Advt. 
 Views   1340

ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಮನವಿ

May 31, 2025, 08:55 PM IST
ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಮನವಿ

ಕೊಪ್ಪಳ : ಹುಟ್ಟಿದಾಗಿನಿಂದ ಈವರೆಗೆ ಎರಡೂ ಕಿಡ್ನಿಗಳ ಬೆಳವಣಿಗೆ ಸರಿಯಾಗಿ ಆಗದೆ ಬದುಕಲು ಕಷ್ಟ ಪಡುತ್ತಿರುವ 20 ವರ್ಷದ ಯುವಕನಿಗೆ ಈಗ ಬೇರೆ ಕಿಡ್ನಿ ಅಳವಡಿಸಲು ಬೇಕಾಗುವ ವೈದ್ಯಕೀಯ ಖರ್ಚಿಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾನೆ. 

ಶುಕ್ರವಾರ ಮಾಧ್ಯಮಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಂಡ ತಾಲೂಕಿನ ಚಿಲವಾಡಗಿ  ಗ್ರಾಮದ ಯುವಕ ಪರಶುರಾಮ ಕಂಬಳಿ. 

ತಂದೆ ಶೇಖರಪ್ಪ , ತಾಯಿ ಶಂಕ್ರಮ್ಮ ಕಷ್ಟಗಳ ಮಧ್ಯೆ ಪರಶುರಾಮನನ್ನು ಐಟಿಐ ಓದಿಸಿದ್ದಾರೆ. ಒಂದೂವರೆ ವರ್ಷದ ಹಿಂದಿನವರೆಗೂ ಆಗಾಗ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತಿತ್ತು.  ಕಾಮಣಿಯಾಗಿದೆ ಎಂದು ಅನೇಕ ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋದಾಗ ಕಿಡ್ಡಿಗಳು ಸರಿಯಾಗಿ ಬೆಳವಣಿಗೆಆ ಗಿಲ್ಲ ಎಂಬುದು 2024 ಜನವರಿಯಲ್ಲಿ ಗೊತ್ತಾಗಿದೆ. 

 ಈಗಾಗಲೆ  ಪರಶುರಾಮನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು  ಅದಕ್ಕಾಗಿ ಒಂದು ಎಕರೆ ಹೊಲವನ್ನು ಮಾರಿದ್ದಾರೆ ಪರಶುರಾಮನ ತಂದೆ.

 ಮಗ ಪರಶುರಾಮನನ್ನು ಉಳಿಸಿಕೊಳ್ಳುವ ಛಲದಿಂದ ತಂದೆ ಶೇಖರಪ್ಪ ತಮ್ಮ ಕಿಡ್ನಿ ಮಗನಿಗೆ ನೀಡಲು ರೆಡಿಯಾಗಿದ್ದಾರೆ. ಕಿಡ್ನಿ ಅಳವಡಿಸಿ ಸೇರಿ ಎಲ್ಲ ರೀತಿಯ ಚಿಕಿತ್ಸೆಗೆ ಸುಮಾರು 13-15 ಲಕ್ಷ ರೂಪಾಯಿ ವೆಚ್ಚ ಆಗಲಿದೆ. 

 ಅದಕ್ಕೆ ತಂದೆ ತಾಯಿ ಸಹೋದರನ ಜೊತೆ ಮಾಧ್ಯಮಗಳ ಮುಂದೆ ಆಗಮಿಸಿ ಸಾರ್ವಜನಿಕರು ದಾನಿಗಳಿಂದ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ.

ಅಕೌಂಟ್ ಹೆಸರು : ಬಸವರಾಜ ( ಪರಶುರಾಮನ ಅಣ್ಣ ) ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಇಂಡಿಯಾ ಕೊಪ್ಪಳ ಅಕೌಂಟ್ ನಂ :  847510110011466
 IFSC ಕೋಡ್ BKID0008475 
Phone pay :  9113521147



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Feb 15 2026 6:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫೆ. 24 ಕೊಪ್ಪಳ ಬಂದ್ ಹೋರಾಟ : ಗವಿಶ್ರಿಯವರ ಭೇಟಿಯಾದ ನಿಯೋಗ
Feb 14 2026 5:49AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗಮನ ಸೆಳೆದ ಮಾಸ್ತಿ ಶಾಲೆಯ ಸೈನ್ಸ್ ಫೆಸ್ಟ್
Feb 14 2026 4:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬಿಜೆಪಿ ಮಂಡಲಗಳಿಗೆ ಹೊಸ ಅಧ್ಯಕ್ಷರು
Feb 13 2026 6:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫೆ 24 ಕೊಪ್ಪಳ ಭಾಗ್ಯನಗರ ಬಂದ್
Feb 12 2026 7:02AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ವಿವಾಹ ಪ್ರೋತ್ಸಾಹಧನ 7.77 ಕೋಟಿ ಬಾಕಿ
Feb 12 2026 4:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ದೇಶಾದ್ಯಂತ ಕಾರ್ಮಿಕರ ಮುಷ್ಕರ : ಕೊಪ್ಪಳದಲ್ಲೂ ಬೃಹತ್ ಪ್ರತಿಭಟನೆ
Feb 11 2026 6:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಶಾಸಕರು ರಾಘವೇಂದ್ರ ಹಿಟ್ನಾಳ ₹1 ಕೋಟಿ ಅನುದಾನ
Feb 9 2026 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಾಂಧಿ ಟೋಪಿ ದೇಶೀ ಊಟ ಸಂಸ್ಕೃತಿಯ ಘಮ
Feb 9 2026 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಾಂಧಿ ಟೋಪಿ ದೇಶೀ ಊಟ ಸಂಸ್ಕೃತಿಯ ಘಮ
Feb 7 2026 6:44AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಾಳೆ ತೋಟದಲ್ಲಿ ಬೆಂಕಿ




Copyright © 2026 Agni Divya. All Rights Reserved.
Designed & Developed by We Make Digitize