Advt. 
 Views   1245
May 31 2025 8:44PM

ಜೂನ್ 2 ನಂತರ ಕುಡಿಯುವ ನೀರು ಪೋರೈಕೆ ಬಂದ್ ?


ಕೊಪ್ಪಳ : ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಒದಗಿಸುವುದು, ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಮಾಡುವ ನೌಕರರನ್ನು ವಿಶೇಷ ಪ್ರಕರಣ ಅಡಿಯಲ್ಲಿ ಖಾಯಂ ನೌಕರರನ್ನಾಗಿ ಖಾಯಂಗೊಳಿಸುವುದು  ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಮುಷ್ಕರ ಆರಂಭಿಸಿದ್ದು ಬೇಡಿಕೆ ಈಡೇರದಿದ್ದರೆ ನೀರು ಸರಬರಾಜು ಕೂಡ ನಿಲ್ಲಿಸಲು ಯೋಚಿಸುತ್ತೇವೆ ಎಂದು ಪೌರಸೇವಾ ನೌಕರರ ಸಂಘದ ರಾಜ್ಯ  ಜಂಟಿ ಕಾರ್ಯದರ್ಶಿ ಲಾಲಸಾಬ ಮನಿಯಾರ ಹೇಳಿದರು. 

ಶನಿವಾರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ನಮ್ಮ ಯಾವುದೆ  ಬೇಡಿಕೆಗಳು 10 ವರ್ಷದಿಂದ ಈಡೇರಿಲ್ಲ. ಬರಿ ಭರವಸೆ ಸಿಗುತ್ತಿವೆ ಹೊರತು ಫಲ ಸಿಗುತ್ತಿಲ್ಲ. ರಾಜ್ಯ ಸರಕಾರಿ ನೌಕರರಿಗೆ ಕೊಡುವ ಸೌಲಭ್ಯಗಳು ಪೌರ ಸೇವಾ ನೌಕರರಿಗೂ ಕೊಡಬೇಕು.

 ಸ್ಥಳೀಯ ಸಂಸ್ಥೆಗಳಲ್ಲಿರುವ ದಿನಗೂಲಿ/ ಕ್ಷೇಮಾಭಿವೃದ್ದಿ ಅಧಿನಿಯಮದಡಿ ಇರುವ ನೌಕರರು ಹಾಗೂ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಎಲ್ಲ ವೃಂದದ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಬೇಕು. 

ಪಟ್ಟಣ ಪಂಚಾಯತಿ,  ಪುರಸಭೆಗಳಲ್ಲಿ ಶೇ ನೂರರಷ್ಟು ನೌಕರರನ್ನು ಖಾಯಂಗೊಳಿಸಲಾಗಿದೆ. ಆದರೆ ನಗರಸಭೆಗಳಲ್ಲಿ ಶೇ. 50ರಷ್ಟು ನೌಕರರನ್ನು ಖಾಯಂಗೊಳಿಸಲಾಗಿದೆ.  

ಕೊಪ್ಪಳದಲ್ಲಿ 1970 ರಿಂದ ವಾಟರ್ ಮ್ಯಾನ್ ಗಳನ್ನು ಖಾಯಂ ಆಗಿ ನೇಮಿಸಿಕೊಂಡಿಲ್ಲ. ಸ್ವಚ್ಛತಾ ಕಾರ್ಯದ ವಾಹನ ಚಾಲಕರಿಗೆ ನಗರಸಭೆಯಿಂದ ಸಂಬಳ ನೇರ ಪಾವತಿ ಆಗಬೇಕು.

 ನಾವು ಈಗ ಸ್ವಚ್ಛತಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೋಮವಾರದ ಅಂದ್ರೆ ಜೂನ್ 2 ರ ನಂತರ ರಾಜ್ಯ ಸಂಘದ ಆದೇಶದ ಬಂದ ನಂತರ ಕುಡಿಯುವ ನೀರಿನ ಸರಬರಾಜು ಕೂಡ ನಿಲ್ಲಿಸಬೇಕಾಗುತ್ತದೆ ಇದು ಅನಿವಾರ್ಯ. ಅದಕ್ಕೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಲಾಲಸಾಬ್ ಮುನಿಯಾರ ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಪೌರ ಸೇವಾ ನೌಕರರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಅಖ್ತರ್ ಅಲಿ,  ರಾಜ್ಯ ಪರಿಷತ್ ಸದಸ್ಯರಾದ ವಸಂತ ಬೆಲ್ಲದ ಜಿಲ್ಲಾ ಉಪಾಧ್ಯಕ್ಷರಾದ ಉಪೇಂದ್ರ , ಜಿಲ್ಲಾ ಖಜಾಂಚಿಯಾದ ರಾಜ್ ಮಹಮ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ





     
Copyright © 2021 Agni Divya News. All Rights Reserved.
Designed & Developed by We Make Digitize