ಕೊಪ್ಪಳ : ಕಾಲುವೆಗೆ ಈಜಲು ಹೋಗಿದ್ದ ಇಬ್ಬರು ಯುವಕರಲ್ಲಿ ಓರ್ವ ಯುವಕ ಕಾಣೆಯಾಗಿದ್ದಾನೆ. ಈ ಘಟನೆ ಗಂಗಾವತಿಯ ದಾಸನಾಳ ಸೇತುವೆ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಕೊಪ್ಪಳದ ಮಿಟ್ಟಿಕೇರಿಯ ಶರಣಬಸವ ಹಾಗೂ ಬ್ಯಾಳಿ ಓಷಿಯ ಮಂಜುನಾಥ ಪಲ್ಲೇದ ಇವರಿಬ್ಬರು ಈಜಲು ಕಾಲುವೆಗೆ ಹೋಗಿದ್ದರು. ಈಜುವಾಗ ಇಬ್ಬರಲ್ಲಿ ಮಂಜುನಾಥ ಕಾಣೆಯಾಗಿದ್ದು ಶರಣಬಸವ ಈಜಿ ದಡ ಸೇರಿದ್ದಾನೆ.
ಈಜಲೆಂದು ಕಾಲುವೆಗೆ ಹೋದ ಮಂಜುನಾಥ ಕಾಲುವೆಯಲ್ಲಿನ ನೀರಿನ ರಭಸಕ್ಕೆ ಈಜಲಾಗದೆ ಕಾಲುವೆಯಲ್ಲಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕಾಲುವೆಯಲ್ಲಿ ಕಾಣೆಯಾಗಿರುವ ಯುವಕ ಮಂಜುನಾಥನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ತೀವ್ರ ಹುಡುಕಾಟ ನಡೆಸಿದ್ದಾರೆ.