Advt. 
 Views   119
Feb 6 2025 8:30PM

ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಲಿ


ಕೊಪ್ಪಳ : ರಾಜ್ಯದಲ್ಲಿ ನಡೆದ  ಬಾಣಂತಿಯರ ಸಾವಿಗೆ ನ್ಯಾಯ ಸಿಗಬೇಕು ಎಂದು ಡ್ರಗ್ ಅಕ್ಷನ್ ಫೋರಂ ಸಾರ್ವತ್ರಿಕ ಆರೋಗ್ಯ ಕೇಂದ್ರ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯ ಡಾ. ಗೋಪಾಲ ದಾಬಡೆ ಹೇಳಿದರು.

ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಬಳ್ಳಾರಿ ಬಾಣಂತಿಯರ ಸಾವಿಗೆ ಔಷಧಿಯಲ್ಲಿದ್ದ ವಿಷದ ಅಂಶ ಕಾರಣ ಎಂದು  ಆರೋಗ್ಯ ಇಲಾಖೆ ಒಪ್ಪಿದೆ. ಔಷಧಿ ಸರಬರಾಜು ಮಾಡಿದ  ಪಶ್ಚಿಮ ಬಂಗಾಳದ ಕಂಪನಿಯಲ್ಲಿ ಅಸ್ವಚ್ಛತೆ ಕಾರಣದಿಂದ ಔಷಧಿಯಲ್ಲಿ ಕೆಟ್ಟ ಅಂಶಗಳು ಸೇರಿವೆ ಇದರಿಂದ ಬಾಣಂತಿಯರ ಸಾವು ಸಂಭವಿಸಿವೆ.

ಸರಕಾರ ಖರೀದಿಸುವ  ಔಷಧಿಯ ಪ್ರತಿ ಬ್ಯಾಚ್ ನ್ನು ಸಂಪೂರ್ಣ  ಕೆಎಸ್ ಎಂಸಿಎಲ್ ನವರು ಸರಿಯಾಗಿ ಪರೀಕ್ಷೆ ಮಾಡುತ್ತಿಲ್ಲ. ಕೆಎಸ್ಎಂಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದು  ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು.

ಸರಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೆ ಉಚಿತ ಮತ್ತು ಗುಣಮಟ್ಟದ ಔಷಧಿ ದೊರೆಯಬೇಕು.  ಸರಕಾರಿ ಆಸ್ಪತ್ರೆ ವೈದ್ಯರು ಔಷಧಿ ಹೊರಗಡೆ ಖರೀದಿಸಲು ಹೇಳಬಾರದು. ಸರಕಾರಿ ಆರೋಗ್ಯ ಸೇವೆ ಬಲಪಡಿಸಬೇಕು. 

ರಾಜಸ್ಥಾನದಲ್ಲಿ ಜಾರಿಯಾಗಿರುವ ಹೆಲ್ತ್ ರೈಟ್ ಆಕ್ಟ್ ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕು. ಆ ಕಾಯ್ದೆ ಪ್ರಕಾರ ರಾಜ್ಯದ ಯಾವುದೆ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ಅವರಿಗೆ ಔಷಧಿ ಉಪಚಾರ ಒದಗಿಸಬೇಕಾದ್ದು ಸರಕಾರದ ಕರ್ತವ್ಯ ಎಂದು ವೈದ್ಯ ದಾಬಡೆ ಹೇಳಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಪರಿವರ್ತನಾ ಸಮಿತಿಯ ಎಸ್. ಆರ್ . ಹಿರೇಮಠ,  ಮಂಜುಳಾ, ಗೋಪಕುಮಾರ ಕೆ ಎಂ. ಶೀಲಾ ಹಾಲ್ಕುರಿಕೆ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 10 2025 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದ - ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ





     
Copyright © 2021 Agni Divya News. All Rights Reserved.
Designed & Developed by We Make Digitize