಸದಸ್ಯರು, ಊರಿನ ಗಣ್ಯರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.