Advt. 
 Views   1922

ಕೊಪ್ಪಳ : ಪತ್ನಿ ಕೊಂದು ಪತಿ ಪರಾರಿ

May 30, 2025, 10:58 AM IST
ಕೊಪ್ಪಳ : ಪತ್ನಿ ಕೊಂದು ಪತಿ ಪರಾರಿ

ಕೊಪ್ಪಳ : ಪತ್ನಿ ಬಗ್ಗೆ ಅನುಮಾನದ ರೋಗ ಹೊಂದಿದ್ದ ಪತಿ 
ಪತ್ನಿಯ ಕತ್ತು ಹಿಸುಕಿ ಕೊಲೆ‌ ಮಾಡಿ ಪರಾರಿಯಾದ ಘಟನೆ ಗಂಗಾವತಿಯ ಮುರಾರಿ ನಗರದಲ್ಲಿ ನಡೆದಿದೆ.

ಲಕ್ಷ್ಮಿ (35) ಗಂಡನಿಂದ ಕೊಲೆಯಾದ ದುರ್ದೈವಿ. ಭೀಮೇಶ ಕೊಲೆ ಮಾಡಿ ಪರಾರಿಯಾದ ಪಾಪಿ ಪತಿ.

ಭೀಮೇಶನ ಮೂಲ ಸಿಂಧನೂರಿನ ಹಟ್ಟಿ ವಿರುಪಾಪುರ. ಕೆಲ ವರ್ಷಗಳ ಹಿಂದೆ ಲಕ್ಷ್ಮಿ ಜೊತೆ ಮದುವೆಯಾಗಿದ್ದ. ನಂತರದ ದಿನಗಳಲ್ಲಿ ಪತ್ನಿ ಬಗ್ಗೆ ಅನುಮಾನ ಪಟ್ಟು ಹೊಡೆಯೊದು ಬಡಿಯೊದು ಮಾಡುತ್ತಿದ್ದ. ಈ ಹಿಂದೆ ಎರಡು ಬಾರಿ ಲಕ್ಷ್ಮಿಯ ಕೊಲೆಗೆ ಯತ್ನಿಸಿದ್ದ. ಆಗೆಲ್ಲ ನಾವು ತವರು ಮನೆಗೆ ಕರಕೊಂಡು ಬಂದಿದ್ವಿ. ಮತ್ತೆ ಗಂಡನ ಮನೆಗೆ ಹೋದ ಮಗಳಿಗೆ ಮತ್ತೆ ಕಿರುಕುಳ ಕೊಡತೊಡಗಿದ. ತಿಂಗಳ ಹಿಂದೆ ಮತ್ತೆ ಮಗಳನ್ನು ತವರಿಗೆ ಕರಕೊಂಡು ಬಂದ್ವಿ. ಈ ಸಲ ಭೀಮೇಶನನ್ಜು ಮನೆಗೆ ಕರಕೊಬೇಡ ಅಂದ್ರೂ ಮಗಳು ಕರಕೊಂಡ್ಲು. ಮಲಗಿದಾಗ ಅವನು ಕೊಂದು ಪರಾರಿಯಾಗಿದ್ದಾನೆ ಎಂದು ಲಕ್ಷ್ಮಿ ತಾಯಿ ರೋಧಿಸುತ್ತಿದ್ದಾರೆ.

ಮಗಳನ್ನು ಕೊಂದವನನ್ನು ಬಿಡಬೇಡಿ ಶಿಕ್ಷೆ ಕೊಡಿಸಿ ಎಂದು ಲಕ್ಷ್ಮಿ ತಾಯಿ ಪೊಲೀಸರಿಗೆ ಮನವಿ ಮಾಡಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Apr 13 2026 8:34AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಸ್ತೆ ಬದಿ ಯುವಕರಿಬ್ಬರ ಶವ ಪತ್ತೆ
Apr 11 2026 4:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ನಗರ ಬಿಜೆಪಿ ಮಂಡಲಕ್ಕೆ ನೂತನ ತಂಡ ಪ್ರಕಟ
Apr 11 2026 3:44AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಧ್ಯರಾತ್ರಿ ಹೊತ್ತಿನಲ್ಲಿ 10 ಹಂದಿ ಕಳ್ಳತನ
Apr 9 2026 6:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಾಲೇಜಿಗೆ ಹೆಮ್ಮೆ ತಂದ ಫಲಿತಾಂಶ
Apr 9 2026 5:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ SVC ಕಾಲೇಜು : ಮೊದಲ ಬ್ಯಾಚಿನ ಫಲಿತಾಂಶ ತಾಲೂಕಿಗೆ ಟಾಪ್
Apr 9 2026 6:49AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ತೀರದಲ್ಲಿ ಅಕ್ರಮ ಮರಳು ದಂಧೆ : ಜನರ ಆಕ್ರೋಶ
Apr 7 2026 7:22AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಿಂದಿ ಪರ ರಾಜ್ಯಪಾಲರು : ಕರವೇ ಆಕ್ರೋಶದ ಪ್ರತಿಭಟನೆ
Apr 6 2026 9:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಹಕ್ಕೊತ್ತಾಯ
Apr 6 2026 6:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಂಪಿ ಪ್ರಾಧಿಕಾರದಿಂದ ಮುಕ್ತಿ ಕೊಡಿ : ಕೊಪ್ಪಳದಲ್ಲಿ ಆಗ್ರಹ
Apr 4 2026 8:52AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಂಚಕ್ಕೆ ಕೈ ಚಾಚಿದ ಪೊಲೀಸರು ಲೋಕಾಯುಕ್ತರ ಬಲೆಗೆ




Copyright © 2026 Agni Divya. All Rights Reserved.
Designed & Developed by We Make Digitize