ಕೊಪ್ಪಳ : ಜಾತಿಗಣತಿಯಲ್ಲಿ ಪಂಚಮಸಾಲಿ ಸಮುದಾಯ ವೀರಶೈವ ಆಥವಾ ಲಿಂಗಾಯತ ಬರೆಸುವ ಗೊಂದಲ ಸೆ. 17 ರಂದು ಪರಿಹಾರ ಆಗಲಿದೆ.
ಈ ಕುರಿತು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಶುಕ್ರವಾರ ಕೊಪ್ಪಳದಲ್ಲಿ ಮಾತನಾಡಿದರು.
ಸರಕಾರ ಬಿಡುಗಡೆ ಮಾಡಿರುವ 1561 ಜಾತಿಗಳ ಪಟ್ಟಿಯಲ್ಲಿ ಒಂದೆಡೆ ಲಿಂಗಾಯತ ಪಂಚಮಸಾಲಿ, ಇನ್ನೊಂದೆಡೆ ವೀರಶೈವ ಪಂಚಮಸಾಲಿ ಇದೆ. ಜಾತಿಗಣತಿಯಲ್ಲಿ ಏನೆಂದು ಬರೆಸುವ ಬಗ್ಗೆ 18 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ಇವತ್ತು ಕೊಪ್ಪಳ 12 ನೇ ಜಿಲ್ಲೆ ಭೇಟಿ.
ಇಲ್ಲಿಯೂ ಭಕ್ತರ ಅಭಿಪ್ರಾಯಗಳನ್ನು ವಿಡಿಯೋ ಮತ್ತು ಬರಹದ ಮೂಲಕ ದಾಖಲಿಸಿಕೊಂಡಿದ್ದು ಸೆ. 17 ರಂದು ಬೆಂಗಳೂರಿನಲ್ಲಿ ಪೀಠಾಧೀಶರು, ಸಮುದಾಯದ ರಾಜ್ತಾಧ್ಯಕ್ಷರು ಸೇರಿದಂತೆ ಅನೇಕ ಗಣ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಅಂದಿನ ನಿರ್ಣಯದಂತೆ ಸಮುದಾಯದವರು ಜಾತಿಗಣತಿಯಲ್ಲಿ ಬರೆಸುತ್ತಾರೆ ಎಂದು ವಚನಾನಂದ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.