Advt. 
 Views   75
Feb 6 2025 8:47PM

ಕೊಪ್ಪಳ : ರೈತ ವಿರೋಧಿ ಮೂರು ಕಾಯ್ದೆ ವಾಪಸ್ ಪಡೆಯದ ರಾಜ್ಯ ಸರಕಾರ


ಕೊಪ್ಪಳ :  ರೈತರಿಗೆ ವಿರೋಧಿ  ಮೂರು ಕರಾಳ ಕಾಯ್ದೆ ಕೇಂದ್ರ ಸರಕಾರ ವಾಪಸ್ ಪಡೆದಿದ್ದರೂ ಆ ಕಾಯ್ದೆಯನ್ನು ರಾಜ್ಯದ ಸಿದ್ದರಾಮಯ್ಯ ಸರಕಾರ ಹಿಂಪಡೆದಿಲ್ಲ. ರಾಜ್ಯ ಸರಕಾರಕ್ಕೆ  ಇಚ್ಛಾಶಕ್ತಿ ಕೊರತೆ ಇದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ . ಹಿರೇಮಠ ಹೇಳಿದರು.

ಗುರುವಾರ ಕೊಪ್ಪಳದಲ್ಲಿ ಮಾತನಾಡಿದ ಅವರು  ರಾಜ್ಯ ಸರಕಾರ ಜನಪರವಾಗಿಲ್ಲ.  ವಿಧಾನಸಭೆ ಚುನಾವಣೆ ಸಂದರ್ಭ ಅಧಿಕಾರಕ್ಕೆ ಬಂದರೆ ಮೂರು ಕರಾಳ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರು. ನಂತರ ಲೋಕಸಭಾ ಚುನಾವಣೆ ಮುಗಿಯಲಿ ಎಂದರು ಈವರೆಗೆ ಕಾಯ್ದೆ ಹಿಂಪಡೆಯದ ಹಿನ್ನೆಲೆಯಲ್ಲಿ ಹೋರಾಟ ರೂಪಿಸುತ್ತೇವೆ ಎಂದರು.

ಕುಮಾರಸ್ವಾಮಿ ಕುಟುಂಬದವರು ಕೇತನಗಾನಹಳ್ಳಿಯ 71 ಎಕರೆ  ಗೋಮಾಳ ಭೂಮಿ ಕಬಳಿಸಿದ್ದಾರೆ. ಕುಮಾರಸ್ವಾಮಿ ಹಾಗೂ ಅವರ ಚಿಕ್ಕಮ್ಮ. ಮಂಜುನಾಥ. ಬೀಗರಾದ ಡಿ ಸಿ ತಮ್ಮಣ್ಣ ಹಾಗು ಕುಟುಂಬದವರು ಕಬಳಿಸಿರುವ ಭೂಮಿ ಬಗ್ಗೆ  ಹೈಕೋರ್ಟ್ ನಲ್ಲಿ ಸಿವಿಲ್ ದಾವೆ ಹೂಡಲಾಗಿದೆ. ರಾಜ್ಯ ಸರಕಾರ ಹೈಕೋರ್ಟ್ ಗೆ ಸೂಕ್ತ ದಾಖಲೆ ಒದಗಿಸಿ ಹೆಚ್ ಡಿಕೆ ಕುಟುಂಬ ಕಬಳಿಸಿದ ಭೂಮಿ ಹಿಂಪಡೆಯಬೇಕು.

ಡಿ ಕೆ ಶಿವಕುಮಾರ  ಸಿಎಂ ಆಗಬಾರದು. ಅವರು  ಬೆನಗಾನಹಳ್ಳಿಯಲ್ಲಿ ಎಸ್ ಎಂ ಕೃಷ್ಣ ಸರಕಾರದ ಅವಧಿಯಲ್ಲಿ ನಗರಾಭಿವೃದ್ದಿ ಸಚಿವರಾಗಿ 4.20 ಎಕರೆ ಭೂಮಿ ಕಬಳಿಸಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗ ಅದನ್ನು  ಡಿನೋಟಿಫೈ ಮಾಡಲಾಗಿದೆ. ಈ ಕುರಿತು ನಾಳೆ  ಫೆ. 7 ರಂದು  ಸುಪ್ರೀಂ ಕೋರ್ಟ್ ನಲ್ಲಿ ಹಿಯರಿಂಗ್ ಇದೆ. ಈಗ  ಭೂ ಕಬಳಿಕೆಯಲ್ಲಿ ಮೂರು ಪಕ್ಷದ ಮುಖಂಡರು ಒಂದಾಗಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ರಾಷ್ಟ್ರೀಯ ಅರಣ್ಯ ನೀತಿಗಾಗಿ ಹೋರಾಟ ಮಾಡಿದ್ದೇವು  ಈಗ ಜಾರಿಗೆ ಬಂದಿದೆ. ಅದು ಅನುಷ್ಠಾನಗೊಳ್ಳಬೇಕು. ರಾಜಕಾರಣಿಗಳಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಅಧಿಕಾರದ ಬಗ್ಗೆ ಕಾಳಜಿ ಇದೆ ಎಂದು ಹಿರೇಮಠ ಹೇಳಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize