Advt. 
 Views   246
Mar 24 2025 7:49PM

ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ


ಕೊಪ್ಪಳ : ಈ ಸಲದ ಬೇಸಿಗೆಯಲ್ಲಿ ಬಿಸಿಲಿನ ತಾಪ ದಿನೇ ದಿನೆ ಹೆಚ್ಚುತ್ತಿದ್ದು ನಗರದ ಟ್ರಾಫಿಕ್ ಸಿಗ್ನಲ್ ನ ನಾಲ್ಕೂ ರಸ್ತೆಗಳಲ್ಲಿ ನೆರಳಿನ ಪರದೆ ಹಾಕುವಂತೆ ಕೊಪ್ಪಳ ಜೆಡಿಎಸ್ ನಗರ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ವಾಹನಗಳ ದಟ್ಟಣೆ ವಿಪರೀತ ಇರುವ ಕೊಪ್ಪಳದಲ್ಲಿ ಬೇಸಿಗೆಯ ಈ ದಿನದಲ್ಲೂ ಟ್ರಾಫಿಕ್ ಸಿಗ್ನಲ್ ಕಾರ್ಯನಿರ್ವಹಿಸ ಬೇಕಿದೆ. ಈ ಮಾರ್ಚ್, ಏಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ತಾಪದಿಂದ ಸಂಚಾರವೆ ಕಷ್ಟ. ಬಿಸಿಲಿನ ಧಗೆ ಹೆಚ್ಚಾಗಿ ಮೈ ಮೇಲಿನ ಚರ್ಮ ಸುಟ್ಟು ಹೋಗುತ್ತಿದೆ. ಸಿಗ್ನಲ್ ನಲ್ಲಿ ಟೂ ವ್ಹಿಲರ್ ಸವಾರರು ಕನಿಷ್ಠ ಒಂದು ನಿಮಿಷ ನಿಲ್ಲಬೇಕಾಗುತ್ತೆ. ಈ ಸಂದರ್ಭದಲ್ಲಿ ಬಿಸಿಲಿನ ಧಗೆ  ತಡೆದುಕೊಳ್ಳುವುದು ಅಸಾಧ್ಯ. 

ಹಾಗಾಗಿ ಸಿಗ್ನಲ್ ಇರುವ ಸರ್ಕಲ್ ನ  ಪ್ರತಿ ರಸ್ತೆಗೆ ಎತ್ತರದಲ್ಲಿ 100 ಮೀಟರ್ ಉದ್ದದಷ್ಟು  ನೆರಳಿನ ಪರದೆ ಹಾಕಿದರೆ ಬೈಕ್ ಸವಾರರಿಗೆ ಬಹಳ ಸಹಾಯ ಆಗುತ್ತೆ. ಕೂಡಲೇ ನೆರಳಿನ ಪರದೆ ಅಳವಡಿಸುವಂತೆ  ಜೆಡಿಎಸ್ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದೆ. 

ಈ ಸಂದರ್ಭದಲ್ಲಿ ( ಸಿ.ವಿ ಚಂದ್ರಶೇಖರ ರಾಜ್ಯ ಕೋರ್ ಸಮಿತಿ ಸದಸ್ಯರು ಇವರ ನಿರ್ದೇಶನದಂತೆ) ಕೊಪ್ಪಳ  ಜೆಡಿಎಸ್  ಜಿಲ್ಲಾ ಮುಖಂಡ  ಮಂಜುನಾಥ್ ಸೋರಟೂರ, ರಮೇಶ್ ಡಂಬ್ರಳ್ಳಿ,  ಜೆಡಿಎಸ್ ನಗರ ಘಟಕದ ಅಧ್ಯಕ್ಷರು ಸೋಮನಗೌಡ ಹೊಗರನಾಳ ಮತ್ತು ತಾಲೂಕ ಎಸ್ ಟಿ ವಿಭಾಗದ ಅಧ್ಯಕ್ಷರು ಮಲ್ಲಪ್ಪ ವಾಲ್ಮೀಕಿ, ಜೆಡಿಎಸ್ ಮುಖಂಡ ಸಂಜೀವಗೌಡ ಪೊಲೀಸ್ ಪಾಟೀಲ್, ಮಂಜುನಾಥ್ ಮಾಲಿ ಪಾಟೀಲ್, ಸಿದ್ದನಗೌಡ ಮಾಲಿ ಪಾಟೀಲ್ ಹಾಗೂ ಸಿರಾಜ್ ಕೋಲ್ಕಾರ್ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Apr 18 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸ್ವರ್ಣ ಜುವೇಲರ್ಸ್ ಆರಂಭ : ಆಭರಣ ಖರೀದಿಗೆ ವಿಶೇಷ ರಿಯಾಯಿತಿ
Apr 18 2025 7:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಿಡಿಲಿಗೆ 35 ಕುರಿಗಳು ಸಾವು
Apr 17 2025 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲೆ : 24 ಗಂಟೆಯಲ್ಲಿ ಪ್ರತ್ಯೇಕ ದುರ್ಘಟನೆಗಳು
Apr 16 2025 9:02PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಾನಪದ ಅಕಾಡೆಮಿಯಿಂದ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮ
Apr 16 2025 8:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕನ್ನಡ ಚಲನಚಿತ್ರ ಕೋರ ಎಪ್ರಿಲ್ 18 ಕ್ಕೆ ಬಿಡುಗಡೆ
Apr 16 2025 5:28PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಎಪ್ರಿಲ್ 20 ಕ್ಕೆ ಕೊಪ್ಪಳ ಕಿರು ಜಾತ್ರೆ - 2
Apr 16 2025 4:12PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಮತ್ತೆ ಅಗ್ನಿ ಅವಘಡ
Apr 15 2025 9:20PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಎಪ್ರಿಲ್ 20 ರಂದು ಉಚಿತ ಖತ್ನಾ ಶಿಬಿರ
Apr 14 2025 11:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಇಬ್ಬರು ಬಾಲಕರ ಮೇಲೆ ನಾಯಿ ದಾಳಿ
Apr 12 2025 10:26PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೆಂಕಿ ಹಚ್ಚಿಕೊಂಡಿದ್ದ ತಾಯಿ ಮಗಳು ಸಾವು





     
Copyright © 2021 Agni Divya News. All Rights Reserved.
Designed & Developed by We Make Digitize