Advt. 
 Views   217
Feb 5 2025 8:45PM

ಕೊಪ್ಪಳ : ದೇವಸ್ಥಾನ ಬಳಿ ನವಜಾತ ಶಿಶು ಪತ್ತೆ


ಕೊಪ್ಪಳ : ಕುಷ್ಟಗಿ ನಗರದ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ದೇವಸ್ಥಾನದ ಹತ್ತಿರ ಇಂದು (ಬುಧವಾರ) ಬೆಳಗ್ಗೆ ಆರೂವರೆ ಸುಮಾರಿಗೆ ಗಂಡು ನವಜಾತ ಶಿಶು ಪತ್ತೆಯಾಗಿದೆ.

ಕುಷ್ಟಗಿಯಿಂದ ಹೊಸಪೇಟೆ ಕಡೆ ಸಾಗುವ ಹೆದ್ದಾರಿ ಪಕ್ಕ ಇರುವ ಶ್ರೀ ತಾಯಮ್ಮದೇವಿ ದೇವಸ್ಥಾನದ ಹತ್ತಿರ ನವಜಾತ ಶಿಶು ಅನಾಥವಾಗಿ ಕಂಡು ಬಂದಿದೆ.

ದೇವಸ್ಥಾನದ ಸುತ್ತಲಿನ ಜಮೀನುಗಳ ರೈತರು ಕೂಡಲೇ  ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿಗೆ ಫೋನ್ ಮಾಡಿ ನವಜಾತ ಶಿಶು ಪತ್ತೆ ವಿಷಯ ತಿಳಿಸಿದ್ದಾರೆ. 

ನಂತರ ಎಎಸ್ಐ ಭರಮಪ್ಪ ಹಾಗೂ ಹೆದ್ದಾರಿ ಗಸ್ತು ವಾಹನ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಂಡು ನವಜಾತ ಶಿಶು ರಕ್ಷಣೆ ಮಾಡಿ ತಮ್ಮ ವಾಹನದಲ್ಲಿ ಕರೆದೊಯ್ದು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂದಾಜು 6 ರಿಂದ 8 ದಿನದ  ನವಜಾತ ಗಂಡು ಶಿಶು ಇದಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ವೇಳೆ ಶಿಶುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿ ಉಷ್ಣಾಂಶ ತೀರಾ ಕಡಿಮೆ ಇತ್ತು. ಕೂಡಲೇ ವೈದ್ಯರು ಶಿಶುವನ್ನು ವಾರ್ಮರ್ ರೂಮಿನಲ್ಲಿರಿಸಿ ಅಗತ್ಯ ಲಸಿಕೆ, ಪೌಷ್ಟಿಕಾಂಶ ನೀಡಿ ಔಷೋಧೋಪಚಾರ ಮಾಡಿದ್ದಾರೆ. 

ತೀರ ಬಳಲಿದ್ದ ಶಿಶುವಿಗೆ ಚೈತನ್ಯ ಬರಲು ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ತಾಯಿಯೊಬ್ಬರು ವಿನಂತಿ ಮೇರೆಗೆ ಶಿಶುವಿಗೆ ಎದೆ ಹಾಲುಣಿಸಿದ್ದಾರೆ. 

ಶಿಶು ಅಪಾಯದಿಂದ ಪಾರಾಗಿದ್ದು  ಕುಷ್ಟಗಿ ಆಸ್ಪತ್ರೆಯ ಮುಖ್ಯಸ್ಥರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಚಿಕ್ಕಮಕ್ಕಳ ರಕ್ಷಣಾ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಮಹಾಂತೇಶ ತಿಳಿಸಿದ್ದಾರೆ. 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ





     
Copyright © 2021 Agni Divya News. All Rights Reserved.
Designed & Developed by We Make Digitize