ಕೊಪ್ಪಳ ಹತ್ತಿರ ವಿಸ್ತರಣೆಯ ಕಾರಣಕ್ಕೆ ಹಾಗೂ ಪರಿಸರಕ್ಕೆ ಮಾರಕ ಆಗುತ್ತದೆ ಎಂದು ಜನರ ಪ್ರತಿಭಟನೆಯಿಂದ ರಾಜ್ಯದ ತುಂಬ ಗಮನ ಸೆಳೆದಿರುವ ಬಲ್ಡೋಟಾ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕ ಸಾವಿಗೀಡಾದ ಘಟನೆ ನಡೆದಿದೆ.
ಮೃತ ಪಟ್ಟ ಕಾರ್ಮಿಕ ಕಿನ್ನಾಳ ಮೂಲದ ವೀರೇಶ ಶರಣಪ್ಪ ಕುಂಬಾರ (40) ಎಂದು ತಿಳಿದು ಬಂದಿದೆ. ಇಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಕೆಳಗೆ ಬಿದ್ದಿದ್ದ ವೀರೇಶ ಆಸ್ಪತ್ರೆಗೆ ಸೇರಿಸೋ ಮಾರ್ಗ ಮದ್ಯೆ ಸಾವಿಗೀಡಾಗಿದ್ದಾನೆ.
ಆದರೆ ಕಾರ್ಖಾನೆಯವರು ವೀರೇಶನ ಕುಟುಂಬಸ್ಥರಿಗೆ ತಡವಾಗಿ ಮಾಹಿತಿ ನೀಡಿರುವುದು ಶಂಕೆಗೆ ಕಾರಣವಾಗಿದೆ.
ಮೃತ ವೀರೇಶ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು ಮೂಗಿನ ಎರಡೂ ಹೊಳ್ಳೆಗಳಿಂದ ರಕ್ತ ಸೋರಿದೆ. ಕೇವಲ ಒಂದು ತಿಂಗಳ ಹಿಂದೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದ ವೀರೇಶ್ ಕುಂಬಾರ ಕೆಲಸ ಮಾಡುವ ವೇಳೆ ಹೃದಯಾಘಾತ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ಪೋಸ್ಟ್ ಮಾರ್ಟಂ ವರದಿ ಏನು ಹೇಳುತ್ತೊ ಕಾಯ್ದು ನೋಡಬೇಕು.